ಭೂ ತಾಯಿಗೆ ಚರಗದ ನಮನ
ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಹಸಿರ ಸಿರಿ ಇಮ್ಮಡಿಯಾಗಲಿ ಎಂದು ಬೇಡಿದರು
Team Udayavani, Jan 3, 2022, 6:02 PM IST
ಬಾಗಲಕೋಟೆ: ಉತ್ತರ ಕರ್ನಾಟಕದ ರೈತರು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುವ ಎಳ್ಳ ಅಮಾವಾಸ್ಯೆಯ ಚರಗ ಚೆಲ್ಲುವ ಸಂಭ್ರಮ ರವಿವಾರ ಎಲ್ಲೆಡೆ ಕಂಡು ಬಂತು.
ರವಿವಾರ ರಜೆಯೂ ಇದ್ದ ಕಾರಣ, ಇಡೀ ಕುಟುಂಬದ ಸಮೇತ ಮನೆಯಲ್ಲಿ ಸಜ್ಜೆ ರೊಟ್ಟಿ, ಮಡಿಕೆ ಕಾಳು ಪಲ್ಯ, ಶೇಂಗಾ ಹೋಳಿಗೆ ಹೀಗೆ ವಿವಿಧ ಮೃಷ್ಟಾನ್ನ ಭೋಜನ ತಯಾರಿಸಿ ಕಟ್ಟಿಕೊಂಡು ಕೆಲವರು ಎತ್ತಿನ ಬಂಡಿ, ಕಾರಿನಲ್ಲಿ ತಮ್ಮ ತಮ್ಮ ಹೊಲಕ್ಕೆ ತೆರಳಿದರು. ಕುಟುಂಬ ಸಮೇತ ಭೂಮಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಹಸಿರ ಸಿರಿ ಇಮ್ಮಡಿಯಾಗಲಿ ಎಂದು ಬೇಡಿದರು. ಬಳಿಕ ಕುಟುಂಬ ಸದಸ್ಯರು, ಬಂಧು-ಬಾಂಧವರೊಂದಿಗೆ ಹೊಲದಲ್ಲಿ ಸಿಹಿ ಭೋಜನ ಮಾಡಿದರು.
ಊಟ-ಸನ್ಮಾನ: ಮುಧೋಳ ತಾಲೂಕಿನ ಪ್ರಗತಿಪರ ಯುವ ರೈತ ಮಹಾಂತೇಶ ಯರಗಟ್ಟಿ ಹೊಲದಲ್ಲಿ ಎಳ್ಳ ಅಮಾವಾಸ್ಯೆಯನ್ನು ವಿಶೇಷವಾಗಿ ಆಚರಿಸಲಾಯಿತು. ಉತ್ತರಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿಯಿಂದ ಚರಗ ಚೆಲ್ಲಿ, ಸಿಹಿ ಭೋಜನ ಮಾಡುವ ಜತೆಗೆ 90 ವರ್ಷ ದಾಟಿದ ಹಿರಿಯ ದಂಪತಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್