ಕುಳಗೇರಿ ಕ್ರಾಸ್: ಜಾತ್ರಾ ಮಹೋತ್ಸವದ ಪ್ರಯುಕ್ತ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ
Team Udayavani, Apr 16, 2022, 12:32 PM IST
ಕುಳಗೇರಿ ಕ್ರಾಸ್ (ಜಿ.ಬಾಗಲಕೋಟೆ) : ಖಾನಾಪೂರ ಎಸ್ ಕೆ ಗ್ರಾಮದ ಗ್ರಾಮದೇವತೆ ಹೆಬ್ಬಳೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಬಯಲು ಜಂಗೀ ಕುಸ್ತಿ ಪಂದ್ಯಾವಳಿಯಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಕುಸ್ತಿ ಪಟುಗಳು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.
ಗ್ರಾಮದ ಜಮಿನಿನಲ್ಲಿ ಏರ್ಪಡಿಸಿದ್ದ ಕುಸ್ತಿ ಮೈದಾನದ ಸುತ್ತ ಎರಡು ಗಂಟೆಗೂ ಮುಂಚಿತವಾಗಿಯೇ ಜನಸ್ತೋಮ ಸೇರಿದ್ದರು. ಕುಸ್ತಿಯಲ್ಲಿ ಭಾಗವಹಿಸಲು ಬಂದಿದ್ದ ಕುಸ್ತಿ ಪಟುಗಳು ತಮಗೆ ಸರಿ-ಸಮಾನ ಕುಸ್ತಿ ಪಟುಗಳನ್ನು ಹುಡಕುತ್ತಿದ್ದರು.
ಪಂದ್ಯಾವಳಿಗೆ ಚಾಲನೆ ದೊರೆಯುತ್ತಿದ್ದಂತೆ ಕುಸ್ತಿ ಪಟುಗಳು ಅಖಾಡಕ್ಕಿಳಿದು ಸೆಣಸಿದರು. ಬೇರೆ ಬೇರೆ ಜಿಲ್ಲೆ ತಾಲೂಕಿನಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಮೊದಲದಿನ ನಡೆದ ಕುಸ್ತಿ ವೀಕ್ಷಣೆಗೆ ಜನಸ್ತೋಮ ಸೇರಿತ್ತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಸವರಾಜ ಕಟ್ಟಿಕಾರ, ಸದಸ್ಯರಾದ ಶೇಖಪ್ಪ ಪವಾಡಿನಾಯ್ಕರ, ಲಕ್ಷ್ಮಣ ದಾದನಟ್ಟಿ, ವೆಂಕಣ್ಣ ಹೊರಕೇರಿ, ಹನುಮಂತ ನರಗುಂದ, ಚುರ್ಚಪ್ಪ ಲೋಖಾಪೂರ, ಯಮನಪ್ಪ ಪೂಜಾರ, ಅಮೃತ ನಾಯ್ಕರ್, ಸುರೇಶ ಲೋಖಾಪೂರ, ಅಬ್ದುಲ್ ನದಾಫ್, ವೆಂಕಣ್ಣ ಲೋಕಾಪುರ, ಚುರ್ಚಪ್ಪ ಜಾಡರ, ಭೀಮಪ್ಪ ಚಿಚಗಂಡಿ, ಯಮನಪ್ಪ ಲೋಕಾಪುರ, ವಾಸನಗೌಡ ಪಾಟೀಲ, ಹನುಮಂತ ಲೋಕಾಪುರ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ