ರಬಕವಿ-ಬನಹಟ್ಟಿ: ಶಿಕ್ಷಕರ ದಿನೋತ್ಸವ ನಿಮಿತ್ತ ಮೆರವಣಿಗೆಗೆ ಶಾಸಕ ಸಿದ್ದು ಸವದಿ ಚಾಲನೆ
Team Udayavani, Sep 5, 2022, 12:34 PM IST
ರಬಕವಿ-ಬನಹಟ್ಟಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೋಮವಾರ ರಬಕವಿ-ಬನಹಟ್ಟಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮೆರವಣೆಗೆಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ಸೆ. 5 ರ ಸೋಮವಾರ ರಬಕವಿಯ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ಕಂಕಣವಾಡಿಯ ಸಂಬಾಳ ಹಾಗೂ ಕರಡಿವಾದನ ಸಂಭ್ರಮ ಹೆಚ್ಚಿಸಿತ್ತು. ಮೆರವಣಿಗೆಯು ರಬಕವಿಯಿಂದ ರಾಮಪುರದ ದಾನಮ್ಮದೇವಿ ಕಲ್ಯಾಣ ಮಂಟಪದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶ್ರೀಶೈಲ ಬುರ್ಲಿ, ಬಿ. ಎಂ. ಹಳೇಮನಿ, ಬಿ. ಡಿ. ನೇಮಗೌಡ, ಬಿ. ಬಿ. ಮುಧೋಳ, ಅರ್ಜುನ ಕಾಖಂಡಕಿ, ಅರುಣ ಕುಲಕರ್ಣಿ, ಜಗದೀಶ ಕುಳ್ಳೋಳ್ಳಿ, ದ್ರಾಕ್ಷಾಯಣಿ ಮಂಡಿ ಸೇರಿದಂತೆ ಅನೇಕರು ಇದ್ದರು.