![court](https://www.udayavani.com/wp-content/uploads/2024/07/court-7-415x231.jpg)
ಮುಧೋಳ-ದೇಶಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ: ಹಲಗಲಿ
Team Udayavani, Mar 15, 2024, 11:03 AM IST
![ಮುಧೋಳ-ದೇಶಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ: ಹಲಗಲಿ](https://www.udayavani.com/wp-content/uploads/2024/03/Bagalkot-620x251.jpg)
ಉದಯವಾಣಿ ಸಮಾಚಾರ
ಮುಧೋಳ: ಜಗತ್ತಿನಲ್ಲಿ ಸೈನಿಕ ಹುದ್ದೆಗಿಂತ ಬೇರೆ ಯಾವ ಹುದ್ದೆಯೂ ಶ್ರೇಷ್ಠವಲ್ಲ. ತ್ಯಾಗ, ಬಲಿದಾನ, ದೇಶಕ್ಕಾಗಿ ಸಮರ್ಪಣಾ
ಮನೋಭಾವ ಬೆಳೆಯುವುದು ಸೈನ್ಯದಲ್ಲಿ ಮಾತ್ರ ಎಂದು ಭಾರತೀಯ ಸೇನೆಯ ಮಾಜಿ ಉಪ ಮುಖ್ಯಸ್ಥ ರಮೇಶ ಹಲಗಲಿ ಹೇಳಿದರು.
ನಗರದಲ್ಲಿ ಸಪ್ತಸ್ವರ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ನೆಪ ಹೇಳುವುದನ್ನು ಬಿಟ್ಟು ನಿರಂತರ ಪ್ರಯತ್ನಶೀಲರಾದಾಗ ಮಾತ್ರ ಅಂದುಕೊಂಡಿರುವ ಗುರಿ ಸಾಧನೆ ಸಾಧ್ಯ ಎಂದರು.
ಜೀವನದಲ್ಲಿ ತಾಯಿಗಿಂತ ಬೇರೆ ದೇವರಲ್ಲಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ತ್ಯಾಗಿಗಾಗಿ ನಾವು ದುಡಿಯಬೇಕು. ದುಡಿದು ದೇಶದ ಕೀರ್ತಿ ಬೆಳಗಬೇಕು ಎಂದು ಹೇಳಿದರು. ರಾಜ್ಯದಲ್ಲಿ ಮುಧೋಳ ನಗರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಎಲ್ಲ ರಂಗದಲ್ಲಿಯೂ ತನ್ನದೇಯಾದ ಛಾಪು ಮೂಡಿಸುತ್ತಿರುವ ಮುಧೋಳ ತನ್ನದೇಯಾದ ಭವ್ಯ ಇತಿಹಾಸವಿದೆ. ಮುಂದಿನ ದಿನಮಾನದಲ್ಲಿ ದೇಶವೇ ಹಿಂದುರುಗಿ ನೋಡುವಂತೆ ಮುಧೋಳ ನಗರ ಬೆಳೆಯಲಿದೆ ಎಂದು ಭವಿಷ್ಯ ನುಡಿದರು.
ಸಪ್ತಸ್ವರ ಸಂಘಟನೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ನ್ಯಾಯಾಧೀಶೆ ಶೃತಿ ತೇಲಿ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವುದು ಮಹಿಳಾ ದಿನಾಚರಣೆ ಮುಖ್ಯ ಉದ್ದೇಶವಾಗಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಸಪ್ತಸ್ವರ ಸಂಘಟನೆ ಕಾರ್ಯ ಸ್ಮರಣೀಯವಾಗಿದೆ ಎಂದು ನೂತನ ನ್ಯಾಯಾಧೀಶೆ ಹೇಳಿದರು.
ಸಪ್ತಸ್ವರ ಸಂಸ್ಥೆ ಮುಖ್ಯಸ್ಥೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಲಿಂಗದ ಅಧ್ಯಕ್ಷತೆ ವಹಿಸಿದ್ದರು. ಮಾಲಾ ಪಾಟೀಲ, ನಿರ್ಮಲಾ ಮಲಘಾಣ, ವಿಜಯಾ ಹಂಗರಗಿ, ಸ್ಯಾಮಯೆಲ್ ಸಂಸ್ಥಾಪಕ ಅಧ್ಯಕ್ಷೆ ಮಾರ್ಗರೇಟ್ ಗೌಡರ, ಸುನಿತಾ ಮಲಘಾಣ, ಶಬಾನಾ ಜಮಾದಾರ, ಭಾರತಿ ಕತ್ತಿ, ಡಾ| ಪಾರ್ವತಿ ನಾಯ್ಕ, ಡಾ| ವೀಣಾ ಕಕರಡ್ಡಿ, ಸುಜಾತಾ ವಸ್ತ್ರದ, ಶಬಾನಾ ಜಮಾದಾರ, ಸುವರ್ಣಾ ಅವಟಿ, ವಿಭಾ ಕೋಲಾರ, ರನ್ ಟಿವಿ ಮುಖ್ಯಸ್ಥ ಚಂದ್ರಶೇಖರ ಪಮ್ಮಾರ ಸೇರಿದಂತೆ ಇತರರು ಇದ್ದರು. ಶೃತಿ ನಿಗಡೆ, ಮಹಾಂತೇಶ ಹಿರೇಮಠ ನಿರೂಪಿಸಿ, ವಂದಿಸಿದರು
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Rain: ಬಾಗಲಕೋಟೆಯ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ](https://www.udayavani.com/wp-content/uploads/2024/07/bagalakote-150x90.jpg)
Heavy Rain: ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳಿಗೆ ಇಂದು (ಜುಲೈ 26) ರಜೆ
![ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ](https://www.udayavani.com/wp-content/uploads/2024/07/rabakavi-1-150x84.jpg)
ರಬಕವಿ-ಬನಹಟ್ಟಿ: ಭೋರ್ಗರೆಯುತ್ತಿರುವ ಕೃಷ್ಣೆ… ಪ್ರವಾಹ ಭೀತಿಯಲ್ಲಿ ಜನತೆ
![Fetoside](https://www.udayavani.com/wp-content/uploads/2024/07/Fetoside-150x90.jpg)
Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!
![Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ](https://www.udayavani.com/wp-content/uploads/2024/07/sandalwood-150x77.jpg)
Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ ನಾಗಪ್ಪ
![4-](https://www.udayavani.com/wp-content/uploads/2024/07/4--150x90.jpg)
Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.