ಎರಡು ದಿನದಿಂದ ಪಾಸಿಟಿವ್ ಕೇಸ್ ಇಲ್ಲ: ಮುಳುಗಡೆ ನಗರಿಯ ಜನ ಕೊಂಚ ನಿರಾಳ
Team Udayavani, Apr 11, 2020, 3:15 PM IST
ಬಾಗಲಕೋಟೆ: ಇಲ್ಲಿನ ಹಳೆಯ ಬಾಗಲಕೋಟೆ ನಗರದಲ್ಲೇ ಏಳು ಜನರಿಗೆ ಕೋವಿಡ್-19 ವೈರಸ್ ದೃಢಪಟ್ಟಿದ್ದರಿಂದ ತೀವ್ರ ಆತಂಕದಲ್ಲಿದ್ದ ಜನರು, ಎರಡು ದಿನದಿಂದ ಕೊಂಚ ನಿರಾಳವಾಗಿದ್ದಾರೆ.
ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಲಾದ 136 ಸ್ಯಾಂಪಲ್ ಗಳೆಲ್ಲವೂ ನೆಗಟಿವ್ ಬಂದಿವೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿದ್ದಾರೆ.
ಇಲ್ಲಿಯವರೆಗೆ ಪರೀಕ್ಷೆಗೆ ಕಳುಹಿಸಲಾದ ಒಟ್ಟು 246 ಸ್ಯಾಂಪಲ್ ಗಳ ಪೈಕಿ 237 ಸ್ಯಾಂಪಲ್ ಗಳ ವರದಿಯಲ್ಲಿ ನೆಗೆಟಿವ್ ಬಂದಿವೆ. ಎಂಟು ವರದಿಯಲ್ಲಿ ಮಾತ್ರ ಪಾಸಿಟಿವ್. ಒಂದು ಸ್ಯಾಂಪಲ್ ರಿಜೆಕ್ಟ್ ಆಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂದು ಹೊಸ ಏಳು ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 214ಕ್ಕೇರಿದೆ.