ಸಂಕ್ರಾಂತಿ ಸಂಭ್ರಮ: ಲಕ್ಷಾಂತರ ಜನರಿಂದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ
Team Udayavani, Jan 15, 2020, 10:56 AM IST
ಕೂಡಲಸಂಗಮ(ಬಾಗಲಕೋಟೆ): ಕೃಷ್ಣೆ, ಮಲಪ್ರಭೆ, ಘಟಪ್ರಭೆ ನದಿಗಳ ತ್ರಿವೇಣಿ ಸಂಗಮ ಕೂಡಲಸಂಗಮದಲ್ಲಿ ಸಂಕ್ರಾಂತಿ ಅಂಗವಾಗಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಿ, ಸಂಗಮನಾಥ ದರ್ಶನ ಪಡೆದರು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪದ ಸುತ್ತಲೂ ಸಂಗಮಗೊಳ್ಳುವ ಮೂರು ನದಿಗಳಲ್ಲಿ ಬೆಳಗ್ಗೆ ಸೂರ್ಯ ಉದಯಿಸುವ ವೇಳೆ ಸೇರಿದ ಜನರು, ಸ್ನಾನ ಮಾಡಿ, ಕ್ಷೇತ್ರಾಧಿಪತಿ ಸಂಗಮನಾಥನ ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.
ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ ವಿಜಯಪುರ, ಗದಗ, ಬೆಳಗಾವಿ, ಧಾರವಾಡ ಸಹಿತ ಹಲವು ಜಿಲ್ಲೆಗಳ ಜನರು ಕೂಡಲಸಂಗಮಕ್ಕೆ ಆಗಮಿಸಿದ್ದಾರೆ. ಅಲ್ಲದೇ ಶರಣ ಮೇಳಕ್ಕೆ ದೇಶದ ಹಲವೆಡೆಯಿಂದ ಶರಣ, ಶರಣೆಯರು ಆಗಮಿಸಿದ್ದು, ಅವರೆಲ್ಲರೂ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ದೇವರ ದರ್ಶನ ಪಡೆದು, ಪುನೀತರಾದರು.