ಉಜ್ವಲ್ ಯೋಜನೆಯ ಸದ್ಭಳಕೆ ಮಾಡಿಕೊಳ್ಳಿ – ಶಾಸಕ ಸಿದ್ದು ಸವದಿ
Team Udayavani, Jan 11, 2022, 7:42 PM IST
ರಬಕವಿ-ಬನಹಟ್ಟಿ : ಕೇಂದ್ರ ಸರಕಾರದ ಉಜ್ವಲ್ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ತಾಲೂಕಿನ ನಾವಲಗಿಯಲ್ಲಿ ಕೇಂದ್ರ ಸರಕಾರದಿಂದ ಬಿಪಿಎಲ್ ಕುಟುಂಬಗಳಿಗೆ ೪ನೇ ಹಂತದ ಉಜ್ವಲ್ ಗ್ಯಾಸ ವಿತರಣೆ ಹಾಗೂ ಇಂಡಿಯನ್ ಗ್ಯಾಸ್ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರಕಾರ ಬಡ ಮಹಿಳೆಯರ ಬಾಳಿಗೆ ಬೆಳಕಾಗಲಿ ಎಂದು ಉಜ್ವಲ್ ಯೋಜನೆಯ ಮೂಲಕ ಗ್ಯಾಸ್ ವಿತರಣೆ ಮಾಡುತ್ತಿದೆ. ಅಲ್ಲದೇ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.
4ನೇ ಹಂತದ ಉಜ್ವಲ್ ಯೋಜನೆಯಡಿಯಲ್ಲಿ ೯೦ಜನ ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಬಸಪ್ಪ ಬಳವಾಡ, ಉಪಾಧ್ಯಕ್ಷೆ ರಚನಾ ಕಾಂತಿ, ಸದಸ್ಯರಾದ ರೇಖಾ ಕಾಂತಿ, ಬಾಗೀರಥಿ ಮಗದುಮ, ಯಮನವ್ವ ಕಂಚು, ಸುಬಾಸ ಕಾಂತಿ, ಹನಮಂತ ನಾವಿ, ಮುತ್ತಪ್ಪ ಅಂಗಡಿ, ಗೋವಿಂದ ಪಾಟೀಲ, ಅಲ್ಲಪ್ಪ ಮುಘಳಖೋಡ, ಗುರು ಮರಡಿಮಠ, ಆನಂದ ಕಂಪು, ಈರಪ್ಪ ವಾಲಿ, ಹನಮಂತ ಸವದಿ, ಬಸಪ್ಪ ಮೆಟಗುಡ್ಡ ಸೇರಿದಂತೆ ಅನೇಕರು ಇದ್ದರು.