Terdal: ಗಾಳಿಯಲ್ಲಿ ಗುಂಡು ಹಾರಿಸಿದ ಯುವಕ; ಪ್ರಕರಣ ದಾಖಲು
Team Udayavani, Oct 26, 2023, 8:24 PM IST
ರಬಕವಿ-ಬನಹಟ್ಟಿ (ತೇರದಾಳ) : ನಾಡ ಹಬ್ಬ ದಸರಾ ಆಯುಧ ಪೂಜೆಯಂದು ಯುವಕನೊಬ್ಬ ತನ್ನ ಅಜ್ಜನ ಪಿಸ್ತೂನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಈ ಕುರಿತು ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭುವನ ಪ್ರಭಾಕರ ಅಪರಾಜ(20) ಗುಂಡು ಹಾರಿಸಿದ ಯುವಕ.
ಗೋಲಭಾವಿ ರಸ್ತೆಯಲ್ಲಿರುವ ಷಣ್ಮುಖ ಗಾಡದಿ ಎಂಬುವರು ಅ.24 ರಂದು ಆಯುಧ ಪೂಜೆಯಂದು ಲೈಸೆನ್ಸ್ ಹೊಂದಿದ ತಮ್ಮ ಬಂದೂಕನ್ನು ಪೂಜೆ ಮಾಡಿದ್ದಾರೆ. ಜಮಖಂಡಿಯಿಂದ ಪೂಜೆಗಾಗಿ ಆಗಮಿಸಿದ್ದ ಮೊಮ್ಮಗ ಭುವನ ಬಂದೂಕನ್ನು ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾನೆ. ಗುರುವಾರ ಬೆಳಗ್ಗೆಯಿಂದ ಪೊಲೀಸರು ಆರೋಪಿಯನ್ನು ಹಾಗೂ ಲೈಸೆನ್ಸ್ ಹೊಂದಿದ ಷಣ್ಮುಖ ಗಾಡದಿ ಅವರನ್ನು ತೋಟದಲ್ಲಿ ವಿಚಾರಣೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ