ಮಧ್ಯಪ್ರದೇಶಕ್ಕೆ ಅತಂತ್ರ ಕಬ್ಬು ಕಟಾವು ಕಾರ್ಮಿಕರ ರವಾನೆ

ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್‌ ಮನ್‌ ತಲೆಮರೆಸಿಕೊಂಡಿದ್ದ.

Team Udayavani, Mar 3, 2022, 6:20 PM IST

ಮಧ್ಯಪ್ರದೇಶಕ್ಕೆ ಅತಂತ್ರ ಕಬ್ಬು ಕಟಾವು ಕಾರ್ಮಿಕರ ರವಾನೆ

ಜಮಖಂಡಿ: ವಿಜಯಪುರದ ಕಬ್ಬು ಕಟಾವು ಗ್ಯಾಂಗ್‌ಮನ್‌ ಅಪನಂಬಿಕೆಗೆ ಒಳಗಾಗಿದ್ದ ಮಧ್ಯಪ್ರದೇಶ ಮೂಲದ 9 ಮಕ್ಕಳು ಸಹಿತ 25 ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಇವರ ರಕ್ಷಣೆಗೆ ಮುಧೋಳ ತಾಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿ ಮುಂದಾಗಿದ್ದು, ಸಂಕಷ್ಟದಲ್ಲಿದ್ದವರನ್ನು ಮಧ್ಯಪ್ರದೇಶದ ಅವರ ಸ್ವಗ್ರಾಮಕ್ಕೆ ಕಳುಹಿಸಲಾಯಿತು.

ವಿಜಯಪುರದ ಗ್ಯಾಂಗ್‌ಮನ್‌ ರಾಠೊಡ ಎಂಬಾತನೊಂದಿಗೆ ಮಧ್ಯಪ್ರದೇಶದ ಕಾರ್ಮಿಕರು ಷರತ್ತುಗಳೊಂದಿಗೆ ಮುಧೋಳ ತಾಲೂಕಿನ ಪಿಎಂ ಬುದ್ನಿ ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಆಗಮಿಸಿದ್ದರು. ನಿಗದಿತ ಅವಧಿ ಮುಗಿದು 21 ದಿನ ಕಳೆದರೂ ಮಧ್ಯಪ್ರದೇಶದಕ್ಕೆ ಕಳುಹಿಸಿಕೊಡದೇ ಎಲ್ಲ ಕಾರ್ಮಿಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಂಡಿರುವ ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್‌ ಮನ್‌ ತಲೆಮರೆಸಿಕೊಂಡಿದ್ದ.

ಮಧ್ಯಪ್ರದೇಶ ಕಾರ್ಮಿಕರು ತಮ್ಮ ಜಿಲ್ಲೆಯ ಸಂಸದ ಮತ್ತು ಆದಿವಾಸಿ ಬುಡಕಟ್ಟು ಜನಾಂಗ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಮಧ್ಯಪ್ರದೇಶದಲ್ಲಿ ವಂಚನೆ ಪ್ರಕರಣ ದಾಖಲಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಮಧ್ಯಪ್ರದೇಶದ ಕಲೆಕ್ಟರ್‌ ಜಿಲ್ಲಾಧಿಕಾರಿಗೆ ಎಫ್‌ ಐಆರ್‌ ಪ್ರಕರಣ ದಾಖಲಿಸಿದ ದಾಖಲಾತಿ ನೀಡುವ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಮಧ್ಯಪ್ರದೇಶದ ಬೆಳವಂಡಿ ಜಿಲ್ಲೆಗೆ ತಲುಪಿಸಬೇಕೆಂಬ ಮಾಹಿತಿ ನೀಡಿದರು. ಇದರಿಂದ ಕಾರ್ಯಪ್ರವೃತ್ತರಾದ ಜಿಲ್ಲಾ ಧಿಕಾರಿಗಳು ಮುಧೋಳ ತಹಶೀಲ್ದಾರ್‌ ಮತ್ತು ಪಿಎಸೈ ಅವರೆಗೆ ನಿರ್ದೇಶನ ನೀಡಿ ಗ್ಯಾಂಗ್‌ಮನ್‌ ಠಾರೋಡ ಎಂಬಾತನನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ನೀಡಲಾಗಿದೆ. ಅಲ್ಲದೇ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸಿ ಕೊಡಬೇಕೆಂದು ಜಮಖಂಡಿ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ನಿರ್ದೇಶನ ನೀಡಿದ್ದರು.

ನಗರದ ಕುಡಚಿ ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಾಸವಿದ್ದ ಮಧ್ಯಪ್ರದೇಶ ಕಾರ್ಮಿಕರಿಗೆ 4 ದಿನಗಳವರೆಗೆ ಉಪಹಾರ-ಊಟದ ವ್ಯವಸ್ಥೆ ಮಾಡಲಾಗಿತ್ತು.

ಉಪ ವಿಭಾಗಾಧಿ ಕಾರಿ ಡಾ| ಸಿದ್ದು ಹುಲ್ಲೋಳ್ಳಿ ನೇತೃತ್ವದಲ್ಲಿ ಬುಧವಾರ ಖಾಸಗಿ ವಾಹನದ ಮೂಲಕ ಸರಕು ಸಾಮಾನುಗಳೊಂದಿಗೆ ಕಬ್ಬು ಕಟಾವಿಗೆ ಬಂದಿದ್ದ ಎಲ್ಲ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಮುಧೋಳ ಎಎಸೈ ಕೋಲಾರ, ಓರ್ವ ಮಹಿಳೆ ಮತ್ತು ಪುರುಷ ಆರಕ್ಷಕ, ಕಾರ್ಮಿಕ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ 5 ಜನರ ತಂಡ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನೀಡಿ ಅವರು ಕೂಡ ಮಧ್ಯಪ್ರದೇಶಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ್‌ ಸಂಗಮೇಶ ಬಾಡಗಿ, ಶಿರಸ್ತೇದಾರ್‌ ನಿಂಗಪ್ಪ ಬಿರಡಿ, ಕಂದಾಯ ನಿರೀಕ್ಷಕ ಬಿ.ಎಸ್‌. ಜಿಗಳೂರ, ಚುನಾವಣೆ ಇಲಾಖೆ ಅ ಧಿಕಾರಿ ಸಂತೋಷ ರಬಕವಿ, ಮೋಹನ ಸಬರದ ಸೇರಿದಂತೆ ಇತರರಿದ್ದರು.

ಪತ್ರಕರ್ತರ ಸಹಕಾರ-ವ್ಯಾಪಾರಸ್ಥರ ದಾಸೋಹ
ನಗರದ ತಾಲೂಕು ಆಡಳಿತ ಸೌಧದ ಕೆಳ ಅಂತಸ್ತಿನಲ್ಲಿ ಮಧ್ಯಪ್ರದೇಶದ ಚಿಕ್ಕಮಕ್ಕಳ ಸಹಿತ 25 ಜನ ಕಬ್ಬು ಕಟಾವು ಮಾಡುವ ಕಾರ್ಮಿಕರು ಕಳೆದ 5 ದಿನದಿಂದ ವಾಸವಾಗಿದ್ದು, 4 ದಿನದವರೆಗೆ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ ಮಾಡಿಲಾಗಿತ್ತು. ಮಂಗಳವಾರ ಕಾರ್ಮಿಕರಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ಮಕ್ಕಳು ಹೊಟ್ಟೆ ಹಸಿವಿನಿಂದ ರೋದಿಸುತ್ತಿದ್ದರು. ಇದನ್ನು ಗಮನಿಸಿದ ಜಮಖಂಡಿ ನಗರದ ಕೆಲ ಪತ್ರಕರ್ತರು ದಾನಿಗಳ ಮೊರೆ ಹೋಗಿ ಸಮಸ್ಯೆ ತಿಳಿಸಿದಾಗ ಶಬ್ಬೀರ ಬಾಗವಾನ, ಮುನ್ನಾ ನದಾಫ್‌, ಮೀರಾ ಝಾರೆ, ಯಾಸೀನ್‌ ಸಪ್ತಸಾಗರ ಉಚಿತವಾಗಿ ಬಾಳೆ, ಚಿಕ್ಕು, ಸೇಬು ಹಣ್ಣು, ಭಜ್ಜಿ, ಮಸಾಲಾ ರೈಸ್‌ ನೀಡಿ ಮಾನವೀಯತೆ ಮೆರೆದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.