Ugadi ಫಲ ಭವಿಷ್ಯ: ಬಲಿಷ್ಠ ರಾಜನೇ ಮರಳಿ ರಾಜನಾಗುತ್ತಾನೆ
ಹೆಸರು, ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ
Team Udayavani, Apr 9, 2024, 8:58 PM IST
ಗುಳೇದಗುಡ್ಡ : ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯು ರಾಜನೇ ರಾಜನಾಗುವ ಯೋಗವಿದ್ದು, ರಾಜ, ಪ್ರಜೆಗಳು, ಮಂತ್ರಿ ಸೈನ್ಯ ಬಲಿಷ್ಠವಾಗಿದೆ ಎನ್ನುವ ಮತ್ತು ಈ ದೇಶದಲ್ಲಿ ಯಾವ ರಾಜನಿದ್ದಾನೋ ಅವನೇ ಮುಂದೆವರೆಯುತ್ತಾನೆ ಎಂಬ ಭವಿಷ್ಯವನ್ನು ಮಲ್ಲಿಕಾರ್ಜುನ ಗೊಬ್ಬಿ ಅವರು ಯುಗಾದಿ ಫಲ ಭವಿಷ್ಯದಲ್ಲಿ ನುಡಿದರು. ಯುಗಾದಿ ಫಲ ಭವಿಷ್ಯದ ಕೇಳಿದ ಅದೇಷ್ಟೋ ಜನರು ಈ ಬಾರಿ ಮತ್ತೆ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ ಎಂಬ ಮಾತುಗಳನ್ನಾಡಿದರು.
ಪಟ್ಟಣದ ಬಗೀಚ್ನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿ ವರ್ಷ ಯುಗಾದಿ ಹಬ್ಬದ ನಿಮಿತ್ತ ನಡೆಸಿಕೊಂಡು ಬಂದಿರುವ ಯುಗಾದಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿದು, ದೇಶದಲ್ಲಿ ಈ ವರ್ಷ ಹೆಸರು ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ ಇದೆ. ತೊಗರಿ ಸಜ್ಜೆಗೆ ಕೀಟ ಭಾದೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದ್ದು, ಗುಳೇದಗುಡ್ಡ ಖಣ, ಇಲಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಅಲ್ಲದೇ ಬಟ್ಟೆ ವ್ಯಾಪಾರದಲ್ಲಿ ಈ ಭಾರಿ ಗಣನೀಯ ಏರಿಕೆ ಕಾಣಲಿದ್ದು, ಬಟ್ಟೆ ವ್ಯಾಪಾರಿ ಶೆಟ್ಟಿಯು ವ್ಯಾಪಾರದಲ್ಲಿ ಭರಪೂರವಾಗಿ ತೊಡಗಿರುತ್ತಾನೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದರು.
ಈ ಭಾರಿ ಭರಣಿ,ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿದ್ದು, ರಾಜ್ಯ, ದೇಶದಲ್ಲಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದ್ದು, ಹಳಸಂದಿ, ನವಣಿ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಯುಗಾಧಿ ಫಲ ಭವಿಷ್ಯದಲ್ಲಿ ಭವಿಷ್ಯ ನುಡಿಯಲಾಯಿತು. ಸುಮಾರು ನೂರು ವರ್ಷಗಳಿಂದ ಪಟ್ಟಣದ ಇಲಾಳ ಮ್ಯಾಳದವರು ಯುಗಾದಿ ಫಲ ಭವಿಷ್ಯ ಹೇಳುತ್ತ ಬಂದಿದ್ದು, ಜನರು ಫಲ ಭವಿಷ್ಯ ಕೇಳಲು ತಂಡೋಪ ತಂಡವಾಗಿ ಆಗಮಿಸುತ್ತಾರೆ.
ಈ ಸಂದರ್ಭದಲ್ಲಿ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಶಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೇಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜಣಗಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ