Arrested :ಬೈಕ್ನಲ್ಲಿ ಹೋಗುತ್ತಿದ್ದ ಯುವಜೋಡಿ ಅಡ್ಡಗಟ್ಟಿ ಹಲ್ಲೆ ಮಾಡಿದವನ ಬಂಧನ
Team Udayavani, Feb 19, 2024, 1:39 PM IST
ಬೆಂಗಳೂರು: ಪರಿಚಿತ ಯುವಕ,ಯುವತಿ ಹೊರಟಿದ್ದ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ ಆರೋಪಿ ಯನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂದನಹಳ್ಳಿ ನಿವಾಸಿ ಎನ್. ರಾಕೇಶ್ (23) ಬಂಧಿತರು.
ಫೆ.1 ರಂದು ರಾತ್ರಿ 7 ಗಂಟೆ ಗೆ ಪರಿಚಿತ ಯುವಕ-ಯುವತಿ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಕುಂದನಹಳ್ಳಿ ಸಿಗ್ನಲ್ ಬಳಿ ಇವರ ಬೈಕ್ ಆರೋಪಿ ಬೈಕ್ಗೆ ಟಚ್ ಆಗಿತ್ತು. ಆಕ್ರೋಶಗೊಂಡ ಆರೋಪಿ ರಾಕೇಶ್ ಇವರ ಬೈಕ್ ಅಡ್ಡಗಟ್ಟಿದ್ದ ಬೀಳಿಸಿದ್ದ. ಏಕಾಏಕಿ ಬೈಕ್ನಲ್ಲಿದ್ದ ಯುವಕನನ್ನು ತಳ್ಳಾಡಿದ್ದ. ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದ. ಇದನ್ನು ಕಂಡು ಹಲ್ಲೆಗೊಳಗಾದ ಯುವಕನ ರಕ್ಷಣೆಗೆ ಬಂದ ಮತ್ತೋರ್ವನನ್ನು ಆರೋಪಿ ರಾಕೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ಅಲ್ಲಿಂದ ಆರೋಪಿ ರಾಕೇಶ್ ಪರಾರಿಯಾಗಿದ್ದ.
ಈ ಕೃತ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಎಲ್ಲೆಡೆ ವೈರಲ್ ಆದಾಗ ಎಚ್ಚೆತ್ತು ಕೊಂಡ ಪೊಲೀಸರು ಈ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿ ರಾಕೇಶ್ನನ್ನು ಎಚ್ಎಎಲ್ ಪೊಲೀಸರು ಬಂಧಿಸಿ ದ್ದಾರೆ.
ಹಲ್ಲೆಗೊಳಗಾದ ಯುವಕ ಹಾಗೂ ಆತನೊಂದಿಗೆ ಬೈಕ್ನಲ್ಲಿದ್ದ ಯುವತಿಯ ಹೇಳಿಕೆ ಪಡೆಯಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ