ಶಾಲೆಯಲ್ಲಿ ಆಟವಾಡುತ್ತ ಬಿದ್ದಿದ್ದ ಮಗು 3 ದಿನಗಳ ನಂತರ ಸಾವು
Team Udayavani, Feb 2, 2017, 12:00 PM IST
ಬೆಂಗಳೂರು: ಶಾಲೆಯಲ್ಲಿ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ ಮೂರೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ. ಶೇಷಾದ್ರಿಪುರಂ ನಿವಾಸಿ ಸ್ವಾಮಿ ಎಂಬುವರ ಮಗ ಹರ್ಷಿತ್ ಮೃತ ಬಾಲಕ. ಹರ್ಷಿತ್ನನ್ನು ಶೇಷಾದ್ರಿಪುರಂನ ಶ್ರೀಪುರದ ಸೇಂಟ್ ಥಾಮಸ್ ಶಾಲೆಯಲ್ಲಿ ಫ್ರೀ ನರ್ಸರಿಗೆ ದಾಖಲಿಸಲಾಗಿತ್ತು.
ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಮಗು ಶಾಲೆಯ ಆವರಣದಲ್ಲಿ ಆಟವಾಡುವಾಗ ಕೆಳಗೆ ಬಿದ್ದು, ತಲೆಗೆ ಪೆಟ್ಟಾಗಿತ್ತು. ಕೂಡಲೇ ಶಿಕ್ಷಕರು ಮಗುವಿನ ಪೋಷಕರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ತಲೆಯಿಂದ ರಕ್ತಸ್ರಾವ ಆಗಿರಲಿಲ್ಲ. ಆದರೆ ತಲೆಯ ಒಳಗೆ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗು ಬಿದ್ದಿದ್ದು ಎಲ್ಲಿ?: ಪೋಷಕರು ಕೊಟ್ಟ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು ಶಾಲೆಯ ಹೊರ ಆವರಣದಲ್ಲಿ. ತರಗತಿಯ ಒಳಗೆ ಯಾವುದೇ ಘಟನೆ ನಡೆದಿಲ್ಲ. ತರಗತಿಯ ಆಟದ ವಸ್ತು ಅಥವಾ ಕಲಿಕೆಯ ವಸ್ತುವಿನಿಂದ ಗಾಯ ಆಗಿಲ್ಲ.
ಹೊರ ಆವರಣದಲ್ಲಿ ಆಟ ಆಡುವಾಗ ಬಿದ್ದಿದ್ದರಿಂದ ಅನಾಹುತ ಆಗಿರಬಹುದು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬಲವಾದ ವಸ್ತುವಿಗೆ ಅಥವಾ ಗೋಡೆ ಇನ್ನಿತರ ಭಾಗಕ್ಕೆ ತಲೆ ಅಪ್ಪಳಿಸಿದ್ದರಿಂದ ಹೀಗಾಗಿರಬಹುದು. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ