ಪಾಲಿಕೆಗೆ ಬರಲಿದೆ “ಇ-ಆಫೀಸ್‌’ ತಂತ್ರಾಂಶ


Team Udayavani, Dec 9, 2018, 12:20 PM IST

palikege.jpg

ಬೆಂಗಳೂರು: ಭ್ರಷ್ಟಾಚಾರ, ಕಡತಗಳ ನಾಪತ್ತೆ, ಅನಗತ್ಯ ವಿಳಂಬ ತಡೆಯಲು “ಇ-ಆಫೀಸ್‌’ ತಂತ್ರಾಂಶದ ಮೊರೆ ಹೋಗಿರುವ ಬಿಬಿಎಂಪಿ, ಶೀಘ್ರವೇ ಪಾಲಿಕೆಯಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೊಳಿಸಲಿದೆ. ಬಿಬಿಎಂಪಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಅಹವಾಲು, ಅರ್ಜಿಗಳಿಗೆ ಸಂಬಂಧಿಸಿದ ಕಡತಗಳ ವಸ್ತುಸ್ಥಿತಿ ತಿಳಿಯುವುದು ಕಷ್ಟದ ಕೆಲಸವಾಗಿದೆ.

ಪರಿಣಾಮ, ಕಡತ ಎಲ್ಲಿದೆ, ಯಾವ ಕಾರಣದಿಂದ ವಿಳಂಬವಾಗಿದೆ, ಅನುಮೋದನೆ ಸಿಕ್ಕಿದೆಯೇ, ಇಲ್ಲವೆ ಎಂಬ ಮಾಹಿತಿ ತಿಳಿಯಲು ಸಾಕಷ್ಟು ಶ್ರಮವಹಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕಡತಗಳ ಮಾಹಿತಿ ಸುಲಭವಾಗಿ ತಿಳಿಸಲು ಪಾಲಿಕೆ “ಇ-ಆಫೀಸ್‌’ ತಂತ್ರಾಂಶ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಪಾಲಿಕೆ ಬಜೆಟ್‌ಗಳಲ್ಲಿ ಕಾಗದ ರಹಿತ ಆಡಳಿತ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದೂ, ಈವರಗೆ ಅದು ಜಾರಿಯಾಗಿಲ್ಲ.

ಕಳೆದ ಬಾರಿಯ ಬಜೆಟ್‌ನಲ್ಲಿಯೂ ಕಡತಗಳ ವಸ್ತುಸ್ಥಿತಿ ತಿಳಿಸುವ “ಫೈಲ್‌ ಟ್ರ್ಯಾಕಿಂಗ್‌ ಸಿಸ್ಟಂ’ನ ಉಲ್ಲೇಖವಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಪಾಲಿಕೆಯ ಆಡಳಿತ ವಿಭಾಗವು ಕಡತಗಳ ನಿರ್ವಹಣೆಗೆ ತಂತ್ರಾಂಶ ಜಾರಿಗೊಳಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ಜತೆಗೆ, ಪಾಲಿಕೆಯ ಆಡಳಿತಕ್ಕೂ ವೇಗ ದೊರೆಯಲಿದೆ. 

ಕೇಂದ್ರ ಸರ್ಕಾರದ ನ್ಯಾಷನಲ್‌ ಇನ್ಫಾಮ್ಯಾಟಿಕ್ಸ್‌ ಸೆಂಟರ್‌ (ಎನ್‌ಐಸಿ) ಸಹಯೋಗದಲ್ಲಿ ಇ-ಅಫೀಸ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷ ಆರಂಭವಾಗುವ ಮೊದಲೇ ತಂತ್ರಜ್ಞಾನ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಪಾಲಿಕೆಯ ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಾಯಕವಾಗಲಿದೆ ಎನ್ನಲಾಗಿದೆ. 

ಬಿಬಿಎಂಪಿಯಲ್ಲಿ ಹಿಂದೆ ಹಲವಾರು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಅವುಗಳ ತನಿಖೆ ನಡೆಸಲು ಮುಂದಾದಾಗ ಕಡತ ನಾಪತ್ತೆಯಾಗಿರುವ ಪ್ರಕರಣಗಳು ವರದಿಯಾಗಿವೆ. ಜತೆಗೆ, ಲೆಕ್ಕಪರಿಶೋಧಕರು ಹತ್ತಾರು ಬಾರಿ ಕಡತಗಳನ್ನು ಸಲ್ಲಿಸುವಂತೆ ತಿಳಿಸಿದರೂ ಅಧಿಕಾರಿಗಳು ಸಲ್ಲಿಸುವುದಿಲ್ಲ.

ಜತೆಗೆ ಕಡತಗಳಿಗೆ ಬೆಂಕಿ ಹಚ್ಚಿದಂತಹ ಉದಾಹರಣೆಗಳೂ ಪಾಲಿಕೆಯಲ್ಲಿವೆ. ಕಡತಗಳ ನಾಪತ್ತೆಯಿಂದಾಗಿ ಭ್ರಷ್ಟಾಚಾರ ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇ-ಆಫೀಸ್‌ ತಂತ್ರಾಂಶ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸದ್ಯ ಕಡತ ವಿಲೇವಾರಿ ವ್ಯವಸ್ಥೆ ಹೇಗಿದೆ?: ಸಾಮಾನ್ಯವಾಗಿ ಸಾರ್ವಜನಿಕರು ಅರ್ಜಿಗಳನ್ನು ಟಪಾಲ್‌ಗೆ ನೀಡುತ್ತಾರೆ. ಅಲ್ಲಿಂದ ಅರ್ಜಿಗಳು ಸಂಬಂಧಿಸಿದ ವಿಭಾಗಕ್ಕೆ ಹೋಗುತ್ತವೆ. ಅಲ್ಲಿ ಪ್ರಥಮ ದರ್ಜೆ ಸಹಾಯಕ ಪರಿಶೀಲನೆ ನಡೆಸಿ ಶರಾ ಬರೆಯಲಿದ್ದು, ಅಲ್ಲಿಂದ ಸಹಾಯಕ ಆಯುಕ್ತರು, ಉಪ ಆಯುಕ್ತರು, ವಿಶೇಷ ಆಯುಕ್ತರು ಹೀಗೆ ಕೊನೆಗೆ ಆಯುಕ್ತರ ಬಳಿಗೆ ಹೋಗುತ್ತದೆ.

ಆದರೆ, ಈ ಮಧ್ಯ ಒಮ್ಮೆ ಕಡತ ತಪ್ಪಿದರೆ ಅಥವಾ ವಿಳಂಬವಾದರೆ, ಕಡತ ಎಲ್ಲಿದೆ ಎಂಬುದನ್ನು ತಿಳಿಯಲು ಹತ್ತಾರು ವಿಭಾಗಗಳಿಗೆ ಅಲೆಯಬೇಕಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಕಡತಗಳೇ ಕಾಣೆಯಾಗಿರುವ ಉದಾಹರಣೆಗಳು ಇವೆ. 

“ಇ-ಆಫೀಸ್‌’ ಕಾರ್ಯ ವಿಧಾನ: ಸಾರ್ವಜನಿಕರು ಅರ್ಜಿಯನ್ನು ಟಪಾಲ್‌ಗೆ ನೀಡಿದ ಕೂಡಲೇ ಅದನ್ನು ಸ್ಕ್ಯಾನ್‌ ಮಾಡಿ ಕಂಪ್ಯೂಟರ್‌ಗೆ ಹಾಕಲಾಗುತ್ತದೆ. ಅಲ್ಲಿ ಅರ್ಜಿಯು ಡಿಜಿಟಲ್‌ ಕಡತವಾಗಿ ಮಾರ್ಪಟ್ಟು ಸಂಬಂಧಿಸಿದ ಇಲಾಖೆಯ ಎಫ್ಡಿಎಗೆ ಹೋಗಲಿದ್ದು, ಸ್ವಯಂಚಾಲಿತವಾಗಿ ನೋಟ್‌ಶೀಟ್‌ ಸೃಜಿಸುತ್ತದೆ.

ಅಲ್ಲಿ ಅಧಿಕಾರಿಗಳು ಕಡತಕ್ಕೆ ಸಂಬಂಧಿಸಿದ ಶರಾ ಬರೆಯಬೇಕಾಗುತ್ತದೆ. ಆಯುಕ್ತರು ಶರಾ ಬರೆದು ಸಹಿ ಹಾಕಬೇಕಾದ ಸಂದರ್ಭದಲ್ಲಿ ಮಾತ್ರವೇ ಅದನ್ನು ಪ್ರಿಂಟ್‌ ತೆಗೆಯಲಾಗುತ್ತದೆ. ಆನಂತರವೂ ಅದನ್ನು ಸ್ಕ್ಯಾನ್‌ ಮಾಡಿ ಮತ್ತೆ ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. 

ತಂತ್ರಾಂಶ ಬಳಕೆ ಕುರಿತು ತರಬೇತಿ: ಬಿಬಿಎಂಪಿ ಆಯುಕ್ತರು ಹಾಗೂ ವಿಶೇಷ ಆಯುಕ್ತರ (ಆಡಳಿತ) ಕಚೇರಿ ಸಿಬ್ಬಂದಿಗೆ ಇ-ಆಫೀಸ್‌ ತಂತ್ರಾಂಶ ಬಳಕೆಯ ಕುರಿತಂತೆ ಸರ್ಕಾರ ಇ-ಆಡಳಿತ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಮುಗಿದ ನಂತರದಲ್ಲಿ ವ್ಯವಸ್ಥೆ ಅನುಷ್ಠಾನಕ್ಕೆ ಅಗತ್ಯ ಕಂಪ್ಯೂಟರ್‌ಗಳನ್ನು ಖರೀದಿಸಿ, ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ನಿರ್ಧರಿಸಿದೆ. 

ಇ-ಆಫೀಸ್‌ ತಂತ್ರಾಂಶದ ಅನುಕೂಲಗಳೇನು?
– ಯಾರು ಬೇಕಾದರೂ ಕಡಿತದ ಸ್ಥಿತಿಗತಿ ಪರಿಶೀಲಿಸಬಹುದು
– ಕಡತ ನಾಪತ್ತೆಯಾಗುವ ಪ್ರಕರಣಗಳಿಗೆ ಕಡಿವಾಣ
– ಲೆಕ್ಕಪರಿಶೋಧನೆಗೆ ಸಹಾಯಕ
– ಕಡತ ಯಾರ ಬಳಿಯಿದೆ ಎಂಬ ನಿಖರ ಮಾಹಿತಿ
– ಕಡತ ವಿಲೇವಾರಿಯಾಗದಿರಲು ಕಾರಣ
– ಯಾವ ಅಧಿಕಾರಿ ಎಷ್ಟು ದಿನ ಕಡತ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ
– ಪದೇ ಪದೇ ಅಧಿಕಾರಿಗಳ ಬಳಿಗೆ ಅಲೆಯುವುದು ತಪ್ಪುತ್ತದೆ

ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಿಬಿಎಂಪಿ ಇ- ಆಫೀಸ್‌ ತಂತ್ರಾಂಶ ಜಾರಿಗೆ ತರಲು ಉದ್ದೇಶಿಸಿಲಾಗಿದೆ. ತಾವು ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮೈಸೂರು ಹಾಗೂ ವಿಜಯಪುರ ಸಂಪೂರ್ಣ ಕಾಗದ ರಹಿತಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಪಾಲಿಕೆಯಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಇ-ಆಫೀಸ್‌ ತಂತ್ರಾಂಶ ಸಿದ್ಧಪಡಿಸಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. 
-ರಂದೀಪ್‌, ವಿಶೇಷ ಆಯುಕ್ತರು (ಆಡಳಿತ)

* ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.