ಬಿಡಿಎ ಪ್ರಕರಣ ಇತ್ಯರ್ಥಕ್ಕೆ ಸಲಹಾ ಸಂಸ್ಥೆ


Team Udayavani, Jul 18, 2022, 1:17 PM IST

ಬಿಡಿಎ ಪ್ರಕರಣ ಇತ್ಯರ್ಥಕ್ಕೆ ಸಲಹಾ ಸಂಸ್ಥೆ

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋರ್ಟ್‌ ಪ್ರಕರಣಗಳಿಂದ ಹೈರಾಣಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ),ಪ್ರಕರಣಗಳ ನಿವಾರಣೆಗೆ ಪ್ರತ್ಯೇಕ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಭೂಸ್ವಾಧೀನ, ಫ್ಲಾಟ್‌ಗಳ ಹಂಚಿಕೆ, ನಿವೇಶನಗಳಹಂಚಿಕೆಯಲ್ಲಿ ವಿವಾದ ಸೇರಿ ಇನ್ನಿತರಕಾರಣಗಳಿಂದಾಗಿ ಬಿಡಿಎ ಮೇಲೆ ಸಾರ್ವಜನಿಕರು ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲೀಕರಿಂದ ಅತಿಹೆಚ್ಚಿನ ಪ್ರಕರಣಗಳು ಬಿಡಿಎ ಮೇಲೆ ದಾಖಲಾಗಿವೆ.

ಈ ಪ್ರಕರಣ ಇತ್ಯರ್ಥ ವಿಳಂಬವಾಗುತ್ತಿದ್ದು, ಅದರಿಂದ ಬಿಡಿಎ ಯೋಜನೆಗಳ ಅನುಷ್ಠಾನದ ಮೇಲೂ ಪರಿಣಾಮ ಬೀರುವಂತಾಗಿದೆ. ಹೀಗಾಗಿಯೇ ಬಿಡಿಎ ಇದೀಗ ಪ್ರತ್ಯೇಕ ಕಾನೂನು ಸಲಹಾ ಸಂಸ್ಥೆಯನ್ನು ನೇಮಿಸಿಕೊಳ್ಳುತ್ತಿದೆ.  ಈ ಸಂಸ್ಥೆಯು ಬಿಡಿಎಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಕ್ಕೆ ನೆರವು ನೀಡಲಿದೆ.

ಭೂವ್ಯಾಜ್ಯ ಕುರಿತು ಪರಿಣಿತಿ ಇರಬೇಕು: ಕಾನೂನು ಸಲಹಾ ಸಂಸ್ಥೆಯು ಬಿಡಿಎ ಪ್ರಕರಣಗಳ ಕುರಿತುಸಲಹೆ ನೀಡಲು 6 ವಕೀಲರ ತಂಡವನ್ನುನೇಮಿಸಬೇಕಿದೆ. ಅವರು 20 ವರ್ಷ, 10 ವರ್ಷಹಾಗೂ 5 ವರ್ಷ ಅನುಭವವುಳ್ಳ ತಲಾ ಇಬ್ಬರು ವಕೀಲರಾಗಿರಬೇಕಿದೆ. ಅವರು ಪ್ರಮುಖವಾಗಿಭೂಸ್ವಾಧೀನ, ಭೂವ್ಯಾಜ್ಯ, ನಿವೇಶನ ಹಂಚಿಕೆ ಸೇರಿಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪರಿಣಿತಿಯನ್ನು ಹೊಂದಿರಬೇಕು.

ಪ್ರಕರಣ ಇತ್ಯರ್ಥಕ್ಕೆ ಸಲಹೆ: ಕಾನೂನು ಸಲಹಾ ಸಂಸ್ಥೆಗೆ ಬಿಡಿಎ ಪ್ರಕರಣಗಳ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಆ ಪ್ರಕರಣದ ಬಿಡಿಎಪರವಾಗಿ ತೀರ್ಪು ಬರುವಂತೆ ಮಾಡಲು ಯಾವ ರೀತಿಯಲ್ಲಿ ಕೆಲಸ ಮಾಡಬೇಕು, ಕೋರ್ಟ್‌ಗೆ ಯಾವ ರೀತಿಯ ಅಫಿಡವಿಟ್‌ ಸಲ್ಲಿಸಬೇಕು ಎಂಬ ಬಗ್ಗೆ ಸಲಹೆ ನೀಡಬೇಕಿದೆ.

ಸಮನ್ವಯಕಾರರ ನೇಮಕ: ಕೋರ್ಟ್‌ ಪ್ರಕರಣಗಳ ಕುರಿತು ಕಾನೂನು ಸಲಹಾ ಸಂಸ್ಥೆ ಅಥವಾ ವಕೀಲರಿಗೆ ಮಾಹಿತಿ ನೀಡುವುದಕ್ಕೆ ಬಿಡಿಎಯಿಂದ ಪ್ರತ್ಯೇಕಸಮನ್ವಯಕಾರರನ್ನು ನೇಮಿಸಲಾಗುತ್ತದೆ. ಅವರುಪ್ರಕರಣ ಯಾವ ನ್ಯಾಯಾಲಯದಲ್ಲಿದೆ, ಈವರೆಗೆನಡೆದಿರುವ ಬೆಳವಣಿಗೆಗಳು, ಮುಂದಿನ ವಿಚಾರಣೆ ಯಾವ ದಿನಾಂಕದಲ್ಲಿದೆ ಎಂಬಿತ್ಯಾದಿ ಮಾಹಿತಿಯನ್ನುಕಾನೂನು ಸಲಹಾ ಸಂಸ್ಥೆ ಜತೆಗೆ ಹಂಚಿಕೊಳ್ಳಲಿದ್ದಾರೆ.ಆಮೂಲಕ ಪ್ರಕರಣದ ಬಗೆಗಿನ ಸಂಪೂರ್ಣ ಮಾಹಿತಿ ಲಭ್ಯವಾಗುವಂತೆ ಮಾಡಲಾಗುತ್ತದೆ.

5619 ಪ್ರಕರಣಗಳು: ನ್ಯಾಯಾಲಯಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿವೆ. ಆ ಪ್ರಕರಣಗಳು ಸಿವಿಲ್‌ ನ್ಯಾಯಾಲಯ, ಗ್ರಾಹಕ ನ್ಯಾಯಾಲಯ, ರೇರಾ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಲ್ಲಿ ದಾಖಲಾಗಿವೆ. ಒಟ್ಟಾರೆ ವಿವಿಧ ನ್ಯಾಯಾಲಯಗಳಲ್ಲಿ ಬಿಡಿಎ ವಿರುದ್ಧ 5,619 ಪ್ರಕರಣಗಳಿವೆ. ಅವುಗಳ ಇತ್ಯರ್ಥ ಬಿಡಿಎಗೆ ದೊಡ್ಡ ತಲೆನೋವಾಗಿದೆ.

ಪ್ರಕರಣ ಇತ್ಯರ್ಥವಾಗದಿದ್ದರೆ ದಂಡ: ಕಾನೂನು ಸಲಹಾ ಸಂಸ್ಥೆ ನ್ಯಾಯಾಲಯಗಳಲ್ಲಿ ಬಿಡಿಎ ಪರವಾಗಿ ಪ್ರಕರಣ ಇತ್ಯರ್ಥವಾಗುವಂತೆ ಮಾಡಬೇಕಿದೆ. ಅದಕ್ಕೆತಕ್ಕಂತೆ ಸಲಹೆಗಳನ್ನು ನೀಡಬೇಕಿದೆ. ಒಂದು ವೇಳೆಪ್ರಕರಣ ಬಿಡಿಎ ಪರವಾಗಿ ಆಗದಿದ್ದರೆ ಬಿಡಿಎಕಾನೂನು ಸಲಹಾ ಸಂಸ್ಥೆಗೆ ದಂಡ ವಿಧಿಸಲಿದೆ. ಸ್ವಲ್ಪಮಟ್ಟಿನ ವೈಫ‌ಲ್ಯಕ್ಕೆ ಸಲಹಾ ಸಂಸ್ಥೆಗೆ ನೀಡಲಾಗುವಬಿಲ್‌ನಲ್ಲಿ ಶೇ. 10 ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ಪೂರ್ಣ ವೈಫ‌ಲ್ಯ ಕಂಡರೆ ಕಾನೂನು ಸಲಹಾ ಸಂಸ್ಥೆ ಬಿಡಿಎಗೆ ನೀಡುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.

ಬಿಡಿಎ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ಬಿಡಿಎ ಪರವಾಗಿ ತೀರ್ಪು ಬರುವಂತೆ ಮಾಡಲು ಪ್ರತ್ಯೇಕ ಕಾನೂನು ಸಲಹಾ ಸಂಸ್ಥೆಯನ್ನು ನೇಮಿಸಲಾಗುತ್ತದೆ. ಅವರಿಗೆಪ್ರಮುಖ ಪ್ರಕರಣಗಳ ಮಾಹಿತಿ ನೀಡಿ ಪ್ರಕರಣ ನಮ್ಮ ಪರವಾಗಿ ತೀರ್ಪು ಬರುವಂತೆಮಾಡಲು ಸಲಹೆ ಕೋರಲಾಗುವುದು. -ರಾಜೇಶ್‌ ಗೌಡ, ಬಿಡಿಎ ಆಯುಕ್ತ

-ಗಿರೀಶ್‌ ಗರಗ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.