ಹೊಣೆ ತಿಳಿಸಲು ನಮ್ಮ ಕಸ ನಮ್ಮ ಜವಾಬ್ದಾರಿ
Team Udayavani, Mar 26, 2017, 12:10 PM IST
ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಬಜೆಟ್ನಲ್ಲಿ “ನಮ್ಮ ಕಸ ನಮ್ಮ ಜವಾಬ್ದಾರಿ, ನಮ್ಮ ವಾರ್ಡ್ನ ಕಸ ವಾರ್ಡ್ ಜವಾಬ್ದಾರಿ’ ಸೇರಿ ಹಲವರು ಕಾರ್ಯಕ್ರಮ ಘೋಷಿಸಿದ್ದು, ಅದಕ್ಕಾಗಿ 751.70 ಕೋಟಿ ರೂ.ಮೀಸಲಿಡಲಾಗಿದೆ.
ಕಸ ವಿಲೇವಾರಿಗೆ 600 ಕೋಟಿ ರೂ.ಮೀಸಲಿಡಲಾಗಿದ್ದು ಪ್ರತಿ ಮನೆಗಳಲ್ಲಿ ಕಸ ಬೇರ್ಪಡಿಸಲು ಎರಡು ಕಸದ ಬುಟ್ಟಿ ಮತ್ತು ಒಂದು ಚೀಲವನ್ನು ಪಾಲಿಕೆ ವತಿಯಿಂದಲೇ ಉಚಿತವಾಗಿ ನೀಡಲು 5 ಕೋಟಿ ರೂ. ಅನುದಾನ ನೀಡಲಾಗಿದೆ. ಮನೆಗಳಲ್ಲಿ ಉತ್ತತ್ತಿಯಾಗುವ ಹಸಿ ತ್ಯಾಜ್ಯ ವನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುವ ಕುರಿತು ಅರಿವು ಮೂಡಿಸಲಾಗುವುದು.
ಜತೆಗೆ ಕಾಂಪೋಸ್ಟ್ ಸಂತೆ ಹಮ್ಮಿಕೊಳ್ಳಲು 2 ಕೋಟಿ ರೂ. ಒದಗಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಉದ್ಯಾನವನಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ವಿಕೇಂದ್ರಿಕೃತ ಕಾಂಪೋಸ್ಟ್ ಕೇಂದ್ರಗಳನ್ನು ತೆರೆಯುವುದು. ಘನ ತ್ಯಾಜ್ಯ ವಿಂಗಡಣೆಗಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ವಸತಿ ಸಂಕೀರ್ಣಗಳಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ಕಡ್ಡಾಯಗೊಳಿಸಿ, ಘನತ್ಯಾಜ್ಯ ಕರದಲ್ಲಿ ವಿನಾಯಿತಿ ನೀಡಲು ಕ್ರಮಕೈಗೊಳ್ಳಲಾಗಿದೆ. ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಂಕ್ ವರ್ಕರ್ಗಳ ಸೇವೆಯನ್ನು ನಾಗರಿಕರಿಗೆ ತರಬೇತಿ ಮತ್ತು ಅರಿವು ಮೂಡಿಸಲು ಬಳಸಿಕೊಳ್ಳಲಾಗುವುದು.
ಕಸದ ವಿಲೇವಾರಿ ನಿಗಾಕ್ಕೆ ಮಾರ್ಷಲ್ಗಳು
ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರು, ಕಸ ವಿಂಗಡಿಸದೆ ನೀಡುವವರ ಮೇಲೆ ನಿಗಾ ವಹಿಸಲು ಪ್ರತಿವಾರ್ಡ್ಗೆ ಒಬ್ಬ ಮಾರ್ಷಲ್ರಂತೆ 198 ಮಾರ್ಷಲ್ಗಳನ್ನು ನಿಯೋಜಿಸುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಮೂಲದಲ್ಲೇ ಕಸ ವಿಂಗಡನೆ ಕಡ್ಡಾಯಗೊಳಿಸಿದ್ದರೂ ಕಸ ವಿಂಗಡಿಸಿ ನೀಡದವರು,
ಹಸಿ/ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸದ ಪೌರ ಕಾರ್ಮಿಕರು, ನಿವೇಶನ, ಫುಟ್ಪಾತ್ನಲ್ಲಿ ಕಸ ಸುರಿಯುವವರನ್ನು ಮಾರ್ಷಲ್ಗಳು ಪತ್ತೆ ಹಚ್ಚಿ 500 ರೂ. ದಂಡ ವಿಧಿಸಲಿದ್ದಾರೆ. ನೈರ್ಮಲ್ಯ ಕಾಪಾಡಲು ಈ ವ್ಯವಸ್ಥೆ ಜಾರಿಗೆ ಸಜ್ಜಾಗಿರುವ ಪಾಲಿಕೆ, ನಿವೃತ್ತ ಸೈನಿಕರನ್ನು ಮಾರ್ಷಲ್ಗಳನ್ನಾಗಿ ನಿಯೋಜಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ