ಎಟಿಎಂನೊಳಗೆ ಹಲ್ಲೆ ಕೇಸ್; ಆರೋಪಿ ರೆಡ್ಡಿಗೆ 8 ದಿನ ಪೊಲೀಸ್ ಕಸ್ಟಡಿ
Team Udayavani, Mar 7, 2017, 1:10 PM IST
ಬೆಂಗಳೂರು:ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿಯನ್ನು 6ನೇ ಎಸಿಎಂಎಂ ಕೋರ್ಟ್ 8ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಜ್ಯೋತಿ ಉದಯ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಆರೋಪಿ ರೆಡ್ಡಿಯನ್ನು ಪೊಲೀಸರು ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದರು.
ಆದರೆ ನ್ಯಾಯಾಧೀಶರು ರೆಡ್ಡಿಯನ್ನು 8ನೇ ದಿನಗಳ ಕಾಲ ಪೊಲೀಶ್ ವಶಕ್ಕೆ ಒಪ್ಪಿಸಿ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.