ಪರ್ವ ಪಾರಾಯಣ

ಕಲಾಕ್ಷೇತ್ರಕ್ಕೆ ರಂಗು ತುಂಬಿದ ಪರ್ವ  ಪುಳಕಿತರಾದ ಭೈರಪ್ಪ ಅಭಿಮಾನಿಗಳು

Team Udayavani, Oct 24, 2021, 11:17 AM IST

ಪರ್ವ ಪಾರಾಯಣ

ಬೆಂಗಳೂರು: ಎಸ್‌.ಎಲ್‌. ಭೈರಪ್ಪ ಅವರ “ಪರ್ವ’ ಕಾದಂಬರಿಯ ರಂಗಪ್ರಯೋಗ ರಾಜಧಾನಿಯ ಕಲಾಪ್ರಿಯರ ಮನ ತಲ್ಲಣಿಸುವಲ್ಲಿ ಯಶಸ್ವಿಗೊಂಡಿದೆ. ನಗರದಲ್ಲಿ ಮೊದಲ ಬಾರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಂಗಪ್ರಯೋಗ ವೀಕ್ಷಣೆಗೆ ಎಂಟು ಗಂಟೆಗಳ ಕಾಲ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ವ್ಯಾಸ ಮಹರ್ಷಿ ಬರೆದ ಮಹಾಭಾರತ ಕಾದಂಬರಿಯ ಆಧಾರವಾಗಿಟ್ಟುಕೊಂಡು ರಚಿತ ಗೊಂಡ ಪರ್ವ ಕಾದಂಬರಿಯ ರಂಗ ಪ್ರಯೋಗವನ್ನು ಮೈಸೂರಿನ ರಂಗಾಯಣ ತಂಡ ಅಚ್ಚುಕಟ್ಟಾಗಿ ನಿರ್ವಹಿಸಿತು.

ಎರಡು ದಿನಗಳ ಪ್ರದರ್ಶನದಲ್ಲಿ ಮೊದಲ ದಿನದ ಪ್ರದರ್ಶನ ಯಶಸ್ವಿಗೊಂಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಸರಿ ಸುಮಾರು ಒಂದೂವರೆ ವರ್ಷ ದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತ ಗೊಂಡು ಖಾಲಿ ಖಾಲಿ ಎಂಬಂತಾಗಿದ್ದ ರವೀಂದ್ರ ಕಲಾಕ್ಷೇತ್ರಕ್ಕೆ “ಪರ್ವ-ವಿರಾಟ ದರ್ಶನ’ ನಾಟಕ ಪ್ರದರ್ಶನ ಕಳೆ ತಂದುಕೊಟ್ಟಿದೆ. ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್‌ಗಳಲ್ಲಿ 500 ರೂ. ಮತ್ತು 250 ರೂ. ವಿಧಗಳಿದ್ದು, ಎಲ್ಲಾ ಟಿಕೆಟ್‌ಗಳು ಖರೀದಿಯಾಗಿತ್ತು.

ಬೆಂಗಳೂರಿನ ನಾನಾ ಭಾಗಗಳಿಂದ ಸುಮಾರು 800ಕ್ಕೂ ಹೆಚ್ಚು ಜನರು ಆಗಮಿಸಿ ನಾಟಕ ವೀಕ್ಷಿಸಿದರು. ರಂಗಪ್ರಯೋಗ ವೀಕ್ಷಿಸಿದವರಲ್ಲಿ ಬಹುತೇಕರು ಹಿರಿಯರೇ ಆಗಿದ್ದು, ಕೋವಿಡ್‌ ನಂತರ ಒಂದು ರೀತಿಯ ಮನೋಲ್ಲಾಸ ಪಡೆದು ಕೊಂಡರು. ರಂಗಾಯಣ ಸಂಸ್ಥೆಯ ಪ್ರಕಾಶ್‌ ಬೆಳವಾಡಿ ಅವರ ರಂಗಪಠ್ಯ ಮತ್ತು ನಿದೇರ್ಶಿಸಿದ್ದಾರೆ. ಈ ತಂಡದಲ್ಲಿ ಒಟ್ಟು 50 ಜನ ಪಾತ್ರಧಾರಿಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಪಾತ್ರಧಾರಿಗಳು ತಮ್ಮ-ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯ ಮಾಡಿದ್ದಾರೆ.

ಇದನ್ನೂ ಓದಿ:- ಸಂಘಟಿತ ಹೋರಾಟ ಶ್ರಮಿಕರ ಹಕ್ಕು

“ಇದೊಂದು ಅಭೂತ ಪೂರ್ವ ಯಶಸ್ಸು ಆಗಿದ್ದು, ಪ್ರೇಕ್ಷಕರ ಕಣ್ಣಲ್ಲಿ ಕಂಬನಿ ಜಾರಿದೆ. ಪ್ರೇಕ್ಷಕ ರಲ್ಲಿ ಜೀವನುತ್ಸಾಹ ತುಂಬಿದ್ದು, ಎಂಟು ಗಂಟೆಗಳ ಅವಧಿಯಲ್ಲಿ ಯಾರೊಬ್ಬರೂ ಎದ್ದು ಹೋಗಿಲ್ಲ. ಸಿನಿಮಾ ರಂಗದಲ್ಲಿ ಬಾಹುಬಲಿ ಗೆದ್ದಂತಹ ಖುಷಿ, ಇಂದು ರಂಗ ಭೂಮಿಯಲ್ಲಿ ಸಂತಸ ತಂದಿದೆ.” –  ಅಡ್ಡಂಡ ಸಿ. ಕಾರ್ಯಪ್ಪ, ನಿರ್ದೇಶಕರು, ರಂಗಾಯಣ

ಬೆಂಗಳೂರಿನಲ್ಲಿ ಬಹಳ ದಿನಗಳಿಂದ ನಾಟಕ ಅಭಿರುಚಿ ಇರುವಂತವರುಪರ್ವಒಂದು ಕೆಲಸದ ಒತ್ತಡದಲ್ಲಿ ಬ್ರೇಕ್ಕೊಟ್ಟಂತಾಗಿದೆ. ಕಾಯ್ದಿರಿಸಿದ ಎಲ್ಲಾ ಟಿಕೆಟ್ಗಳನ್ನು ಖರೀದಿಸಿ, ನಾಟಕ ವೀಕ್ಷಣೆಗೆ ಬಂದಿದ್ದಾರೆ. ಇನ್ನೂ ಟಿಕೆಟ್ಗಳ ಬೇಡಿಗೆ ಹೆಚ್ಚಾಗುತ್ತಿದೆ. ಇದೊಂದು ರಂಗಾಯಣ ತಂಡಕ್ಕೆ ಯಶಸ್ವಿ ತಂದುಕೊಟ್ಟಿದೆ ಎನ್ನಬಹುದು. – ಅರಸೀಕೆರೆ ಯೋಗಾನಂದ, ರಂಗಾಯಣ ಸಂಸ್ಥೆ ಸದಸ್ಯ

ಪರ್ವ ಕಾದಂಬರಿಯ ಉತ್ಕೃಷ್ಟತೆಯನ್ನು ನಾಟಕದ ಪ್ರದರ್ಶನ ಹೆಚ್ಚಿಸಿದೆ. ದುರ್ಯೋಧನ, ಧೃತರಾಷ್ಟ್ರ, ಸಂಜಯ ಸೇರಿದಂತೆ ಪ್ರತಿಯೊಬ್ಬರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಮಕ್ಕಳಿಂದ ಹಿಡಿದು ಎಲ್ಲರೂ ನೋಡಬಹುದಾದ ರಂಗ ಪ್ರದರ್ಶನ ಇದಾಗಿದೆ. – ಗೋಪಾಲಕೃಷ್ಣ ಮೂರ್ತಿ, ಗಿರಿನಗರ ನಿವಾಸಿ

ಇದೊಂದು ಅತ್ಯಪೂರ್ವ ಪ್ರಯೋಗವಾಗಿದ್ದು, ಕಥೆಯ ವಿಸ್ತಾರ ಮತ್ತು ಕಥೆಯಲ್ಲಿ ಚರ್ಚಿತವಾಗುವಂತಹ ಧರ್ಮಸೂಕ್ಷ್ಮಗಳನ್ನು ತೆರೆದಿಡುವಂತಹ ನಾಟಕವಾಗಿದ್ದು, ಇದೊಂದು ವಿನೂತನವಾಗಿದೆ. – ಶಿವಲಿಂಗಯ್ಯ, ಬನಶಂಕರಿ ನಿವಾಸಿ

ನಾನು ಪರ್ವ ಕಾದಂಬರಿಯನ್ನು ಓದಿದ್ದೆ. ನಾಟಕ ನೋಡುವ ಕುತೂಹಲದಿಂದ ಬಂದಿದ್ದೆ. ಯಾವುದೇ ಯಾವುದೇ ಚ್ಯುತಿ ಬರದಂತೆ ಕಾದಂಬರಿಯ ಮಾಧ್ಯಮವನ್ನು ನಾಟಕದಲ್ಲಿ ಸಾಕಷ್ಟು ಅಳವಡಿಸಿಕೊಂಡಿದ್ದಾರೆ. ಮನಸ್ಸಿಗೆ ಸಮಾಧಾನಕರವಾಗಿದೆ. –ಗಿರೀಶ್ವಿರಾಜ್ಕರ್‌, ಬೆಂಗಳೂರು ನಿವಾಸಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.