Businessman kidnapped: ಹಣಕಾಸಿನ ವಿಚಾರಕ್ಕೆ ಉದ್ಯಮಿ ಅಪಹರಿಸಿದ ನಾಲ್ವರು ಆರೋಪಿಗಳ ಬಂಧನ
Team Udayavani, Oct 25, 2023, 11:30 AM IST
ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಉದ್ಯಮಿ ಅಭಿಲಾಷ್ ಎಂಬುವರನ್ನು ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ರಾಮಮೂರ್ತಿನಗರ ಪೊಲೀಸರು ಬಂಧಿ ಸಿದ್ದಾರೆ. ಸಂದೀಪ್, ಗೋಪಾಲ್ ಹಾಗೂ ಭಾಸ್ಕರ್ ಎಂಬವರನ್ನು ಬಂಧಿಸಲಾಗಿದೆ.
ಅ.20ರಂದು ಉದ್ಯಮಿ ಅಭಿಲಾಷ್ ಎಂಬವರನ್ನು ಅಪಹರಿಸಲಾಗಿತ್ತು. ಸಂಪಿಗೆಹಳ್ಳಿ ನಿವಾಸಿ ಅಭಿಲಾಷ್ ಮಹಿಳೆಯೊಬ್ಬರ ಪಾಲುದಾರಿಕೆಯಲ್ಲಿ ಉದ್ಯಮ ನಡೆಸುತ್ತಿದ್ದರು. ಇಬ್ಬರ ನಡುವೆ 1.50 ಕೋಟಿ ರೂ. ವ್ಯವಹಾರವಿತ್ತು. ಈ ಮಧ್ಯೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರಕ್ಕೆ ಮಹಿಳೆ ಕಡೆಯ ಕೆಲ ವ್ಯಕ್ತಿಗಳು ಸಂಪಿಗೆಹಳ್ಳಿ ಬಳಿ ಅಭಿಲಾಷ್ನನ್ನು ಅಪಹರಿಸಿ ರಾಮಮೂರ್ತಿನಗರದ ಗೋದಾಮು ವೊಂದರಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು. ಚಾಕು ತೋರಿಸಿ ಬೆದರಿಸಿದ್ದರು. ಅಲ್ಲದೆ, 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಆರೋಪಿಗಳು ಊಟಕ್ಕೆಂದು ಹೊರಗಡೆ ಹೋದಾಗ ಅಭಿಲಾಷ್ ಫೋನ್ನಿಂದ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ರಾಮಮೂರ್ತಿ ನಗರ ಠಾಣೆ ಪೊಲೀಸರು ಉದ್ಯಮಿಯನ್ನು ರಕ್ಷಿಸಿದ್ದಾರೆ.
ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಮಹಿಳೆ ಸೇರಿ ಇತರೆ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.