ಶಾಸಕ ಬೈರತಿ ಬಸವರಾಜ್ ಗೆ ಪಿತೃ ವಿಯೋಗ
Team Udayavani, Aug 14, 2022, 1:43 PM IST
ಕೆ.ಆರ್.ಪುರ : ನಗರಾಭಿವೃದ್ಧಿ ಸಚಿವ ಹಾಗೂ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರ ತಂದೆ ಆಂಜಿನಪ್ಪ (85) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಆಂಜಿನಪ್ಪ ಅವರು ಭಾನುವಾರ ಮುಂಜಾನೆ ನಿಧನರಾದರು.
ಮೃತರಿಗೆ ಐವರು ಪುತ್ರರು ಮೂವರು ಪುತ್ರಿಯರಿದ್ದಾರೆ, ಈ ಪೈಕಿ ಬೈರತಿ ಬಸವರಾಜ್ ಅವರು ಹಿರಿಯ ಮಗ.
ಮೃತರ ಅಂತ್ಯಕ್ರಿಯೆಯನ್ನು ಸಚಿವರ ಸ್ವಗ್ರಾಮ ಬೈರತಿ ಗ್ರಾಮದಲ್ಲಿ ಇಂದು ಸಂಜೆ 6 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.
ಇದನ್ನೂ ಓದಿ : ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಹೆಸರು ಬಿಡುವಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು