ನಟ ಯಶ್ ಹತ್ಯೆಗೆ ಚರ್ಚೆ: ಸುಳ್ಳು ಸುದ್ದಿ ಎಂದ ಸಿಸಿಬಿ
Team Udayavani, Jul 13, 2018, 6:05 AM IST
ಬೆಂಗಳೂರು: ಚಿತ್ರನಟ ಯಶ್ ಹತ್ಯೆಗೆ ರೌಡಿಶೀಟರ್ಗಳಾದ ಸೈಕಲ್ ರವಿ ಹಾಗೂ ಕೋದಂಡ ಎರಡೂವರೆ ವರ್ಷಗಳ ಹಿಂದೆ ಚರ್ಚೆ ನಡೆಸಿದ್ದರೆಂಬ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಯಶ್ ಹತ್ಯೆಗೆ ಸೈಕಲ್ ರವಿ ಹಾಗೂ ಇತರರು ಚರ್ಚೆ
ನಡೆಸಿರುವ ಬಗ್ಗೆಯಾಗಲಿ, ಸಂಚು ರೂಪಿಸಿದ ಕುರಿತಾಗಲಿ ಯಾವುದೇ ದಾಖಲೆಗಳು ಸಿಸಿಬಿ ಬಳಿಯಿಲ್ಲ. ಈ ರೀತಿಯ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ನಟ ಯಶ್ ಯಶಸ್ವಿಯಾಗಿ ತಮ್ಮ ಸಿನಿ ಜರ್ನಿ ನಡೆಸುತ್ತಿದ್ದರು. ರಾಜಾಹುಲಿ ಸಿನಿಮಾ ನಂತರ ಬಂದ ಎಲ್ಲ ಸಿನಿಮಾಗಳು ಯಶ್ಗೆ ಯಶಸ್ಸು ತಂದುಕೊಟ್ಟಿತ್ತು. ಈ ಬೆಳವಣಿಗೆ ಸಹಿಸದ ಚಿತ್ರರಂಗದ ಕೆಲ
ವ್ಯಕ್ತಿಗಳು ಯಶ್ ಹತ್ಯೆಗೆ ಸಂಚು ರೂಪಿಸಿದ್ದರು. ಈ ವಿಚಾರದಲ್ಲಿ ಸೈಕಲ್ ರವಿ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೂ
ಈತನ ವಿರೋಧಿ ಬಣದಲ್ಲಿದ್ದ ಕೋದಂಡ ಪ್ರಮುಖ ಪಾತ್ರವಹಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಒಮ್ಮೆ ಯಶ್ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಅದೃಷ್ಟವಶಾತ್ ಅಂದು ಕಾರಿನಲ್ಲಿ ಯಶ್ ಇರಲಿಲ್ಲ. ಇದರಿಂದ ಸ್ವಲ್ಪ ವಿಚಲಿತರಾದ ಯಶ್ ತಮ್ಮ ಆತ್ಮೀಯ ನಿರ್ಮಾಪಕರೊಬ್ಬರ ಜತೆ ನಗರ ಪೊಲೀಸ್ ಆಯುಕ್ತರ ಜತೆ ಬಂದು ಮೌಖೀಕವಾಗಿ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸೈಕಲ್ ರವಿಯನ್ನು ಇತ್ತೀಚೆಗೆ ಪೊಲೀಸರು ಹಿಡಿಯಲು ಹೋದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಈ ವೇಳೆ ಆತನ ಕಾಲಿಗೆ ಗುಂಡು ಹಾರಿಸಿದ ಪೊಲೀಸರು ಬಂಧಿಸಿದ್ದರು. ಮತ್ತೂಬ್ಬ ರೌಡಿಶೀಟರ್ ಕೋದಂಡ ತಲೆಮರೆಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು