ಹೆತ್ತ ತಾಯಿಗೆ ದೇಗುಲ ನಿರ್ಮಿಸಿದ ಮಕ್ಕಳು


Team Udayavani, May 14, 2018, 6:45 AM IST

Ban14051806Medn.jpg

ಬೆಂಗಳೂರು: ನವಮಾಸ ಹೊತ್ತು, ಹೆತ್ತ ತಾಯಿಯನ್ನು ವೃದ್ಧಾಶ್ರಮಗಳಲ್ಲಿ ಬಿಟ್ಟು ಅನಾಥರನ್ನಾಗಿಸುವ ಕೆಲವರ ಮಧ್ಯೆಯೂ ತಾಯಿಗೊಂದು ದೇಗುಲ ಕಟ್ಟಿಸಿ, ಪ್ರತಿನಿತ್ಯ ಪೂಜಿಸುವ ಮೂಲಕಮಾತೃ ದೇವೋಭವ ಎನ್ನುವ ಮಾತನ್ನು ನಾಲ್ವರು ಸಹೋದರರು ಸಾಕ್ಷೀಕರಿಸುತ್ತಿದ್ದಾರೆ.

ಹೌದು, ಸದ್ಯ ವಿಧಾನ ಪರಿಷತ್‌ ಕಾರ್ಯದರ್ಶಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಾಳೂರು ತಾಂಡಾದ ಅಣ್ಣಪ್ಪ ಲಮಾಣಿ ಎಂಬುವವರು ತಮ್ಮ ಮೂವರು ಸಹೋದರರ ಜತೆ ಸೇರಿ ಹೆತ್ತ ತಾಯಿಗೆ ದೇಗುಲ ಕಟ್ಟಿಸಿ ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಪೂಜಿಸುತ್ತಾ ಬಂದಿದ್ದಾರೆ. ಇಂತಹ ಮಕ್ಕಳನ್ನು ಹೆತ್ತ ತಾಯಿ ಹೇಮವ್ವ ಲಮಾಣಿ.

ಮೂಲತಃ ಬಡ ಕುಟುಂಬದ ಹೇಮವ್ವ ಲಮಾಣಿ, ತವರು ಮನೆಯ ಪೂಜಾರಿಕೆಯ ಜತೆ ಕೂಲಿ ಮಾಡಿ ತನ್ನ ಮಕ್ಕಳನ್ನು ಸಾಕಿದ್ದರು.ನಾಟಿ ವೈದ್ಯೆಯಾಗಿದ್ದು, ತನಗೆ ಗೊತ್ತಿದ್ದ ಗಿಡಮೂಲಿಕೆಗಳನ್ನು ತಾಂಡದ ಜನರಿಗೆ ನೀಡಿ ರೋಗಗಳನ್ನು ಗುಣ ಪಡಿಸುತ್ತಿದ್ದರಂತೆ. ಗ್ರಾಮದ ಯಾರ ಮನೆಯಲ್ಲಿ ಪೂಜೆಯಾದರೂ ಅಲ್ಲಿಗೆ ಹೋಗಿ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ನುಡಿಗಟ್ಟುಗಳನ್ನು ಹಾಡುವ ಮೂಲಕ ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗಿದ್ದರು.

ಮಗ ಅಣ್ಣಪ್ಪ ಲಮಾಣಿ ಪ್ರಸ್ತುತ ವಿಧಾನಸೌಧದಲ್ಲಿ ಜಮೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಮಕ್ಕಳು ವ್ಯವಸಾಯ ಮಾಡುತ್ತಿದ್ದಾರೆ. ತಾಯಿ ಜೀವಂತವಾಗಿದ್ದಾಗಲೂ ದೇವರಂತೆ ಕಾಣುತಿದ್ದ ಇವರು, ಆಕೆಯ ಅಕಾಲಿಕ ಮರಣ ನಂತರ ತಮ್ಮ ಜಾಗದಲ್ಲಿ 10ಮೀ. ಉದ್ದ ಹಾಗೂ 7 ಮೀ. ಅಗಲದಲ್ಲಿ 4 ಲಕ್ಷರೂ. ಖರ್ಚು ಮಾಡಿ ಮಂದಿರ ನಿರ್ಮಿಸಿದ್ದಾರೆ. ಬನವಾಸಿಯ ಒಬ್ಬ ಶಿಲ್ಪಿ ಕೈಯಲ್ಲಿ ಎರಡು ಅಡಿ ಎತ್ತರದ ತಾಯಿಯ ಮೂರ್ತಿ ಕೆತ್ತಿಸಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಪ್ರಸ್ತುತ ಈ ಕುಟುಂಬವು 4-5 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನದ ಜೀಣೊದ್ಧಾರಕ್ಕೂ ಮುಂದಾಗಿದೆ. ಬಾಳೂರು ತಾಂಡಾದದಲ್ಲಿ 300ಕ್ಕೂ ಹೆಚ್ಚು ಲಮಾಣಿ ಕುಟುಂಬಗಳಿದ್ದು, ಅಲ್ಲಿನ ನಿವಾಸಿಗಳು ಕೂಡಾ ಹೇಮವ್ವನನ್ನು ದೇವರಂತೆ ಪೂಜಿಸುತ್ತಾರೆ. ಪ್ರತಿ ವರ್ಷ ದಸರಾ ಸಮಯದಲ್ಲಿ 5 ದಿನಗಳ ಕಾಲ ವಿಶೇಷ ಪೂಜೆ, ಅನ್ನಸಂತರ್ಪಣೆ,ಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ತಾಯಂದಿರ ದಿನದ ವಿಶೇಷ: ಪ್ರತಿ ವರ್ಷವೂ ತಾಯಂದಿರ ದಿನದಂದು ವಿಶೇಷ ಪೂಜೆ ಮಾಡುತ್ತಾ ಬಂದಿದ್ದು, ಅಂದರಂತೆ ಈ ಬಾರಿಯೂ ಭಾನುವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರಿಗೆ ಅನ್ನಸಂತರ್ಪಣೆಯನ್ನು ಈ
ಕುಟುಂಬ ಹಮ್ಮಿಕೊಂಡಿತ್ತು.

– ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.