ಮಕ್ಕಳ ಭವಿಷ್ಯ, ಆರೋಗ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿ
Team Udayavani, Apr 7, 2021, 12:03 PM IST
ಬೆಂಗಳೂರು: ರಾಜ್ಯ ಸರ್ಕಾರ 6ರಿಂದ 9ನೇ ತರಗತಿಗೆ ಭೌತಿಕ ಹಾಗೂ ವಿದ್ಯಾಗಮ ತರಗತಿಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಮೌಲ್ಯಾಂಕನ ಪರೀಕ್ಷೆಯ ಗೊಂದಲ ಸೃಷ್ಟಿಯಾಗಿದೆ.
ಖಾಸಗಿ ಶಾಲೆಗಳಲ್ಲಿ ಕೆಲವು ಸರ್ಕಾರದಿಂದ ಅಧಿಕೃತ ಸೂಚಿನೆ ಬರುವ ಮೊದಲೇಪರೀಕ್ಷೆಗಳನ್ನು ನಡೆಸುತ್ತಿವೆ. ಇನ್ನು ಕೆಲವುಶಾಲೆಗಳು ಪರೀಕ್ಷಾ ವೇಳಾಪಟ್ಟಿಸಿದ್ಧಪಡಿಸಿ ಆನ್ಲೈನ್ ವ್ಯವಸ್ಥೆಯಲ್ಲಿಪರೀಕ್ಷೆಗೆ ಮುಂದಾಗಿವೆ. ಸರ್ಕಾರಿಶಾಲಾ ಮಕ್ಕಳಿಗೆ ಇದ್ಯಾವುದೂಆಗುತ್ತಿಲ್ಲ. ಒಟ್ಟಿನಲ್ಲಿ ಪ್ರಾಥಮಿಕಹಾಗೂ ಪ್ರೌಢಶಾಲಾ ಮಕ್ಕಳ ಪಾಲಕ, ಪೋಷಕರಲ್ಲಿ ಪರೀಕ್ಷೆ ಹಾಗೂಮೌಲ್ಯಾಂಕದನ ಗೊಂದಲ, ಆತಂಕ ಆರಂಭವಾಗಿದೆ.
ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಸೂಕ್ತ ನಿರ್ಧಾರ ಪ್ರಕಟಿಸಬೇಕು. ಮೌಲ್ಯಾಂಕನಅಥವಾ ಪರೀಕ್ಷೆಗೆ ಅವಕಾಶ ನೀಡಿದರೂ, ಎಸ್ಸೆಸ್ಸೆಲ್ಸಿಹಾಗೂ ದ್ವಿತೀಯ ಪಿಯುಸಿ ವಾರ್ಷಿಕಪರೀಕ್ಷೆಯಲ್ಲಿ ತೆಗೆದುಕೊಳ್ಳುವಷ್ಟು ಸುರಕ್ಷತಾಕ್ರಮಗಳನ್ನು ಈ ಪರೀಕ್ಷೆಯಲ್ಲಿ ತೆಗೆದುಕೊಳ್ಳಬೇಕು.ಸಾಮಾಜಿಕ ಅಂತರ, ಮಾಸ್ಕ್, ದೇಹದ ಉಷ್ಣಾಂಶತಪಾಸಣೆ ಸೇರಿದಂತೆ ದಿಢೀರ್ ಅಸ್ವಸ್ಥತೆ ಕಾಣುವಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಬರೆಯಲು ವ್ಯವಸ್ಥೆ ಕಲ್ಪಿಸಬೇಕು ಎಂದು ಪಾಲಕ, ಪೋಷರು ಆಗ್ರಹಿಸಿದ್ದಾರೆ.
ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಗೂಆರೋಗ್ಯವನ್ನುಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತನಿರ್ಧಾರ ತೆಗೆದುಕೊಳ್ಳಬೇಕು. ಮೌಲ್ಯಾಂಕನಅಥವಾ ಪರೀಕ್ಷೆಗೆ ಅವಕಾಶ ನೀಡಿದರೆ,ಅದಕ್ಕೆ ಪೂರಕವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು .●ಎಸ್.ಭಾರತಿ, ಪೋಷಕಿ, ಹೆಬ್ಬಾಳ
1ರಿಂದ 9ನೇ ತರಗತಿಯ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಮೌಲ್ಯಾಂಕನಕ್ಕೆಒಳಪಡಿಸಲೇಬೇಕು. ಇಲ್ಲದಿದ್ದರೆ ಮಕ್ಕಳಲ್ಲಿ ಓದುವಆಸಕ್ತಿ ಕ್ಷಿಣಿಸುತ್ತದೆ ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿಮಾಡಿದ ಅಪರಾಧ ಸರ್ಕಾರವೇ ಮಾಡಿದಂತಾಗುತ್ತದೆ.ಹೀಗಾಗಿ ಏ.16ರಿಂದ ಪರೀಕ್ಷೆ ಆರಂಭಿಸಿ ಏ.30ಕ್ಕೆ ಫಲಿತಾಂಶ ನೀಡುವಂತೆ ಮಾಡಬೇಕು.●ಲೋಕೇಶ್ ತಾಳಿಕಟ್ಟೆ, ಅಧ್ಯಕ್ಷ,ರುಪ್ಸಾ
ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಭವಿಷ್ಯಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಪರೀಕ್ಷೆ ನಡೆಸಬೇಕು. ಖಾಸಗಿ ಶಾಲೆಗಳಲ್ಲಿ ಪರೀಕ್ಷೆನಡೆಸುವ ಬಗ್ಗೆ ಸಿದ್ಧತೆ ಕೈಗೊಳ್ಳಲಾಗಿದೆ. ಹಲವುಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಈಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪರೀಕ್ಷೆ ಬಗ್ಗೆ ಸರ್ಕಾರ ಉತ್ತಮ ನಿರ್ಧಾರ ಪ್ರಕಟಿಸಬೇಕು. ●ಖಲೀಲ್, ಪೋಷಕ, ರುಕ್ಮಿಣಿ ನಗರ
ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯ ಮಕ್ಕಳಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಶಿಕ್ಷಣಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಸಮಾನ ಆದೇಶನೀಡಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಗೆಪ್ರತ್ಯೇಕವಾಗಿ ಎಲ್ಲ ಸುರಕ್ಷತೆಯಡಿ ಮೌಲ್ಯಾಂಕನಹಾಗೂ ಇತರೆ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು. ●ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್
ಕೋವಿಡ್ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ನಿಯಮಗಳು ಸ್ವಾಗತಾರ್ಹ. ಆದರೆ, ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು. ಈಗಾಗಲೇ ಶಾಲೆಗಳಿಗೆ ಶುಲ್ಕಪಾವತಿಸಲಾಗಿದೆ. ತರಗತಿಗಳು ನಡೆಯುವುದೇ ಅನುಮಾನವಾಗಿರುವಾಗ ಪರೀಕ್ಷೆಗಳು ನಡೆಯುತ್ತದೆಯೇ? ಎಂಬ ಗೊಂದಲ ಸೃಷ್ಟಿಯಾಗಿದೆ. ●ಪಿ.ಟಿ.ರಂಗನಾಥ್, ಪೋಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ