ಮೃತ ತಂದೆಯ ಆಧಾರ್ ದತ್ತಾಂಶಕ್ಕೆ ಅರ್ಜಿ
Team Udayavani, Mar 17, 2018, 6:45 AM IST
ಬೆಂಗಳೂರು: ತಮ್ಮ ತಂದೆಯವರು ಮೃತಪಟ್ಟಿರುವುದರಿಂದ ಅವರ ಬಯೋಮೆಟ್ರಿಕ್ ದತ್ತಾಂಶಗಳು ಸರ್ಕಾರಕ್ಕೆ ಅಗತ್ಯವಿಲ್ಲ. ದತ್ತಾಂಶ ದುರ್ಬಳಕೆಯಾಗುವ ಸಾಧ್ಯತೆಯಿರುವುದರಿಂದ ತಮ್ಮ ತಂದೆಯ ಬಯೋಮೆಟ್ರಿಕ್ ದತ್ತಾಂಶಗಳನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ವಾಪಸ್ ಕೊಡಿಸಿ ಎಂದು ಬೆಂಗಳೂರಿನ ಸಂತೋಷ್ ಮಿನ್ ಬಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬಯೋ ಮೆಟ್ರಿಕ್ ಪದ್ಧತಿ ವ್ಯವಸ್ಥೆಯಿಂದ ತಂದೆಯವರು ತೀವ್ರ ತೊಂದರೆ ಅನುಭವಿಸಿದ್ದರು. ಬೆಂಗಳೂರಿನ ಭವಿಷ್ಯ ನಿಧಿ ಕಚೇರಿಯೊಂದರಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸುವಾಗ ಬೆರಳಚ್ಚು ಹಾಗೂ ಕಣ್ಣಿನ ಪೊರೆ ನಿವಾರಣೆ ಶಸ್ತ್ರಚಿಕಿತ್ಸೆಯಿಂದ ಬಯೋಮೆಟ್ರಿಕ್ ದೃಢೀಕರಣ ವಿಫಲವಾಗಿತ್ತು. ಇದರಿಂದ ತೀವ್ರ ಅಪಮಾನಕ್ಕೆ ಒಳಗಾಗಿದ್ದ ಅವರು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದರು.
ಭವಿಷ್ಯ ನಿಧಿ ಕಚೇರಿಗಳಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಿ ಪಿಂಚಣಿ ಪಡೆಯಲು ಡಯಾಲಿಸಿಸ್, ಪ್ಯಾರಾಲಿಸಿಸ್, ಕೀಮೋ ಥೆರಪಿ ಆಗಿರುವ ಹಿರಿಯ ನಾಗರಿಕರು ಬಂದು ತೊಂದರೆ ಅನುಭವಿಸುತ್ತಿದ್ದದ್ದನ್ನು ಗಮನಿಸಿದ್ದ ಅವರು ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದರು. ವಯಸ್ಸಾಗಿ ಬೆರಳುಗಳು ಮೃದುವಾದ ಕಾರಣ ಬಯೋಮೆಟ್ರಿಕ್ ನೀಡಲಾಗದೆ ಹಿರಿಯ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಪತ್ರ ಬರೆದಿದ್ದು, ಅದು ಪೂರ್ಣಗೊಳಿಸಿ ಪ್ರಧಾನಿಗಳಿಗೆ ಕಳುಹಿಸುವ ಮೊದಲೇ ತೀರಿಕೊಂಡರು ಎಂದು ಸಂತೋಷ್ ತಿಳಿಸಿದ್ದಾರೆ.
ಬಯೋಮೆಟ್ರಿಕ್ ವ್ಯವಸ್ಥೆಯಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಆಧಾರ್ ಯೋಜನೆ ರದ್ದುಪಡಿಸಬೇಕು. ಜತೆಗೆ ತಂದೆಯ ಬಯೋಮೆಟ್ರಿಕ್ ದತ್ತಾಂಶ ಸರ್ಕಾರಕ್ಕೆ ಉಪಯೋಗವಿಲ್ಲದ ಕಾರಣ ಮುದ್ರಿತ ದತ್ತಾಂಶವನ್ನು ವಾಪಸ್ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವನ್ನು ಕೋರಿದ್ದು, ನ್ಯಾಯಪೀಠ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿದೆ.
ಫ್ರೇಮ್ ಕಟ್ಟಿಸಿಕೊಳ್ಳುತ್ತೇನೆ
ತಂದೆಯ ಬಯೋಮೆಟ್ರಿಕ್ ದತ್ತಾಂಶಗಳನ್ನು ಪ್ರಾಧಿಕಾರ ಮುದ್ರಿತ ರೂಪದಲ್ಲಿ ಹಿಂದಿರುಗಿಸಿದರೆ, ಅದಕ್ಕೆ ಫ್ರೇಮ್ ಕಟ್ಟಿಸಿ ಜೋಪಾನವಾಗಿ ಇರಿಸಿಕೊಳ್ಳುತ್ತೇನೆ. ಅದನ್ನು ನೋಡಿದಾಗಲೆಲ್ಲ ಅವರು ನಮ್ಮೊಂದಿಗೆ ಇರುವಂತೆ ಹಾಗೂ ಅವರ ಆಶೀರ್ವಾದ ನಮ್ಮ ಮೇಲಿದೆ ಎಂಬ ಭಾವನೆ ಮೂಡಲಿದೆ ಎಂದು ಸಂತೋಷ್ “ಉದಯವಾಣಿ’ಗೆ ತಿಳಿಸಿದರು. ಪರಿಸ್ಥಿತಿ ಬದಲಿಸಬೇಕಿದೆ
ಪರಿಸ್ಥಿತಿ ಬದಲಿಸಬೇಕಿದೆ
ಹಲವಾರು ಹಿರಿಯ ನಾಗರಿಕರು ಇಂದಿಗೂ ಪಿಂಚಣಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ತಾವು ಎಂತಹ ಪರಿಸ್ಥಿತಿಯಲ್ಲಿದ್ದರೂ, ಪಿಂಚಣಿ ಪಡೆಯಲು ಬಯೋಮೆಟ್ರಿಕ್ ನೀಡುವುದನ್ನು ಕಡ್ಡಾಯಗೊಳಿಸಿರುವುದು ಅಮಾನುಷವಾಗಿದೆ. ಎಷ್ಟೋ ಹಿರಿಯ ನಾಗರಿಕರು ಡಯಾಲಿಸಿಸ್, ಪ್ಯಾರಾಲಿಸಿಸ್, ಕಿಮೋ ಥೆರಪಿ ಪಡೆಯುತ್ತಿರುವವರು ಸಹ ಕಚೇರಿಗೆ ಬಂದು ಜೀವಿತ ಪ್ರಮಾಣ ಪತ್ರ ನೀಡಿ ಪಿಂಚಣಿ ಪಡೆಯಬೇಕಿದ್ದು, ಈ ಪರಿಸ್ಥಿತಿ ಬದಲಾಗಬೇಕಿದೆ ಎಂದು ಸಂತೋಷ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ