ಮೋದಿ ಸಂದೇಶ ತಲುಪಿಸಿದ ಗಣೇಶ


Team Udayavani, May 12, 2018, 1:34 PM IST

blore-9.jpg

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಒಂದು ಸಣ್ಣ ತಂಡದಲ್ಲಿರುವ ಓರ್ವ ಸದಸ್ಯ ಗಣೇಶ್‌ ಯಾಜಿ. ಆದರೆ, ಕಳೆದ ಒಂದು ವಾರದಮಟ್ಟಿಗೆ ಅವರ ದಿನಚರಿ ಆರಂಭವಾದದ್ದು ಪ್ರಧಾನಿ ನರೇಂದ್ರ ಮೋದಿ ಜತೆಗೆ. ಚುನಾವಣಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸುತ್ತಿದ ಪ್ರಧಾನಿ ಜತೆಗೇ ಇದ್ದವರು ಗಣೇಶ್‌ ಯಾಜಿ. ಅಷ್ಟೇ ಅಲ್ಲ, ಪ್ರಧಾನಿಯು ಭಾಷಣಕ್ಕೆ ನಿಂತರೆ, ಪಕ್ಕದಲ್ಲೇ ನಿಂತು ಅವರೊಂದಿಗೆ ಯಾಜಿ ಕೂಡ ಮಾತು ಆರಂಭಿಸುತ್ತಿದ್ದರು. 

ಹಾಗಾಗಿ, ಕೇವಲ ಒಂದು ವಾರದಲ್ಲಿ ರಾಜ್ಯದ ಜನತೆಗೆ ಯಾಜಿ ಅವರದ್ದು ಪರಿಚಿತ ಮುಖ ಆಗಿಬಿಟ್ಟಿದೆ. ಹಾಗಂತಾ, ಗಣೇಶ್‌ ಯಾಜಿ ಪ್ರಧಾನಿ ಆಪ್ತರಲ್ಲ; ಆಪ್ತ ಸಹಾಯಕರೂ ಅಲ್ಲ. ಪ್ರಧಾನಿಯ ಹಿಂದಿ ಭಾಷಣವನ್ನು ಸುಲಲಿತವಾಗಿ ಕನ್ನಡದಲ್ಲಿ ಜನರಿಗೆ ತಲುಪಿಸಿದ ತರ್ಜುಮೆದಾರ.

ಕಳೆದ ಐದಾರು ದಿನಗಳಲ್ಲಿ ರಾಜ್ಯಾದ್ಯಂತ ನರೇಂದ್ರ ಮೋದಿ ಅವರು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ, ಭಾಷಣ ಮಾಡಿದರು. ಅದರಲ್ಲಿ ಚಾಮರಾಜನಗರ, ಚಿತ್ರದುರ್ಗ, ತುಮಕೂರು, ವಿಜಯಪುರ, ಕೋಲಾರ ಸೇರಿ ಐದು ಕಡೆಗಳಲ್ಲಿ ನಡೆದ ಸುಮಾರು 21 ರ್ಯಾಲಿಗಳನ್ನು ಗಣೇಶ್‌ ಯಾಜಿ ಕನ್ನಡದಲ್ಲಿ ಭಾಷಾಂತರಿಸಿ ಪ್ರಧಾನಿ ಸಂದೇಶಗಳನ್ನು ಜನರಿಗೆ ತಲುಪಿಸಿದ್ದಾರೆ. 

ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸುವುದು ಸಮಸ್ಯೆ ಅಲ್ಲ. ಆದರೆ, ಜನಸಾಗರದ ಮುಂದೆ ಹಾಗೂ ಪ್ರಧಾನಿ ಪಕ್ಕದಲ್ಲಿ ನಿಂತು ಪ್ರಧಾನಿಯ ಭಾವನೆಗಳ ಸಮೇತ ಭಾಷಣದ ಸಾರವನ್ನು ತಲುಪಿಸುವುದು ದೊಡ್ಡ ಸವಾಲು ಆಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ. ಯಾಕೆಂದರೆ, ಭಾಷಣದ ನಂತರ ಅದಕ್ಕೆ ವೈಯಕ್ತಿಕವಾಗಿ ಕೇಳಿಬಂದ ಮೆಚ್ಚುಗೆ ಮಾತುಗಳು, ದೂರವಾಣಿ ಕರೆಗಳು ಆ ಸಾರ್ಥಕತೆಯನ್ನು ಹೇಳುತ್ತಿದ್ದವು ಎಂದು ಗಣೇಶ್‌ ಯಾಜಿ ತಿಳಿಸುತ್ತಾರೆ. ‚

“ಪ್ರಧಾನಿಯೇ ಆತಂಕ ದೂರ ಮಾಡಿದ್ರು’: ಭಾಷಾಂತರ ನನಗೆ ಹೊಸದಲ್ಲ; 1983ರಲ್ಲಿ ಚಿತ್ರದುರ್ಗದಲ್ಲಿ ಫಾರುಕ್‌ ಅಬ್ದುಲ್ಲಾ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಅದು ಆಕಸ್ಮಿಕವಾಗಿತ್ತು. ಇದಾದ ನಂತರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಭಾಷಣವನ್ನೂ ತರ್ಜುಮೆ ಮಾಡಿದ್ದೆ. ಆದರೆ, ಈ ಬಾರಿ ಪ್ರಧಾನಿಯ ಅದರಲ್ಲೂ ಚುನಾವಣಾ ಪ್ರಚಾರ ಭಾಷಣ ಮಾಡುವ ಅವಕಾಶ ಸಿಕ್ಕಿತು. ಇದೊಂದು ಅದ್ಭುತ ಅನುಭವ. ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಮೋದಿ ಅವರು ಮೊದಲ ಭಾಷಣ ಆರಂಭಿಸಿದಾಗ ನನ್ನಲ್ಲಿ ಆತಂಕ ಮನೆ ಮಾಡಿತ್ತು. ಅದನ್ನು ಸ್ವತಃ ಪ್ರಧಾನಿ ದೂರ ಮಾಡಿದರು ಎಂದು ಯಾಜಿ
ಮೆಲುಕು ಹಾಕಿದರು. 

ಸಂತೇಮರಹಳ್ಳಿ ರ್ಯಾಲಿಯಲ್ಲಿ ನಾನು ಮೋದಿ ಅವರ ಪಕ್ಕದಲ್ಲೇ ಒಂದು ಹೆಜ್ಜೆ ಹಿಂದೆ ನಿಂತು ಮಾತು ಆರಂಭಿಸಿದೆ. ಆದರೆ, ಮೋದಿ ಅವರು ಭುಜದ ಮೇಲೆ ಕೈಹಾಕಿ ನನ್ನನ್ನು ಮುಂದೆ ಕರೆದುಕೊಂಡರು. ಆಗ, ಧೈರ್ಯಬಂತು. ಇದಾದ ನಂತರ ಎಲ್ಲೆಡೆ ಅನಾಯಾಸವಾಗಿ ಭಾಷಾಂತರ ಮಾಡಲು ಸುಲಭವಾಯಿತು ಎಂದರು.  

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

Manipal Hospitals; ಟ್ರಾನ್ಸ್‌ಪ್ಲಾಂಟ್ನಿಂದ ಬದುಕುಳಿದವರಿಗೆ ಕ್ರಿಕೆಟ್‌ ಪಂದ್ಯದ ಉಲ್ಲಾಸ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.