ಕೊಲ್ಲಾಪುರ ಪಾದರಕ್ಷೆಗಳಿಗೆ ಜಾಗತಿಕ ಮಾನ್ಯತೆ?
Team Udayavani, Dec 19, 2017, 7:25 AM IST
ಬೆಂಗಳೂರು: ಕೊಲ್ಲಾಪುರ ಪಾದರಕ್ಷೆಗಳಿಗೆ ಶೀಘ್ರದಲ್ಲೇ ಜಾಗತಿಕ ಮಾನ್ಯತೆ ಸಿಗಲಿದೆ. ಹೌದು, ಸಾಂಪ್ರದಾಯಿಕ ಕೊಲ್ಲಾಪುರ ಪಾದರಕ್ಷೆಗಳ ತಯಾರಿಕೆ ಮತ್ತು ಮಾರಾಟದ ಪೇಟೆಂಟ್ (ಹಕ್ಕುಸ್ವಾಮ್ಯ)ಗಾಗಿ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಅರ್ಜಿ ಸಲ್ಲಿಸಿದ್ದು, ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆಯಿದೆ.
ಒಂದು ವೇಳೆ ಪೇಟೆಂಟ್ ಸಿಕ್ಕರೆ, ಕೊಲ್ಲಾಪುರ ಪಾದರಕ್ಷೆಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಲಿದೆ. ಇದರಿಂದ ತನ್ನದೇ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ಕೊಲ್ಲಾಪುರ ಪಾದರಕ್ಷೆಗಳನ್ನು ನಕಲು ಮಾಡುವುದು, ಸ್ಥಳೀಯವಾಗಿ ಎಲ್ಲೆಂದರಲ್ಲಿ ಮಾರಾಟ ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಜತೆಗೆ ಕೊಲ್ಲಾಪುರ ಪಾದರಕ್ಷೆಗೆ ಹಾಗೂ ಅವುಗಳನ್ನು ತಯಾರಿಸುವ ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಲಿದೆ.
3 ಸಾವಿರ ಕುಶಲಕರ್ಮಿಗಳು: ಪ್ರಸ್ತುತ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ, ಮಧುಬಾವಿ, ಐನಾಪುರ, ಗೊಂಡೇವಾಡಿ ಸೇರಿ ಸುತ್ತಲಿನ ಭಾಗದಲ್ಲಿ ಮೂರು ಸಾವಿರಕ್ಕೂ ಅಧಿಕ ಕುಶಲಕರ್ಮಿಗಳು ಕೊಲ್ಲಾಪುರ ಪಾದರಕ್ಷೆಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಹತ್ತಾರು ವಿನ್ಯಾಸಗಳಲ್ಲಿ ಈ ಪಾದರಕ್ಷೆಗಳು ತಯಾರಾಗುತ್ತಿವೆ. ಆದರೆ, ಇವುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ, ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕುಶಲಕರ್ಮಿಗಳಿಗೆ ಅನ್ಯಾಯ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೇಟೆಂಟ್ ಪಡೆಯಲು ಉದ್ದೇಶಿಸಲಾಗಿದೆ. ಜತೆಗೆ ಈ ರೀತಿ ಮಾಡದಿರಲು ಅಲ್ಲಿನ ನಿಗಮದೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಡಾ.ಬಾಬು ಜಗಜೀನರಾಂ ಚರ್ಮ ಕೈಗಾರಿಕೆ ಅಭಿವೃದಿಟಛಿ ನಿಗಮದ ಅಧ್ಯಕ್ಷ ಓ. ಓಂಕಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದಲೂ ಅರ್ಜಿ: ಮಹಾರಾಷ್ಟ್ರದಲ್ಲೂ ಈ ಕೊಲ್ಲಾಪುರ ಪಾದರಕ್ಷೆಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಹಾಗಾಗಿ, ಅಲ್ಲಿನ ನಿಗಮವೂ ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ. ಚೆನ್ನೈನಲ್ಲಿರುವ ಜಿಯಾಗ್ರμಕಲ್ ಇಂಡಿಕೇಷನ್ನಲ್ಲಿ ಎರಡೂ ರಾಜ್ಯಗಳು ನೋಂದಣಿ ಮಾಡಿವೆ. ಎರಡೂ ರಾಜ್ಯಗಳಿಗೆ ಪೇಟೆಂಟ್ ಸಿಗುವ ವಿಶ್ವಾಸ ಇದೆ ಎಂದರು.
ಯಾವುದೇ ಒಂದು ವಸ್ತು ಸ್ಥಳೀಯವಾಗಿ ವಿಶಿಷ್ಟ ಗುಣಮಟ್ಟ ಹೊಂದಿದ್ದರೆ, ಅದರ ಪೇಟೆಂಟ್ ಪಡೆಯಲು ಅವಕಾಶ ಇದೆ.
ಕೊಲ್ಲಾಪುರ ಪಾದರಕ್ಷೆ ಆ ಅರ್ಹತೆ ಹೊಂದಿದೆ. ಇದನ್ನು ಉಳಿಸಿ, ಬೆಳೆಸಲು ಪೇಟೆಂಟ್ ಅನುಕೂಲ ಆಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್ ತಿಳಿಸಿದರು.
ಎಂ.ಜಿ.ರಸ್ತೆಯಲ್ಲಿ
ಕೊಲ್ಲಾಪುರ ಪಾದರಕ್ಷೆ!
ಕಾವೇರಿ ಎಂಪೋರಿಯಂ ಮಾದರಿಯಲ್ಲೇ ಎಂ.ಜಿ.ರಸ್ತೆಯಲ್ಲಿ ಕೊಲ್ಲಾಪುರ ಪಾದರಕ್ಷೆಗಳ ಮಾರಾಟಕ್ಕಾಗಿಯೇ ಪ್ರತ್ಯೇಕ ಮಳಿಗೆ
ತೆರೆಯಲು ಉದ್ದೇಶಿಸಲಾಗಿದೆ ಎಂದು ಡಾ.ನಟರಾಜ್ ತಿಳಿಸಿದರು. ಸದ್ಯ ರಾಜಾಜಿನಗರ, ಮೆಜೆಸ್ಟಿಕ್ ಸುತ್ತ ಕೊಲ್ಲಾಪುರ ಪಾದರಕ್ಷೆಗಳು ಸಿಗುತ್ತವೆ. ಆದರೆ, ಈ ಪಾದರಕ್ಷೆಗಳಿಗಾಗಿಯೇ ಪ್ರತ್ಯೇಕ ಮಳಿಗೆ ಎಲ್ಲಿಯೂ ಇಲ್ಲ. ಮೈಸೂರು ಮತ್ತು ನಗರದ ಎಂ.ಜಿ.ರಸ್ತೆಯಲ್ಲಿ ಪ್ರತ್ಯೇಕ ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಾಗದ ಹುಡುಕಾಟ ಸೇರಿದಂತೆ ಪೂರಕ ಪ್ರಕ್ರಿಯೆಗಳಿಗೆ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್