ಕ್ಯಾಬ್‌ಗೆ ಸರ್ಕಾರಿ ದರ


Team Udayavani, Jan 11, 2018, 10:54 AM IST

blore-1.jpg

ಬೆಂಗಳೂರು: ಆ್ಯಪ್‌ ಆಧಾರಿತ ಕ್ಯಾಬ್‌ಗಳೂ ಸೇರಿ ನಗರದಲ್ಲಿ ಸಂಚರಿಸುವ ವಿವಿಧ ಮಾದರಿಯ ಟ್ಯಾಕ್ಸಿ, ಕ್ಯಾಬ್‌ಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿ ಬುಧವಾರ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗರಿಷ್ಠ ದರವನ್ನು ಹೆಚ್ಚಳ ಮಾಡಿದೆ.

ಕಾರುಗಳ ಮಾರಾಟ ಬೆಲೆಗಳನ್ನು ಆಧರಿಸಿ ಟ್ಯಾಕ್ಸಿ ಸೇವೆಗಳ ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿ.ಮೀ.ದರವನ್ನು ಸೂಚಿಸಿರುವ ಸರ್ಕಾರ, ಅಧಿಕ ಬೆಲೆಯ ವಾಹನಗಳನ್ನು “ಎ’ ವರ್ಗಕ್ಕೆ ಹಾಗೂ ಕಡಿಮೆ ಬೆಲೆ ವಾಹನಗಳನ್ನು “ಡಿ’ ವರ್ಗಕ್ಕೆ ಸೇರಿಸಿ ಒಟ್ಟು, ನಾಲ್ಕು ವರ್ಗಗಳಲ್ಲಿ (ಎ, ಬಿ, ಸಿ, ಡಿ) ವರ್ಗೀಕರಿಸಿ ದರ ನಿಗದಿಪಡಿಸಿದೆ. ಈ ಪೈಕಿ “ಡಿ’ ವರ್ಗದಲ್ಲಿ ಬರುವ ಟಾಟಾ ಇಂಡಿಕಾ, ಮಾರುತಿ ಅಲ್ಟೊ ಮಾದರಿಯ ಕಾರುಗಳಿಗೆ 4 ಕಿ.ಮೀ.ಗೆ ಕನಿಷ್ಠ 44 ರೂ. ನಿಗದಿಪಡಿಸಲಾಗಿದೆ. ಅಂದರೆ, ಟ್ಯಾಕ್ಸಿಯನ್ನು ಹತ್ತಿ ಇಳಿದರೆ ಪ್ರಯಾಣಿಕರು 44 ರೂ. ತೆರಲೇಬೇಕು. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ.

4 ಕಿ.ಮೀ. ನಂತರ ಹೇಗೆ?: ಕನಿಷ್ಠ ದೂರ ಕ್ರಮಿಸಿದ ನಂತರ, ಆಯಾ ವಾಹನದ ವರ್ಗವನ್ನು ಆಧರಿಸಿ ಕನಿಷ್ಠ ಹಗೂ ಗರಿಷ್ಠ ದರ ನಿಗದಿ ಮಾಡಲಾಗಿದೆ. “ಡಿ’ ವರ್ಗದ (5 ಲಕ್ಷ ರೂ. ವರೆಗಿನ) ವಾಹನಗಳಿಗೆ ಪ್ರತಿ ಕಿ.ಮೀ.ಗೆ ಕನಿಷ್ಠ 11 ರೂ. ಹಾಗೂ ಗರಿಷ್ಠ 22 ರೂ. ನಿಗದಿಪಡಿಸಲಾಗಿದೆ. “ಸಿ’ ವರ್ಗದ (5ರಿಂದ 10 ಲಕ್ಷ ರೂ. ಒಳಗಿನ) ವಾಹನಗಳಿಗೆ ಕನಿಷ್ಠ 12 ಮತ್ತು ಗರಿಷ್ಠ 24 ರೂ., “ಬಿ’ ವರ್ಗದ (10ರಿಂದ 16 ಲಕ್ಷ ರೂ.) ವಾಹನಗಳಿಗೆ ಕನಿಷ್ಠ 16 ಹಾಗೂ ಗರಿಷ್ಠ 34 ರೂ. ಮತ್ತು “ಎ’ ವರ್ಗದ (16 ಲಕ್ಷ ಮೇಲ್ಪಟ್ಟ) ವಾಹನಗಳಿಗೆ ಕನಿಷ್ಠ 20 ರೂ. ಹಾಗೂ ಗರಿಷ್ಠ 45 ರೂ. ನಿಗದಿಪಡಿಸಲಾಗಿದೆ. “ಕರ್ನಾಟಕ ಆನ್‌ ಡಿಮ್ಯಾಂಡ್‌ ಟ್ರಾನ್ಸ್‌ಪೊರ್ಟೆಷನ್‌ ಟೆಕ್ನಾಲಜಿ ಅಗ್ರಿಗೇಟರ್‌ ರೂಲ್ಸ್‌-2016′ ಅಡಿ ನಗರದ 25 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಸಿಟಿ ಟ್ಯಾಕ್ಸಿಗಳಿಗೆ ಈ ದರ ಅನ್ವಯ ಆಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ದರ ಪಾಲನೆಗೆ ಇಲಾಖೆ ಬಳಿಯಿಲ್ಲ ವ್ಯವಸ್ಥೆ: ಆದರೆ, ನಿಗದಿಪಡಿಸಿದ ಈ ದರಗಳ ಪಾಲನೆಗೆ ಸಂಬಂಧಿಸಿದಂತೆ ನಿಗಾ ವಹಿಸಲು ಸಾರಿಗೆ ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ. ಕೇವಲ ಪ್ರಯಾಣಿಕರ ದೂರು ಆಧರಿಸಿ ಅಥವಾ
ಮ್ಯಾನ್ಯುವಲ್‌ ಆಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ನಗರದಲ್ಲಿ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಲಿಕ್ಕೂ ಸಾರಿಗೆ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಕೇಂದ್ರದ ನೀತಿ ಆಯೋಗ ಕೂಡ ಈ ದರ ನಿಗದಿ ಪಾಲನೆ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.

ಸಾಮಾನ್ಯವಾಗಿ ಬಿಎಂಟಿಸಿ ಬಸ್‌ನಲ್ಲಿ 4 ಕಿ.ಮೀ.ಗೆ ಒಬ್ಬ ಪ್ರಯಾಣಿಕರಿಗೆ 10 ರೂ. ಆಗುತ್ತದೆ. ನಾಲ್ಕು ಜನರಿಗೆ ಇದನ್ನು ಲೆಕ್ಕಹಾಕಿದರೆ, 40 ರೂ. ಆಗುತ್ತದೆ. ಇಷ್ಟೇ ದೂರವನ್ನು ಮೆಟ್ರೋದಲ್ಲಿ ಕ್ರಮಿಸಿದರೆ ಕೇವಲ 8 ರೂ. ಆಗಲಿದ್ದು, ನಾಲ್ವರಿಗೆ 32 ರೂ. ತಗಲುತ್ತದೆ. ಆದರೆ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ 44 ರೂ. ಜತೆಗೆ ಕಾಯುವಿಕೆ ದರವೂ ಸೇರ್ಪಡೆ ಆಗುತ್ತದೆ. ಈ ಟ್ಯಾಕ್ಸಿಗಳ ದರ ಏರಿಕೆ ಹಿಂದಿನ ಉದ್ದೇಶ ಸಾರ್ವಜನಿಕ ಸಾರಿಗೆಯನ್ನ ಪ್ರೋತ್ಸಾಹಿಸುವುದಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಹಿಂದೆ ಪ್ರತಿ ಕಿ.ಮೀ.ಗೆ 5 ಇತ್ತು!: ಈ ಹಿಂದೆ ಪ್ರತಿ ಕಿ.ಮೀ.ಗೆ ಎಸಿ ವ್ಯವಸ್ಥೆ ಇಲ್ಲದ ಕ್ಯಾಬ್‌ನಲ್ಲಿ ಒಂದು ಕಿ.ಮೀ.ಗೆ ಗರಿಷ್ಠ 14.5 ರೂ. ಹಾಗೂ ಎಸಿ ಕ್ಯಾಬ್‌ ಗಳಲ್ಲಿ ಒಂದು ಕಿ.ಮೀಗೆ ಗರಿಷ್ಠ 19.5 ರೂ. ದರವಿತ್ತು. ಕೆಲವೊಮ್ಮೆ ಗ್ರಾಹಕರು ಕಿ.ಮೀ. ಒಂದಕ್ಕೆ ಕೇವಲ 5 ರೂ. ನೀಡಿ ಪ್ರಯಾಣಿಸುತ್ತಿದ್ದರು.

ಅಂದರೆ, ಈಗ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತಲೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಕ್ಯಾಬ್‌, ಟ್ಯಾಕ್ಸಿ ಸೇವೆ ಲಭ್ಯವಾಗುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಲಾಭವಾದರೂ ಓಲಾ ಮತ್ತು ಉಬರ್‌ ರೀತಿಯ ಅಗ್ರಿಗೇಟರ್‌ಗಳೊಂದಿಗೆ ವಹನ ಜೋಡಣೆ ಮಾಡಿಕೊಂಡ ಚಾಲಕರಿಗೆ ನಷ್ಟವಾಗುತ್ತಿತ್ತು. ಪ್ರಸ್ತುತ ಸರ್ಕಾರದ ಈ ನಿರ್ಧಾರವನ್ನು ಅಗ್ರಿಗೇಟರ್‌ಗಳು ಕೂಡ ಸ್ವಾಗತಿಸಿವೆ. “ಇದೊಂದು ಸ್ವಾಗತಾರ್ಹ ನಿರ್ಧಾರ.

ಇದರಿಂದ ಸಾವಿರಾರು ಚಾಲಕರ ಆದಾಯ ಹೆಚ್ಚಳವಾಗಲಿದೆ. ಆ ಮೂಲಕ ಅವರ ಜೀವನಮಟ್ಟ ಕೂಡ ಸುಧಾರಿಸಲಿದೆ. ಜತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ. ಸರ್ಕಾರ ನಿಗದಿಪಡಿಸಿದ ಹೊಸ ದರವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ,’ ಎಂದು ಉಬರ್‌ ಇಂಡಿಯಾ (ದಕ್ಷಿಣ) ಪ್ರಧಾನ ವ್ಯವಸ್ಥಾಪಕ ಕ್ರಿಸ್ಟಿಯನ್‌ ಪ್ರೀಸ್‌ ತಿಳಿಸಿದ್ದಾರೆ. 

ಕ್ಯಾಬ್‌ ಕಂಪನಿಗಳಿಗಿರುವ ಅವಕಾಶ-ನಿರ್ಬಂಧಗಳು „ ಅಗ್ರಿಗೇಟರ್ ಪ್ರವೇಶ ಶುಲ್ಕ ಅಥವಾ ಟೋಲ್‌ ಶುಲ್ಕವನ್ನು
ಪ್ರಯಾಣಿಕರಿಂದ ಪಡೆಯಲು ಅವಕಾಶ ಇರಲಿದೆ „ ಸಮಯದ ಆಧಾರದಲ್ಲಿ (ಪೀಕ್‌ ಹವರ್‌) ದರಗಳನ್ನು ವಿಧಿಸುವಂತಿಲ್ಲ „ ಮೊದಲ 20 ನಿಮಿಷ ಕಾಯುವಿಕೆ ಶುಲ್ಕ (ವೇಯಿರಿಂಗ್‌ ಚಾರ್ಜ್‌) ಇರುವುದಿಲ್ಲ „ ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ವೇಯಿರಿಂಗ್‌ ಚಾರ್ಜ್‌ ಪಡೆಯಬಹುದು ನಿಗದಿತ ದರದ ಹೊರತು ಅನಧಿಕೃತವಾಗಿ ಯಾವುದೇ ದರ, ಶುಲ್ಕ ಪಡೆಯುವಂತಿಲ್ಲ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.