ಜನಸಿರಿ ತಂಡದಿಂದ ಶಿಕ್ಷಕರ ಹಬ್ಬ
Team Udayavani, Oct 6, 2021, 1:04 PM IST
ಚಂದಾಪುರ: ಶಿಕ್ಷಕರ ವೃತ್ತಿಯು ಪವಿತ್ರವಾದುದ್ದು ಇದರ ಪಾವಿತ್ರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂಬುದಾಗಿ ಖ್ಯಾತ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ತಿಳಿಸಿದರು. ಅವರು ಜನಸಿರಿ ತಂಡವು ಖ್ಯಾತ ಕವಿ ಹಾಗೂ ಹೋರಾಟಗಾರ ನಾಗಲೇಖ ನೇತೃತ್ವದಲ್ಲಿ ಆಯೋಜಿಸಿದ್ದ 2021ರ ಶಿಕ್ಷಕರ ಹಬ್ಬ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ಸಂಪ್ರದಾಯಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕುಗೋಡಿಯ ತರಗತಿಯೊಳಗೆ ಕಲಿಸಿ ಶಿಕ್ಷಣವು ಮಕ್ಕಳನ್ನು ಹೊರ ಜಗತ್ತಿಗೆ ಪರಿಚಯಿಸಿವ ಹೊಣೆಗಾರಿಕೆ ಶಿಕ್ಷಕರ ಮೇಲೆ ಇರುತ್ತದೆ, ತಂದೆ ತಾಯಿ ಹಾಗೂ ಪೋಷಕರ ಮಾತಿಗಿಂತಲೂ ಶಿಕ್ಷಕರ ಮಾತು ಗಳಿಗೆ ಮಕ್ಕಳು ಹೆಚ್ಚು ಬೆಲೆಕೊಡುತ್ತಾರೆ. ಮಕ್ಕಳು ಯಾವಾಗಲೂ ಶಿಕ್ಷಕರ ನಡವಳಿಕೆ, ಮಾತು, ಪ್ರೀತಿ ಹಾಗೂ ವರ್ತನೆಗಳನ್ನು ಅನುಸರಿಸುತ್ತಾರೆ.
ಇದನ್ನೂ ಓದಿ;- ಎಲ್ಲರ ಅನುಭವ, ಮಾರ್ಗದರ್ಶನದ ಅಗತ್ಯ
ಅದಕ್ಕಾಗಿ ಶಿಕ್ಷಕರು ನಮ್ಮ ರಾಮಾಯಣ, ಮಹಾ ಭಾರತ, ಸೇರಿದಂತೆ, ಸಾಹಿತಿಗಳ ಕೃತಿಗಳನ್ನು ಹೆಚ್ಚು ಹೆಚ್ಚು ಅರ್ಥವಾಗುವಂತೆ ಭೋದಿಸಬೇಕು. ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದರು. ಖ್ಯಾತ ಕವಿ ಹಾಗೂ ಹೋರಾಟಗಾರ ಜಿಗಣಿ ನಾಗಲೇಖ ಮಾತನಾಡಿದರು.
ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿಶ್ವನಾಥ್ ಮಾತನಾಡಿದರು. ಎಲೈಟ್ ಅಕಾಡೆಮಿ ಜಿ.ಮುನಿರಾಜ್,ಬೆಂಗಳೂರು ಶಿಕ್ಷಣ ನಿರ್ದೇಶಕ ಡಿ.ಆರ್.ರಾಮ ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಪದಾಧಿಕಾರಿಗಳಾದ ಡಿ.ಮುನಿರಾಜ್, ಜಿಗಣಿ ಪ್ರಹ್ಲಾದ್ ಗೌಡ,ತೆ.ನಾ.ಅಂಬರೀಶ್,ಅನಂತ್ ರಾಜ್, ಜ್ಯೋತಿಗೌಡ, ರಾಜೇಂದ್ರ ಪ್ರಸಾದ್, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ