ಪ್ರೀತಿಸುತ್ತಿದ್ದ ಹುಡುಗಿ ಹಿಂದೆ ಬಿದ್ದಿದ್ದವನಿಗೆ ಚಾಕು ಇರಿದಿದ್ದ ಪ್ರೇಮಿ, ಸ್ನೇಹಿತನ ಬಂಧನ
Team Udayavani, Dec 31, 2023, 11:37 AM IST
ಬೆಂಗಳೂರು: ಯುವತಿ ವಿಚಾರಕ್ಕೆ ಯುವಕನಿಗೆ ಚಾಕುವಿನಿಂದ ಇರಿದಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಯಂಡಹಳ್ಳಿ ನಿವಾಸಿಗಳಾದ ಧನುಷ್(20) ಶಾಬುದ್ದೀನ್(22) ಬಂಧಿತರು. ಆರೋಪಿಗಳು ಡಿ.21ರಂದು ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್ನಲ್ಲಿ ಕಾರ್ತಿಕ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದರು. ಕೆಲ ದಿನಗಳ ಹಿಂದೆ ಕಾರ್ತಿಕ್, ಧನುಷ್ನ ಪ್ರೇಯ ಸಿ ನಂಬರ್ ಪಡೆದು ಆಕೆಗೆ ಕರೆ ಮಾಡಿ ಕೆಲ ಹೊತ್ತು ಮಾತಾಡಿದ್ದ. ಜತೆಗೆ ಆಕೆಯ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆತನ ಕಾಟಕ್ಕೆ ಬೇಸತ್ತ ಯುವತಿ, ಈ ವಿಚಾರ ವನ್ನು ತನ್ನ ಪ್ರಿಯಕರ ಧನುಷ್ಗೆ ಹೇಳಿದ್ದಾಳೆ. ಅದರಿಂದ ಆಕ್ರೋಶಗೊಂಡ ಧನುಷ್, ತನ್ನ ಸ್ನೇಹಿತ ಶಾಬುದ್ದೀನ್ಗೆ ವಿಚಾರ ತಿಳಿಸಿ, ಕಾರ್ತಿ ಕ್ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದರು.
ಈ ಸಂಬಂಧ ಡಿ.21ರ ಸಂಜೆ 6.30ಕ್ಕೆ ಕಾರ್ತಿಕ್ಗೆ ಕರೆ ಮಾಡಿದ ಧನುಷ್, ಮನೆಯಿಂದ ಹೊರ ಬರುವಂತೆ ಹೇಳಿದ್ದಾನೆ. ಮನೆ ಯಿಂದ 500 ಮೀಟರ್ ದೂರಕ್ಕೆ ಕರೆಸಿ ಕೊಂಡಿದ್ದಾರೆ. ಬಳಿಕ ತನ್ನ ಪ್ರೇಯಸಿಗೆ ಏಕೆ ಕರೆ ಮಾಡುವೆ ಎಂದು ಪ್ರಶ್ನಿಸಿ, ಏಕಾಏಕಿ ಚಾಕು ಹಾ ಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ತಾನೇ ಬೈಕ್ ಹತ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು, ಚೇತರಿಸಿಕೊಂಡಿದ್ದ. ಬಳಿಕ ದೂರು ದಾಖಲಿಸಿದ್ದ. ಕಾರ್ತಿಕ್ ಹೇಳಿಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.