Road mishap: ರಸ್ತೆ ಅಪಘಾತದಲ್ಲಿ ಪತ್ರಿಕಾ ಪ್ರಸರಣ ವಿಭಾಗದ ಮ್ಯಾನೇಜರ್ ದುರ್ಮರಣ
Team Udayavani, Jan 12, 2024, 12:31 PM IST
ಬೆಂಗಳೂರು: ಬೈಕ್ನಲ್ಲಿ ಮನೆಗೆ ಹೋಗುವಾಗ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಆಂಗ್ಲ ಪತ್ರಿಕೆಯೊಂದರ ಪ್ರಸರಣ ವಿಭಾಗದ ಮ್ಯಾನೇಜರ್ ಮೃತಪಟ್ಟಿರುವ ಘಟನೆ ಪುಲಕೇಶಿನಗರ ಸಂಚಾರ ಠಾಣೆ ವ್ಯಪ್ತಿಯಲ್ಲಿ ನಡೆದಿದೆ. ಹೆಣ್ಣೂರು ನಿವಾಸಿ ಗೋಪಿ (26) ಮೃತರು.
ಗುರುವಾರ ಬೆಳಗ್ಗೆ ಪುಲಕೇಶಿನಗರದ ಕೋಲ್ಸ್ ರಸ್ತೆಯ ಹೇನ್ಸ್ ರಸ್ತೆ ಜಂಕ್ಷನ್ನಲ್ಲಿ ಅಪಘಾತ ಸಂಭವಿಸಿದೆ. ಗೋಪಿ ಗುರುವಾರ ಬೆಳಗ್ಗೆ 5.45ರ ಸುಮಾರಿಗೆ ಹೆಣ್ಣೂರು ಕಡೆಯಿಂದ ಹೇನ್ಸ್ ವೃತ್ತದ ಕಡೆಗೆ ತೆರಳುತ್ತಿದ್ದರು. ಕೋಲ್ಸ್ ರಸ್ತೆ ಪೆಟ್ರೋಲ್ ಬಂಕ್ ಕಡೆಯಿಂದ ಅತೀವೇಗವಾಗಿ ಬಂದ ಕ್ಯಾಬ್ ಚಾಲಕ ಗೋಪಿ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಕೆಳಗೆ ಬಿದ್ದ ಗೋಪಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕ್ಯಾಬ್ ಚಾಲಕ ಮೌನೇಶ್ನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಪುಲಕೇಶಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.