ಲಕ್ಷ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಬಾಕಿ
Team Udayavani, Dec 25, 2019, 3:07 AM IST
ಬೆಂಗಳೂರು: ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂದು ಗೋವಾ ಮೂಲದ “ವರ್ಲ್ಡ್ವೈಡ್ ವೆಟನರಿ ಸರ್ವೀಸ್ ಸೆಂಟರ್’ ಸಂಸ್ಥೆ ಬಿಬಿಎಂಪಿಗೆ ವರದಿ ನೀಡಿದೆ. ನಗರದಲ್ಲಿ 2012ರಲ್ಲಿ ನಾಯಿಗಳ ಸಮೀಕ್ಷೆ ನಡೆಸಲಾಗಿತ್ತು. ಏಳು ವರ್ಷಗಳ ನಂತರ ನಗರದ ಬೀದಿ ನಾಯಿಗಳ ಗಣತಿ ನಡೆಸಲಾಗಿದ್ದು, ಈ ಸಮೀಕ್ಷೆಯ ಪ್ರಕಾರ ಬಿಬಿಎಂಪಿ ಎಂಟು ವಲಯದಲ್ಲಿ ಬರೋಬ್ಬರಿ 3.09 ಲಕ್ಷ ಬೀದಿ ನಾಯಿಗಳಿವೆ.
ಅದರಲ್ಲಿ ಶೇ.54 ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2012ರ ಬಳಿಕ 2019ರ ಆಗಸ್ಟ್ ಮತ್ತು ಸೆಪ್ಟಂಬರ್ನಲ್ಲಿ ಗೋವಾದ “ವರ್ಲ್ಡ್ವೈಡ್ ವೆಟನರಿ ಸರ್ವೀಸ್ ಸೆಂಟರ್’ ಸಹಯೋಗದಲ್ಲಿ ಬಿಬಿಎಂಪಿ ಆ್ಯಪ್ ಆಧರಿಸಿ 198 ವಾರ್ಡ್ಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಿದೆ. ನಗರದ 1,86,119 ಬೀದಿ ನಾಯಿಗಳಿಗೆ ಈಗಾಗಲೇ ಸಂತಾನಹರಣ ಚಿಕಿತ್ಸೆ ಮಾಡಲಾಗಿದ್ದು, 1,23,853 (ಶೇ 46)ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ.
ಪಾಲಿಕೆಯ ಎಂಟು ವಲಯದಲ್ಲಿ ಒಟ್ಟು 3,09,972 ಬೀದಿ ನಾಯಿಗಳಿವೆ. ಅದರಲ್ಲಿ 2,06,213 ಗಂಡು, 1,03,759ಹೆಣ್ಣು ನಾಯಿ ಗಳಿವೆ. ನಗರದ ಕೇಂದ್ರ ಮೂರು ವಲಯದಲ್ಲಿ ಒಟ್ಟು 1,12,350 ಬೀದಿ ನಾಯಿಗಳಿದ್ದರೆ, ಐದು ಹೊರವಲಯದಲ್ಲಿ 1,97,622 ಬೀದಿ ನಾಯಿಗಳಿವೆ ಎಂದು ವರದಿ ತಿಳಿಸಿದೆ.
ಸಮೀಕ್ಷೆಯಲ್ಲಿ ಪರಿಗಣಿತ ಅಂಶಗಳು: ಬಿಬಿಎಂಪಿ ಪಶುಪಾಲನೆ ವಿಭಾಗದ ಅಧಿಕಾರಿ, ಸಿಬ್ಬಂದಿ ಆ್ಯಪ್ ಆಧಾರಿತವಾಗಿ ಪ್ರತಿ ವಾರ್ಡ್ಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ನಾಯಿ ಕಂಡು ಬರುವ ನಿರ್ದಿಷ್ಟ ಸ್ಥಳ, ನಾಯಿಯ ಬಣ್ಣ, ಲಿಂಗ ಹಾಗೂ ನಾಯಿಗೆ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಅಥವಾ ಇಲ್ಲವೇ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ.
ಎಲ್ಲಿ ಎಷ್ಟು ಬೀದಿನಾಯಿ?
ವಲಯ ಗಂಡು ಹೆಣ್ಣು ಒಟ್ಟು
ದಕ್ಷಿಣ 25,857 13,709 39,566
ಪೂರ್ವ 26,214 18,089 44,303
ಪಶ್ಚಿಮ 14,614 11,867 28,481
ಯಲಹಂಕ 28,267 7,950 36,217
ಮಹದೇವಪುರ 30,060 16,274 46,334
ಬೊಮ್ಮನಹಳ್ಳಿ 26,273 12,667 38,940
ದಾಸರಹಳ್ಳಿ 17,403 5,767 23,170
ಆರ್ಆರ್ನಗರ 35,525 17,436 52,961
ಒಟ್ಟು 2,06,213 1,03,759 3,09,972
ಗೋವಾದ ವರ್ಲ್ಡ್ವೈಡ್ ವೆಟರ್ನರಿ ಸರ್ವೀಸ್ ಸೆಂಟರ್ ತಂತ್ರಜ್ಞಾನ ಆಧಾರಿತ ವಾಗಿ ಉಚಿತವಾಗಿ ಸಮೀಕ್ಷಾ ವರದಿ ನೀಡಿದೆ. ಇನ್ನು ಮುಂದೆ ಪ್ರತಿವರ್ಷ ಬೀದಿನಾಯಿ ಸಮೀಕ್ಷೆ ನಡೆಸಲಾಗುವುದು. ಉಳಿದ ಶೇ.46 ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಡಿ.ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು