ಪೊಲೀಸರ ಮೇಲೆ ದಾಳಿ:ಮಗು ಕಿಡ್ನ್ಯಾಪರ್ ಕಾಲಿಗೆ ಗುಂಡು
Team Udayavani, Oct 13, 2017, 11:48 AM IST
ಬೆಂಗಳೂರು: ನಗರದ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮುಗವಿನ ಅಪಹರಣಕಾರನೊಬ್ಬ ಕಾರ್ಯಾಚರಣೆಗೆ ತೆರಳಿದ ಪೊಲೀಸರ ಮೇಲೆ ಮಾರಾಕಾಯುಧಗಳಿಂದ ಇರಿಯಲು ಯತ್ನಿಸಿದ್ದು ,ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ನೂರುಲ್ಲಾ ಎಂಬ ದುಷ್ಕರ್ಮಿಯ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಏನಿದು ಘಟನೆ ?
ಅಕ್ಟೋಬರ್ 5 ರಂದು ಬಡ ಕೂಲಿ ಕಾರ್ಮಿಕ ಮುಸ್ಲಿಂ ದಂಪತಿಯ 1 ವರ್ಷದ ಅಭಿರಾಮ್ ಎಂಬ ಮಗುವನ್ನು ಮೂವರು ಬೈಕ್ನಲ್ಲಿ ಬಂದು ಅಪಹರಿಸಿ ಇಂದಿರಾನಗರದ ಶಹನಾಜ್ ಖಾನಮ್ಗೆ ನೀಡಿದ್ದರು.
ಶಹನಾಜ್ಎಂಬಾಕೆ ಗಂಡು ಮಗು ಬೇಕೆಂದು ನೂರುಲ್ಲಾ, ಇಜಾಕ್ ಖಾನ್ ಮತ್ತು ವಾಹಿದ್ ಎನ್ನುವವರಿಗೆ 15 ಸಾವಿರ ಅಡ್ವಾನ್ಸ್ ನೀಡಿದ್ದಳು. ಅಡ್ವಾನ್ಸ್ ಪಡೆದ ಕೂಡಲೇ ಮುಗವನ್ನು ಅಪಹರಿಸಿದ್ದರು. ಈ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಅಭಿರಾಮ್ ಪೋಷಕರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಗುರುವಾರ ಶಿವಾಜಿನಗರದಲ್ಲಿ ಶಹನಾಜ್ ಬಳಿ ಮಗುವನ್ನು ಪತ್ತೆ ಮಾಡಿದ್ದರು. ಕೂಡಲೇ ಶಹನಾಜ್ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಕೆ ನೀಡಿದ ಮಾಹಿತಿಯನ್ನಾಧರಿಸಿ ಪ್ರಮುಖ ಆರೋಪಿಗಳಾದ ಇಜಾಕ್ ಮತ್ತು ವಾಹಿದ್ನನ್ನು ತಕ್ಷಣ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನೂರುಲ್ಲಾ ತಪ್ಪಿಸಿಕೊಂಡಿದ್ದ.
ಕೊತ್ತೂರು ಠಾಣೆಯ ಇನ್ಸ್ಪೆಕ್ಟರ್ ಮತ್ತು ಪಿಎಸ್ಐ ಮತ್ತು ಸಿಬಂದಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ನೂರುಲ್ಲಾನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದಾಳಿ ನಡೆಸಲು ಮುಂದಾದಾಗ ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು