ಗಾಂಜಾ ಮಾರಾಟ: ಮೂವರ ಬಂಧನ
Team Udayavani, Apr 23, 2018, 12:49 PM IST
ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಅರ್ಷದ್ ಅಲಿ (23) ಎಲ್.ಬಿ.ಶಾಸ್ತ್ರೀ ನಗರದ ರಾಹುಲ್ ಸುಂದರೇಶನ್ (20) ಹಾಗೂ ನ್ಯೂ ತಿಪ್ಪಸಂದ್ರದ ಲಕ್ಷ್ಮಣ್ ಕೆ. ಬಂಧಿತರು.
ಇಸ್ಲಾಂಪುರ ಸಮೀಪದ ಆಟದ ಮೈದಾನದಲ್ಲಿ ಗಾಂಜಾ ತುಂಬಿದ್ದ ಚಿಕ್ಕ ಪ್ಯಾಕೆಟ್ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಮೂವರು ಆರೋಪಿಗಳು ಸಿಕ್ಕಬಿದ್ದಿದ್ದು, ಅವರಿಂದ 1.5 ಕೆ.ಜಿ. ಗಾಂಜಾ, 4 ಡ್ರ್ಯಾಗರ್, ಒಂದು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ವೇಳೆ ಬಂಧಿತರೊಂದಿಗಿದ್ದ ಸದ್ದಾಂ, ಸಿದ್ದಿಕಿ, ಖಾಸಿಪ್, ಜಾವಿದ್, ಅಸ್ಲಾಂ ಎಂಬುವವರು ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹೊಸಕೋಟೆ, ಆಂಧ್ರಪ್ರದೇಶದ ಗಡಿ ಭಾಗಗಳಿಂದ ಮದ್ಯವರ್ತಿಗಳ ಮೂಲಕ ಗಾಂಜಾ ತರಿಸಿಕೊಂಡು ಚಿಕ್ಕ ಪ್ಯಾಕೆಟ್ಗಳಲ್ಲಿ ತುಂಬಿ 200ರಿಂದ 300 ರೂ.ಗೆ ಮಾರಾಟ ಮಾಡುತ್ತಿದ್ದರು.
ಅಲ್ಲದೆ, ಆರೋಪಿಗಳೆಲ್ಲರೂ ಗಾಂಜಾ ವ್ಯಸನಿಗಳಾಗಿದ್ದು, ಗಾಂಜಾ ಮಾರಾಟದ ಜತೆಗೆ ಡ್ರ್ಯಾಗರ್ ಇಟ್ಟುಕೊಂಡು ಸಾರ್ವಜನಿಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exit Polls: ಈಗಲೂ ನನ್ನ ಭವಿಷ್ಯವೇ ನಿಜ ಆಗಲಿದೆ… ಡಿ.ಕೆ.ಶಿವಕುಮಾರ್
CBI Investigation: ಸಿಎಂ, ನಾಗೇಂದ್ರ ವಿರುದ್ಧ ಸಿಬಿಐ ತನಿಖೆ: ಬಿಜೆಪಿ ಪಟ್ಟು
Bengaluru: ಕ್ಯಾಂಪಸ್ ಸೆಲೆಕ್ಷನ್ ಆಗದ್ದಕ್ಕೆ ಯುವಕ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ
Accused: ಕೊಲೆ ಯತ್ನ ಪ್ರಕರಣದ ಆರೋಪಿ 19 ವರ್ಷಗಳ ಬಳಿಕ ಹಾಸನದಲ್ಲಿ ಬಂಧನ
Arrested: ಜನರನ್ನು ಅಡ್ಡಗಟ್ಟಿ ಮೊಬೈಲ್ ಕಸಿಯುತ್ತಿದ್ದ ಇಬ್ಬರ ಬಂಧನ