ಕುಂಚದಲ್ಲಿ ಅರಳಿದ ಶಿಲ್ಪಲೋಕ
Team Udayavani, Jun 26, 2018, 12:11 PM IST
ಬೆಂಗಳೂರು: ಚಿತ್ರಕಲೆಯಲ್ಲಿ ಶಿಲ್ಪಲೋಕ ಅರಳಿ ನಿಂತಿದೆ. ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಸೋಮವಾರದಿಂದ ಆರಂಭವಾಗಿರುವ ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದರಾದ ಅರುಣಾ ಪ್ರಸಾದ್ ಹಾಗೂ ಅನಿತಾ ಸುನೀಲ್ ಕುಮಾರ್ ಕುಂಚದಲ್ಲಿ ಶಿಲ್ಪಲೋಕವನ್ನು ಅನಾವರಣಗೊಳಿಸಿದ್ದಾರೆ. ಈ ಪ್ರದರ್ಶನ ಜೂ.28ರವರೆಗೆ ನಡೆಯಲಿದೆ.
ಪೆನ್ಸಿಲ್ ಸ್ಕೆಚ್ನಲ್ಲಿ ಮೂಡಿರುವ ರಾಧಾಕೃಷ್ಣ ಹಾಗೂ ಕಾಡಿನ ದಾರಿಯಲ್ಲಿ ಸಾಗುತ್ತಿರುವ ಎತ್ತಿನಗಾಡಿ ನೋಡುಗರನ್ನು ಸೆಳೆಯುತ್ತಿತ್ತು. ಬೆಟ್ಟದಲ್ಲಿ ಮೇಲಿರುವ ಹಳೆಯ ಕಾಲದ ದೇವಾಲಯ, ದೇವಾಲಯದ ಪ್ರಾಂಗಣದಲ್ಲಿರುವ ದೇವರ ಸಣ್ಣ ಗುಡಿಗಳು, ಹಳೆಯ ಕೋಟೆ, ದೇವಾಲಯದ ಬಾಗಿಲ ಬಳಿ ಇರುವ ಶಿಲ್ಪಾಕೃತಿಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ.
ಸೋಮವಾರ ಶಾಸಕ ಡಾ.ಅಶ್ವತ್ಥನಾರಾಯಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮತ್ತಿತರರು ಇದ್ದರು.