ಸಾಫ್ಟ್ ವೇರ್ ಕದ್ದು ಮಾರುತ್ತಿದ್ದ ತಾಂತ್ರಿಕ ಪದವೀಧರನ ಬಂಧನ
Team Udayavani, Jul 26, 2023, 1:44 PM IST
ಬೆಂಗಳೂರು: ಖಾಸಗಿ ಕಂಪನಿಯೊಂದು ಅಭಿವೃದ್ಧಿ ಪಡಿಸಿದ್ದ ಸಾಫ್ಟ್ ವೇರ್ಹ್ಯಾಕ್ ಮಾಡಿ ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಚ್ಚಿ ಮೂಲದ ಎಂಜಿನಿಯರಿಂಗ್ ಪದವೀಧರ ಅರವನೀತ್ ಸ್ವಾಮಿ(26) ಬಂಧಿತ ಆರೋಪಿ.
ಬನಶಂಕರಿ 2ನೇ ಹಂತದಲ್ಲಿರುವ ಕಂಪನಿ ಯೊಂದು ಸ್ಟಾಕ್ ಮಾರ್ಕೆಟಿಂಗ್ಗೆ ಸಂಬಂ ಧಿಸಿದ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿತ್ತು. ಈ ಸಾಫ್ಟ್ವೇರ್ ಹ್ಯಾಕ್ ಮಾಡಿದ್ದ ಆರೋಪಿ, ಅದನ್ನು ಪೈರಸಿ ಮಾಡಿ ಕೇವಲ ಆರು ಸಾವಿರ ರೂ.ಗೆ 80 ಜನರಿಗೆ ಮಾರಾಟ ಮಾಡಿದ್ದ. ಈ ಬಗ್ಗೆ ತಮ್ಮ ಗ್ರಾಹಕರೊಬ್ಬರ ಮೂಲಕ ಮಾಹಿತಿ ತಿಳಿದ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಿರುಚ್ಚಿಯ ತನ್ನ ಮನೆಯಲ್ಲಿದ್ದುಕೊಂಡೇ ಹ್ಯಾಕ್ ಮಾಡಿ ಸಾಫ್ಟ್ವೇರ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.