ವೈಭವದ ಶ್ರೀರಾಘವೇಂದ್ರ ಸ್ವಾಮಿ ಸಂಸ್ಥಾಪನಾ ದಿನಾಚರಣೆ
Team Udayavani, May 8, 2019, 3:03 AM IST
ಕೆಂಗೇರಿ: ಶ್ರೀರಾಘವೇಂದ್ರ ಸ್ವಾಮಿ ಮಠದ 40ನೇ ಸಂಸ್ಥಾಪನಾ ದಿನವು(ವಾರ್ಷಿಕೋತ್ಸವದ) ವೈಭವಯುತವಾಗಿ ಆಚರಿಸಲಾಯಿತು.
ಬೆಳಗ್ಗೆ ನೈರ್ಮಾಲ್ಯ ವಿರ್ಸಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ರಾಯರ ಬೃಂದಾವನಕ್ಕೆ ಮತ್ತು ಮುಖ್ಯ ಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಲಾಗಿತ್ತು.
ವೈಶಾಖ ಮಾಸ ಆರಂಭವಾಗಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಬೃಂದಾವನಕ್ಕೆ ಶ್ರೀಗಂಧ ಲೇಪನವನ್ನು ಮಾಡಿದ್ದು ವಿಶೇಷವಾಗಿತ್ತು. ಹೋಮ ಹವನಾದಿ ಬಳಿಕ ಪ್ರವಚನ ಸೇವೆ ಮಾಡಲಾಯಿತು. ಭಕ್ತರಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಅಧ್ಯಕ್ಷ ಡಿ.ವಿ.ರಾಘವೇಂದ್ರರಾವ್, ಕಾರ್ಯದರ್ಶಿ ಕೆ.ಎಚ್.ಮಾಧವರಾಯ, ಧರ್ಮದರ್ಶಿ ಜಿ.ಕೆ ಬಾರಧ್ವಾಜ್, ರಮಾಕಾಂತ್, ಟಿ.ವಿ.ಗುರುರಾವ್ ಸೇರಿದಂತೆ ಪದಾಧಿಕಾರಿಗಳು ಭಕ್ತರು ಹಾಜರಿದ್ದರು.