ವೈದ್ಯಕೀಯ ಮೂಲಸೌಕರ್ಯ ಸಮಸ್ಯೆ?
ಮುಂದಿನ ನಾಲ್ಕು ವಾರದಲ್ಲಿ 4ಲಕ್ಷ ಸೋಂಕು ಪ್ರಕರಣ ಸಾಧ್ಯತೆ
Team Udayavani, Oct 18, 2020, 4:14 PM IST
ಬೆಂಗಳೂರು: ಕೋವಿಡ್ ವೈರಸ್ ತೀವ್ರತೆ ಒಂದು ವೇಳೆ ಇದೇ ರೀತಿ ಮುಂದುವರಿದರೆ ನಗರದಲ್ಲಿ ಸೋಂಕಿತರ ಸಂಖ್ಯೆ ಮುಂದಿನ ನಾಲ್ಕು ವಾರಗಳಲ್ಲಿ ನಾಲ್ಕು ಲಕ್ಷದಗಡಿದಾಟಲಿದೆ. ಇದರಬೆನ್ನಲ್ಲೇ ಇದಕ್ಕೆಅನುಗುಣವಾಗಿವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯಗಳ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿರುವುದರಿಂದ ಇದರ ಪೂರೈಕೆ ಸರ್ಕಾರಕ್ಕೆ ಸವಾಲಾಗುವ ಸಾಧ್ಯತೆಗಳಿವೆ.
ಸದ್ಯ ಬೆಂಗಳೂರಿನ ಒಟ್ಟಾರೆ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿದಾಟಿವೆ. ಅಕ್ಟೋಬರ್ನಲ್ಲಿ (1 ರಿಂದ 17) ನಿತ್ಯ ಸರಾಸರಿ ನಾಲ್ಕು ಸಾವಿರ ಸೋಂಕು ಪ್ರಕರಣ ಗಳು ವರದಿಯಾಗುತ್ತಿವೆ. ಜತೆಗೆ ದೇಶದಲ್ಲೇ ಅತಿ ಹೆಚ್ಚುಪರೀಕ್ಷೆಗಳು ಇಲ್ಲಿ ನಡೆಯುತ್ತಿದ್ದು, ಜತೆಗೆಅತ್ಯಧಿಕ ಸೋಂಕು ಪ್ರಕರಣಗಳೂ ವರದಿಯಾಗುತ್ತಿವೆ .ಮುಂದಿನ ದಿನಗಳಲ್ಲಿ ಇದು ಸೃಷ್ಟಿಸಲಿರುವ ವೈದ್ಯಕೀಯ ಮೂಲ ಸೌಕರ್ಯಗಳ ಬೇಡಿಕೆಯು ಸರ್ಕಾರದ ನಿದ್ದೆಗೆಡಿಸಿದೆ.
ಮೈಸೂರಿನ “ಜೀವನ್ ರಕ್ಷಾ’ ಸಂಸ್ಥೆಯು ನಡೆಸಿರುವಸಮೀಕ್ಷೆ ಪ್ರಕಾರ ನವೆಂಬರ್ 12ಕ್ಕೆ ನಗರ ಒಟ್ಟಾರೆ ಸೋಂಕು ಪ್ರಕರಣಗಳು4.2ಲಕ್ಷಕ್ಕೆ ತಲುಪಲಿವೆ.ಅಲ್ಲದೆ, ಈ ರೀತಿಯ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ 13,000 ಆಕ್ಸಿಜನ್ ಹಾಸಿಗೆಗಳು, 10,000 ಐಸಿಯುಹಾಸಿಗೆಗಳು,6,500ವೆಂಟಿಲೇಟರ್ ಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ.
ಶೇ.80 ರಷ್ಟು ಕೊರತೆ ಸಾಧ್ಯತೆ?: ಸದ್ಯ ನಗರದಲ್ಲಿ 20 ಸರ್ಕಾರಿ ವಲಯದ ಆಸ್ಪತ್ರೆಗಳು ಮತ್ತು 115 ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲಾ ಆಸ್ಪತ್ರೆಗಳು ಒಳಗೊಂಡಂತೆ ಒಟ್ಟು 11,328ಹಾಸಿಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ.1,144ಐಸಿಯು ಹಾಸಿಗಳು,3,965 ಆಕ್ಸಿಜನ್ ಹಾಸಿಗೆಗಳಿದ್ದು, 509 ಮಾತ್ರ ವೆಂಟಿಲೇಟರ್ಗಳಿವೆ.
ಇದರ ಪ್ರಕಾರ ಶೇ.89 ಐಸಿಯು ಹಾಸಿಗೆಗಳು, ಶೇ. 70ರಷ್ಟು ಆಕ್ಸಿಜನ್ ಹಾಸಿಗೆಗಳು, ಶೇ.92 ವೆಂಟಿಲೇಟರ್ ಗಳ ಕೊರತೆಯಾಗಲಿವೆಎಂದು ಜೀವನ್ ರಕ್ಷಾ ಸಂಸ್ಥೆಯ ಯೋಜನಾ ಸಂಚಾಲಕ ಮೈಸೂರು ಸಂಜೀವ್ ಅಭಿಪ್ರಾಯಪಟ್ಟಿದ್ದಾರೆ.
ಸಮಸ್ಯೆ ಆಗದು: ದಿನದಲ್ಲಿ ವರದಿಯಾಗುವ ಕೋವಿಡ್ ಸೋಂಕಿತರ ಪೈಕಿ ಶೇ.13ರಷ್ಟು ಮಂದಿಗೆ ಮಾತ್ರ ಐಸಿಯು ಹಾಸಿಗೆ ಅಗತ್ಯವಿರುತ್ತದೆ. ಆ ಪೈಕಿ ಶೇ.5 ಮಂದಿಗೆ ವೆಂಟಿಲೇಟರ್ ಶೇ.8 ಮಂದಿ ತೀವ್ರ ಅವಲಂಬಿತ ಘಟಕದಲ್ಲಿ (ಎಚ್ಡಿಯು) ಆಕ್ಸಿಜನ್ ಸೌಲಭ್ಯ ಒಳಗೊಂಡ ಚಿಕಿತ್ಸೆ ಬೇಕಾಗುತ್ತದೆ. ಸದ್ಯಸರಾಸರಿ ನಾಲ್ಕು ಪ್ರಕರಣಗಳ ವರದಿಯಾದರೆ 200 ಮಂದಿಗೆ ವೆಂಟಿಲೇಟರ್ಅಗತ್ಯವಿರುತ್ತದೆ. ಉಳಿದಂತೆ ಸುಮಾರು 300 ಮಂದಿಗೆ ಎಚ್ಡಿಯು ಹಾಸಿಗೆಬೇಕಾಗುತ್ತದೆ. ಈಗಾಗಲೇ ಇಷ್ಟು ಪ್ರಮಾಣದಲ್ಲಿ ವೆಂಟಿಲೇಟರ್ ಮತ್ತು ಹಾಸಿಗೆಗಳು ಲಭ್ಯವಿವೆ. ಒಂದೇ ದಿನ ಐದು ಸಾವಿರ ಮಂದಿಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದು ಬಿಬಿಎಂಪಿ ವ್ಯಾಪ್ತಿ ಕೋವಿಡ್ ರೋಗಿಗಳ ಸ್ಥಳಾಂತರ ಸಮಿತಿ ಅಧ್ಯಕ್ಷ ತುಷಾರ್ ಗಿರಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರೀಕ್ಷೆ ಇನ್ನಷ್ಟು ಹೆಚ್ಚಳವಾಗಿ ನಿತ್ಯ ಪ್ರಕರಣಗಳು ಒಂದು ವೇಳೆ ಆರು ಸಾವಿರಕ್ಕೂ ಅಧಿಕವಾದರೂ ನಿರ್ವಹಣೆ ಅಗತ್ಯ ವ್ಯವಸ್ಥೆ ಮಾಡಲಾ ಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 100 ವೆಂಟಿಲೇಟರ್ಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 150 ವೆಂಟಿಲೇಟರ್ಗಳ ಅಳವಡಿಸಲು ಕ್ರಮಕೈಗೊಂಡಿದ್ದು, ಅಕ್ಟೋಬರ್ ಅಂತ್ಯಕ್ಕೆ 250 ವೆಂಟಿಲೇರ್ಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಜತೆಗೆ ಸಾಮಾನ್ಯ ಹಾಸಿಗೆ ಸಾಮರ್ಥ್ಯವನ್ನು ಕಡಿಮೆ ಮಾಡಿ ಆಕ್ಸಿಜನ್ ಹಾಸಿಗೆಗಳನ್ನು ಶೇ.40 ರಷ್ಟು ಹೆಚ್ಚಿಸಲಾಗು ವುದು. ಅಲ್ಲದೆ, 100ಕ್ಕೂ ಹೆಚ್ಚು ಹಾಸಿಗೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡುವ ನಿಟ್ಟಿನಲ್ಲಿ ಶೀಘ್ರ ಮಾತುಕತೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 10 ಲಕ್ಷ ಗಡಿದಾಟುವ ಪ್ರಕರಣ : ರಾಜ್ಯದಲ್ಲಿ ಅ. 12ರೊಳಗೆ ಸೋಂಕು ಪ್ರಕರಣಗಳ ಸಂಖ್ಯೆ ಏಳು ಲಕ್ಷ ಗಡಿದಾಟುತ್ತದೆ ಎಂದು ಈ ಹಿಂದೆ ಜೀವನ್ ರಕ್ಷಾ ಸಂಸ್ಥೆಯ ಸಮೀಕ್ಷೆ ಮೂಲಕಹೇಳಿತ್ತು. ಆದರೆ, ಅ.11ಕ್ಕೆ ಪ್ರಕರಣಗಳು ಏಳು ಲಕ್ಷ ದಾಟಿದ್ದವು. ಸದ್ಯ ನ.12ಕ್ಕೆ ಒಟ್ಟಾರೆ ಪ್ರಕರಣಗಳು 10ಲಕ್ಷ ಗಡಿದಾಟಲಿವೆ ಎಂದು ಅಂದಾಜಿಸಿದೆ.ಆ ವೇಳೆಗೆ ರಾಜ್ಯಕ್ಕೆ 22,5000 ಆಕ್ಸಿಜನ್ ಬೆಡ್ ಹಾಸಿಗೆಗಳು, 16,800 ಐಸಿಯು ಹಾಸಿಗೆಗಳು, 11,200 ವೆಂಟಿಲೇಟರ್ಗಳು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ