ದೃಢತೆ ಖಾತ್ರಿ ಬಳಿಕ ಮಾಲ್‌ಗೆ ಅವಕಾಶ


Team Udayavani, Feb 3, 2017, 11:39 AM IST

mantri-mall.jpg

ಬೆಂಗಳೂರು: “ಮಲ್ಲೇಶ್ವರದ ಮಂತ್ರಿಮಾಲ್‌ನ ಇಡೀ ಕಟ್ಟಡದ ದೃಢತೆಯನ್ನೇ ಪರಿಶೀಲನೆ ನಡೆಸುವ ಅಗತ್ಯವಿದೆ,” ಎಂದು ತಜ್ಞರ ಸಮಿತಿ ವರದಿ ನೀಡಿದೆ. ಹೀಗಾಗಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಾಲ್‌ ಪುನಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. 

ಮಂತ್ರಿಮಾಲ್‌ ಕಟ್ಟಡದ ಗೋಡೆ ಕುಸಿತ ಪ್ರಕರಣ ಪರಿಶೀಲನೆಗೆ ಬಿಬಿಎಂಪಿ ರಚಿಸಿದ್ದ ತಜ್ಞರ ಸಮಿತಿ ಗುರುವಾರ ಆಯುಕ್ತರಿಗೆ ತಾಂತ್ರಿಕ ವರದಿ ಸಲ್ಲಿಕೆ ಮಾಡಿತು. ವರದಿ ಸ್ವೀಕರಿಸಿ ಮಾತನಾಡಿದ ಅವರು, “ಕಟ್ಟಡದ ಪೂರ್ಣ ಪರಿಶೀಲನೆ ನಡೆಸಿ ಸದೃಢತೆ ದಾಖಲೆಗಳನ್ನು ಸಲ್ಲಿಸುವವರೆಗೆ ಮಾಲ್‌ ಪುನರಾರಂಭಕ್ಕೆ ಅವಕಾಶ ನೀಡಲಾಗದು. ಮಂತ್ರಿಮಾಲ್‌ ಗೋಡೆ ಕುಸಿತ ಸ್ಥಳಕ್ಕೆ ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿರುವ ತಜ್ಞರ ಸಮಿತಿ, 47 ಪುಟಗಳ ವರದಿ ನೀಡಿದೆ.

ಕುಸಿದ ಕಟ್ಟಡಕ್ಕೆ ಬಳಸಿದ ಸಮಾಗ್ರಿಗಳನ್ನು ತಜ್ಞರ ತಂಡ ಪ್ರಯೋಗಾಲಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದೆ. ಆ ಪ್ರಕಾರ “ಮೂರನೇ ಮಹಡಿಯ ತುರ್ತು ನಿರ್ಗಮನ ಪಾಸೇಜ್‌ ಭಾಗದಲ್ಲಿ ಹವಾನಿಯಂತ್ರಣ ಯಂತ್ರದಿಂದ ಮತ್ತು ಕೊಳವೆಯಿಂದ ನೀರು ಸೋರಿಕೆಯಾಗಿ ಕ್ಯಾಂಟಿ ಲಿವರ್‌ಬೀಮ್‌ನ ಸರಳು ತುಕ್ಕು ಹಿಡಿದು, ಕಟ್ಟಡ ದುರ್ಬಲಗೊಂಡಿದೆ. ಇದೇ ಗೋಡೆ ಕುಸಿತಕ್ಕೆ ಕಾರಣ ಎಂದು ವರದಿ ಹೇಳುತ್ತಿದೆ,” ಎಂದು ತಿಳಿಸಿದರು. 

“ಲಿವರ್‌ಬೀಮ್‌ ನಿರ್ಮಾಣದ ವೇಳೆ ಕಬ್ಬಿಣದ ಸರಳನ್ನು ತಪ್ಪಾಗಿ ಜೋಡಣೆ ಮಾಡಿರುವುದೂ ತುಕ್ಕು ಹಿಡಿಯಲು ಕಾರಣ. ಮಾಲ್‌ಗೆ ನಿತ್ಯ ಸಾವಿರಾರು ಜನರು ಭೇಟಿ ನೀಡುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಇಡೀ ಕಟ್ಟಡದ ಸದೃಢತೆಯ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ವರದಿಯನ್ನು ಮಾಲ್‌ನ ಮಾಲೀಕರಿಗೆ ಕಳುಹಿಸಿ ಇಡೀ ಕಟ್ಟಡದ ಸದೃಢತೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗುವುದು,” ಎಂದು ತಿಳಿಸಿದರು.

ಏನಾಗಿತ್ತು? 
ಜ.16ರಂದು ಮಂತ್ರಿಮಾಲ್‌ನ 3ನೇ ಮಹಡಿಯ ಪ್ಯಾಸೇಟ್‌ ಗೋಡೆ ಕುಸಿದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಬಳಿಕ ಮಾಲ್‌ಗೆ ನೀಡಿದ್ದ ಸ್ವಾದೀನಾನುಭವ ಪತ್ರವನ್ನು ವಾಪಸ್‌ ಪಡೆದಿದ್ದ ಪಾಲಿಕೆ ವಾಣಿಜ್ಯ ವಹಿವಾಟು ನಡೆಸದಂತೆ ಆದೇಶ ಹೊರಡಿಸಿತ್ತು. ಜತೆಗೆ ಘಟನೆಗೆ ಕಾರಣ ತಿಳಿಸಲು ಪಾಲಿಕೆ ನಗರ ಯೋಜನೆ ಅಪರ ಆಯುಕ್ತ ತಿಪ್ಪಣ್ಣರ ನೇತೃತ್ವದಲ್ಲಿ ನಾಲ್ವರು ಖಾಸಗಿ ಪರಿಣಿತರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. 

ಟಾಪ್ ನ್ಯೂಸ್

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

Kharge (2)

Congress ಪಕ್ಷಕ್ಕೆ ಅಂಬಾನಿ, ಅದಾನಿ ಕಪ್ಪು ಹಣ ಕಳುಹಿಸುತ್ತಿದ್ದರೆ… : ಖರ್ಗೆ ಕಿಡಿ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

S M KRISHNA

Former CM ಎಸ್‌.ಎಂ. ಕೃಷ್ಣ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

Sharad pawar (2)

Modi ಟೀಕೆಗಳನ್ನು ಸಹಿಸುವುದಿಲ್ಲ,ಇತರರ ವಿರುದ್ಧ ಏನನ್ನೂ ಮಾತನಾಡುತ್ತಾರೆ: ಪವಾರ್

naksal (2)

Bijapur; ಭಾರೀ ಎನ್‌ಕೌಂಟರ್ ವೇಳೆ ಸಮವಸ್ತ್ರ ಬದಲಿಸಿದ ನಕ್ಸಲೀಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಮಹಿಳೆಗೆ ಲೈಂಗಿಕ ದೌರ್ಜನ್ಯ; ಪಬ್ಲಿಕ್‌ ಪಾಸಿಕ್ಯೂಟರ್‌ ಸೆರೆ

Arrested: ಮಹಿಳೆಗೆ ಲೈಂಗಿಕ ದೌರ್ಜನ್ಯ; ಪಬ್ಲಿಕ್‌ ಪಾಸಿಕ್ಯೂಟರ್‌ ಸೆರೆ

Mantri Mall: ತೆರಿಗೆ ಬಾಕಿ; ಮಂತ್ರಿ ಮಾಲ್‌ಗೆ ಬೀಗ ಮುದ್ರೆ

Mantri Mall: ತೆರಿಗೆ ಬಾಕಿ; ಮಂತ್ರಿ ಮಾಲ್‌ಗೆ ಬೀಗ ಮುದ್ರೆ

Crime: ತೃತೀಯ ಲಿಂಗಿಯ ಕತ್ತು ಬಿಗಿದು ಕೊಂದ ಮಹಿಳೆ

Crime: ತೃತೀಯ ಲಿಂಗಿಯ ಕತ್ತು ಬಿಗಿದು ಕೊಂದ ಮಹಿಳೆ

2-

Bitcoin: ಪರಾರಿಯಾಗಿದ್ದ ಡಿವೈಎಸಿ ವಿಚಾರಣೆಗೆ ಹಾಜರು

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Minchu

ಕುಷ್ಟಗಿ: ಸಿಡಿಲು ಬಡಿದು ಯುವಕ‌ ದುರ್ಮರಣ

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

Kharge (2)

Congress ಪಕ್ಷಕ್ಕೆ ಅಂಬಾನಿ, ಅದಾನಿ ಕಪ್ಪು ಹಣ ಕಳುಹಿಸುತ್ತಿದ್ದರೆ… : ಖರ್ಗೆ ಕಿಡಿ

1-wqewqwewq

Rain; ಬೆಳಗಾವಿ, ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.