ಪತ್ನಿ ಕೊಲೆಗೈದ ಹಂತಕನಿಗೆ ಜೀವಾವಧಿ ಶಿಕ್ಷೆ


Team Udayavani, Feb 28, 2019, 6:08 AM IST

blore-7.jpg

ಬೆಂಗಳೂರು: ಪತ್ನಿಯನ್ನು ಕೊಲೆಮಾಡಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಹಾಗೂ 15 ಸಾವಿರ ರೂ. ದಂಡ, ಕೊಲೆಯ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆತನ ಸ್ನೇಹಿತನಿಗೆ ಐದುವರ್ಷ ಜೈಲು, ಐದು ಸಾವಿರ ರೂ ದಂಡ ವಿಧಿಸಿ ನಗರದ 69ನೇ ಸೆಷನ್ಸ್‌ ಕೋರ್ಟ್‌ ಬುಧವಾರ ಆದೇಶಿಸಿದೆ.

 ಗೊಟ್ಟಿಗೆರೆ ನಿವಾಸಿ ವಿನಯ್‌ ಕುಮಾರ್‌ ಹಾಗೂ ಸೋಮಶೇಖರ್‌ ಶಿಕ್ಷೆಗೆ ಗುರಿಯಾದವರು. ಆರೋಪಿ ವಿನಯ್‌ ಕುಮಾರ್‌ ತನ್ನ ಪತ್ನಿ ವನಜಾಕ್ಷಿಯನ್ನು 2011ರ ಜುಲೈ 22ರಂದು ತನ್ನ ಸ್ನೇಹಿತ ಸೋಮಶೇಖರ್‌ ಜತೆಗೂಡಿ ಕೊಲೆಮಾಡಿದ್ದ. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಹುಳಿಮಾವು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. 

ವಿಚಾರಣೆ ವೇಳೆ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂಶನ್‌ ವಾದವನ್ನು ಪುರಸ್ಕರಿಸಿದ 69ನೇ ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರಾದ ಬಿ. ನಂದಕುಮಾರ್‌, ಆರೋಪಿಗಳು ಕೊಲೆಕೃತ್ಯದ ಅಪರಾಧಿಗಳು ಎಂದು ಅಭಿಪ್ರಾಯಟ್ಟಿದ್ದಾರೆ. ಮೊದಲ ಆರೋಪಿ ವಿನಯ್‌
ಕುಮಾರ್‌ಗೆ ಜೀವಾವಧಿ ಹಾಗೂ 15 ಸಾವಿರ ರೂ ದಂಡ ಹಾಗೂ 2ನೇ ಆರೋಪಿಯಾದ ಸೋಮಶೇಖರ್‌ಗೆ ಐದು ವರ್ಷ ಜೈಲು ಹಾಗೂ ಐದುಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಶನ್‌ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಪ್ರಶಾಂತ್‌ ಎಸ್‌ ತೋರಗಲ್‌ ವಾದಿಸಿದ್ದರು.

ಮಸಾಲೆಪುರಿಯಲ್ಲಿ ನಿದ್ರೆ ಮಾತ್ರೆ: 2005ರಲ್ಲಿ ವನಜಾಕ್ಷಿಯವರನ್ನು ವಿನಯ್‌ಕುಮಾರ್‌ ವಿವಾಹವಾಗಿದ್ದ. ದಂಪತಿಗೆ ಒಂದು ವರ್ಷದ ಗಂಡು ಮಗುವಿತ್ತು. ವನಜಾಕ್ಷಿಯವರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ದಂಪತಿ ವಾಸಿಸಲು ವನಜಾಕ್ಷಿಯರ ತಂದೆ ಮನೆ ಕೊಡಿಸಿದ್ದರು, ಜೀವನೋಪಾಯಕ್ಕಾಗಿ ಪ್ರಾವಿಷನ್‌ ಸ್ಟೋರ್‌ ಕೂಡ ಹಾಕಿಸಿಕೊಟ್ಟಿದ್ದರು. 

ಜಮೀನು ವ್ಯವಹಾರಕ್ಕೆ ಇಳಿದಿದ್ದ ವಿನಯ್‌ ಕುಮಾರ್‌ ಪತ್ನಿ ವನಾಜಾಕ್ಷಿಯವರ ಚಿನ್ನಾಭರಣಗಳನ್ನು ಅಡವಿಟ್ಟಿದ್ದ. ಒಡವೆ ಬಿಡಿಸಿಕೊಡುವಂತೆ ಪತ್ನಿ ಕೇಳುತ್ತಿದ್ದರು. ಈ ವಿಚಾರಕ್ಕೆ ಸಿಟ್ಟುಮಾಡಿಕೊಂಡಿದ್ದ ಆರೋಪಿ ಪತ್ನಿಯನ್ನು ಕೊಲೆಮಾಡುವ ನಿರ್ಧಾರಕ್ಕೆ ಬಂದಿದ್ದ, ಈ ಕೃತ್ಯಕ್ಕೆ ಸಹಕರಿಸಿದರೆ ತನಗೆ ನೀಡಬೇಕಾಗಿರುವ 30 ಸಾವಿರ ರೂ. ಸಾಲ ವಾಪಸ್‌ ಕೊಡುವುದು ಬೇಡ ಎಂದು ಸೋಮಶೇಖರ್‌ಗೆ ತಿಳಿಸಿದ್ದ. ಹೀಗಾಗಿ ಸೋಮಶೇಖರ್‌ ಕೃತ್ಯಕ್ಕೆ ಒಪ್ಪಿದ್ದ.

ವಿನಯ್‌ಕುಮಾರ್‌ 2011ರ ಜು. 22ರಂದು ರಾತ್ರಿ ಮಸಾಲೆಪುರಿ ಕಟ್ಟಿಸಿಕೊಂಡು ಬಂದು ಅದಕ್ಕೆ ನಿದ್ರೆಮಾತ್ರೆ ಬೆರೆಸಿ ಪತ್ನಿ ವನಜಾಕ್ಷಿಗೆ ನೀಡಿದ್ದ, ಮಸಾಲೆಪುರಿ ಸೇವಿಸಿದ್ದ ಆಕೆ ಪ್ರಜ್ಞೆ ತಪ್ಪಿಬಿದ್ದಿದ್ದರು. ಪೂರ್ವ ನಿಗದಿಯಂತೆ ಸ್ನೇಹಿತ ಸೋಮಶೇಖರ್‌ ನನ್ನು ಕಾರು ತೆಗೆದುಕೊಂಡು ಬರುತ್ತಿದ್ದಂತೆ
ವನಜಾಕ್ಷಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಪುಂಗನೂರಿನ ಬಳಿ ಬಂದಿದ್ದರು. ಬಳಿಕ ಟೆಲಿಫೋನ್‌ ವೈರ್‌ನಿಂದ ಆಕೆಯ ಕತ್ತುಬಿಗಿದು ಕೊಲೆಗೈದು. ಆರೋಪಿಗಳು ಶವ ಕಾಣದಂತೆ ಕೆರೆ ಸೇತುವೆಗೆ ಹಾಕಲಾಗಿದ್ದ ಪೈಪ್‌ನಲ್ಲಿಟ್ಟು ವಾಪಸ್‌ ಬಂದಿದ್ದರು. 

ಮಾಟಮಂತ್ರ ನಾಟಕ ಅದೇ ದಿನ ರಾತ್ರಿ ಮನೆಗೆ ಬಂದ ವಿನಯ್‌ ಕುಮಾರ್‌, ಮನೆಯ ಹಾಲ್‌ನಲ್ಲಿ ಕುಂಕುಮ ಚೆಲ್ಲಿ ಮೊಟ್ಟೆಗಳನ್ನು ಹೊಡೆದಿದ್ದ. ನಿಂಬೆ ಹಣ್ಣು ಕುಯ್ದು ವಾಮಾಚಾರದ ಚಿತ್ರಣ ಬಿಡಿಸಿದ್ದ. ಮಾರನೇ ದಿನ ಸ್ಥಳೀಯರಿಗೆ ಅಪರಿಚಿತದ ದುಷ್ಕರ್ಮಿಗಳು ವಾಮಾಚಾರ ಮಾಡಿಸಿ ಪತ್ನಿಯನ್ನು ಕರೆದೊಯ್ದಿದ್ದಾರೆ ಎಂದು ಕಥೆಕಟ್ಟಿದ್ದ. ಮಗಳ ನಾಪತ್ತೆ ಕುರಿತು ವನಜಾಕ್ಷಿಯವರ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅನುಮಾನದ ಮೇರೆಗೆ ವಿನಯ್‌ಕುಮಾರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯ ಬಾಯ್ಬಿಟ್ಟಿದ್ದ ಎಂದು ಸರ್ಕಾರಿ ಅಭಿಯೋಜಕರಾದ ಪ್ರಶಾಂತ್‌ ಎಸ್‌ ತೋರಗಲ್‌ ತಿಳಿಸಿದರು. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.