ಐಷಾರಾಮಿ ಕಾರುಗಳ ಕಳವು: ಆರು ಮಂದಿ ಸೆರೆ
Team Udayavani, Apr 10, 2023, 2:30 PM IST
ಬೆಂಗಳೂರು: ಇತ್ತೀಚೆಗೆ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಭೋಜೇಗೌಡರ ಕಾರಿನ ನಂಬರ್ ಪ್ಲೇಟ್ ಬಳಸಿ ಐಷಾ ರಾಮಿ ಕಾರು ಕಳವು ಮಾಡಿದ ಪ್ರಕರಣದ ತನಿಖೆ ಮುಂದು ವರಿಸಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿ ನಸೀಬ್(38), ಅಟ್ಟೂರು ಲೇ ಔಟ್ನ ಮಂಜುನಾಥ್(45), ಮೈಸೂರಿನ ಶಾಭಾಯ್ ಖಾನ್ (31), ಫ್ರೆಜರ್ಟೌನ್ ನಿವಾಸಿ ಸೈಯದ್ ರಿಯಾಝ್(34), ಬಾಗಲೂರು ನಿವಾಸಿ ಇಮ್ರಾನ್(34), ಸಾರಾಯಿ ಪಾಳ್ಯ ನಿವಾಸಿ ನಯಾಜ್ ಖಾನ್(32) ಬಂಧಿತರು. ಆರೋಪಿಗಳಿಂದ ಸುಮಾರು 3 ಕೋಟಿಗೂ ಅಧಿಕ ಮೌಲ್ಯದ ಎಂಟು ಐಷಾ ರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಮಂಜುನಾಥ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು. ಫೆ.22ರಂದು ದೂರುದಾರ ಮಾದೇಶ್ ಎಂಬ ವರು ಕ್ವೀನ್ಸ್ ರಸ್ತೆಯಲ್ಲಿ ಹೋಗುವಾಗ, ಸೆಕೆಂಡ್ ಹ್ಯಾಂಡ್ ಐ-ಕಾರು ಶೋರಂ ಮುಂದೆ ಪರಿಷತ್ ಸದಸ್ಯ ಭೋಜೇಗೌಡ ಬಳಸುವ ಕಾರಿನ ನಂಬರ್ ಪ್ಲೇಟ್ (ಕೆಎ-18-ಝಡ್-5977) ಅಳವಡಿಸ ಲಾಗಿದ್ದ ಕಾರು ನಿಂತಿರುವು ದನ್ನು ಗಮನಿಸಿದ್ದಾರೆ. ತಕ್ಷಣ ಶೋರೂಂಗೆ ತೆರಳಿ ಕಾರಿನ ಬಗ್ಗೆ ವಿಚಾರಿಸಿದಾಗ, ಕಾರು ಮಾರಾಟ ಕ್ಕಿದೆ. ನಿಮಗೆ ಬೇಕಿತ್ತಾ? ಟೆಸ್ಟ್ ಡ್ರೈವ್ ಮಾಡಿ ನೋಡುವಿರಾ? ಎಂದು ಶೋರೂಂ ಸಿಬ್ಬಂದಿ ಕೇಳಿದ್ದಾರೆ. ಅದರಿಂದ ಮತ್ತಷ್ಟು ಅನುಮಾನ ಗೊಂಡು ಕಾರಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಆರ್.ಸಿ ಕಾರ್ಡ್ ಭೋಜೇಗೌಡರ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಕೂ
ಡಲೇ ಭೋಜೇಗೌಡರಿಗೆ ಕರೆ ಮಾಡಿದ್ದ ಮಾದೇಶ್, ‘ಸರ್ ನಿಮ್ಮ ಕಾರ್ ಮಾರಾಟಕ್ಕೆ ಇಟ್ಟಿದ್ದಿರಾ’? ಎಂದು ಕೇಳಿದ್ದಾರೆ. ಅದಕ್ಕೆ ಬೋಜೇ ಗೌಡರು ಇಲ್ಲ, ಚಿಕ್ಕಮಗಳೂರಿನ ‘ನನ್ನ ಮನೆಯ ಬಳಿಯೇ ಕಾರು ಇದೆ’ ಎಂದಿದ್ದಾರೆ. ಶೋರೂಂನಲ್ಲಿ ನಿಮ್ಮ ಕಾರಿನ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವ ಮತ್ತೂಂದು ಕಾರು ಇದೆ ಎಂದು ತಿಳಿಸಿದ್ದಾರೆ.
ಬಳಿಕ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಬೃಹತ್ ಜಾಲ ಬೆಳಕಿಗೆ ಬಂದಿದೆ.
ಅಲ್ಲದೆ, ಮನೆ ಮುಂದೆ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಾರ್ಚೂನರ್, ಇನೋವಾ ಸೇರಿ ಐಷಾರಾಮಿ ಕಾರುಗಳನ್ನು ಗುರುತಿಸಿ ಕೆಲ ತಂತ್ರಜ್ಞಾನ ಬಳಸಿ ಲಾಕ್ ತೆರೆದು ಕಳವು ಮಾಡುತ್ತಿದ್ದರು. ಬಳಿಕ ಅವುಗಳಿಗೆ ನಕಲಿ ನಂಬರ್ ಪ್ಲೇಟ್ಗಳನ್ನು ಅಳವಡಿಸು ತ್ತಿದ್ದರು. ಬಳಿಕ ಗ್ಯಾರೆಜ್ಗೆ ಕೊಂಡೊಯ್ದು ಎಂಜಿನ್ ಮತ್ತು ಚಾಸಿ ನಂಬರ್ ಬದಲಾಯಿಸಿ ಕೇರಳ, ಮಹಾ ರಾಷ್ಟ್ರ, ರಾಜಸ್ಥಾನ, ದೆಹಲಿ, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣ ಭಾಗದಲ್ಲಿ ಮಾರುತ್ತಿದ್ದರು. ಅದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಈ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಶೋರೂ ಮ್ಗೆ ಮಾರುವ ಬದಲು, ಸೆಕೆಂಡ್ ಹ್ಯಾಂಡ್ ಡೀಲರ್ಗಳಿಗೆ ಮಾರುತ್ತಿದ್ದರು ಎಂಬುದು ಗೊತ್ತಾಗಿದೆ. ಇದೇ ಪ್ರಕರಣದಲ್ಲಿ ಮಂಜುನಾಥ್ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ, ಶೇಷಾದ್ರಿಪುರ ಉಪವಿಭಾಗದ ಎಸಿಪಿ ಚಂದನ್ ನೇತೃತ್ವದಲ್ಲಿ ಠಾಣಾಧಿಕಾರಿ ಶಿವಸ್ವಾಮಿ, ಪಿಎಸ್ಐ ಸಚಿನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು