ಮಕ್ಳು ಕೇಳಿದ್ರೆ ಕೋಳಿ ಸಾರು! : ಸಚಿವ ಆಂಜನೇಯ
Team Udayavani, Jun 21, 2017, 7:16 AM IST
ವಿಧಾನಪರಿಷತ್ತು: ‘ಹಾಸ್ಟೆಲ್ ಮಕ್ಳು ಕೇಳಿದ್ರೆ ನಾಟಿ ಕೋಳಿ, ಬನ್ನೂರು ಕುರಿ, ಮೀನು ಸಾರು ಕೊಡ್ತೀವಿ’ ಇಂತದ್ದೊಂದು ಆಫರ್ ಕೊಟ್ಟವರು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ. ಕಾಂಗ್ರೆಸ್ನ ವೀಣಾ ಅಚ್ಚಯ್ಯ, ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದೊಂದು ರೀತಿ ಆಹಾರ ಪದ್ದತಿ ಇದೆ, ಹಾಸ್ಟೆಲ್ ಮಕ್ಕಳಿಗೆ ಆಯಾ ಜಿಲ್ಲೆಯ ಪದ್ದತಿಯಂತೆ ಆಹಾರ ನೀಡಬೇಕು ಎಂದು ಮನವಿ ಮಾಡಿದ್ದಕ್ಕೆ ಮೇಲಿನಂತೆ ಉತ್ತರ ನೀಡಿದ ಸಚಿವರು, ‘ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಮಕ್ಕಳು ಬಯಸಿದರೆ ನಾಟಿ ಕೋಳಿ, ಬನ್ನೂರು ಕುರಿ, ಮೀನು ಅಷ್ಟೇ ಯಾಕೆ… ಯಾವ ಪ್ರಾಣಿ ಕೇಳ್ತಾರೋ ಅದನ್ನೂ ಕೊಡ್ತೇವೆ’ ಎಂದು ಚಟಾಕಿ ಹಾರಿಸಿದರು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗವಾರು, ಆಯಾ ಜಿಲ್ಲೆಗಳ ಪದ್ದತಿಯಂತೆ ಆಹಾರ ನೀಡಲಾಗುತ್ತಿದೆ. ಕೆಲವು ಕಡೆ ರೊಟ್ಟಿ ಕೊಟ್ಟರೆ, ಇನ್ನೂ ಕೆಲವು ಕಡೆ ರಾಗಿ ಮುದ್ದೆ ನೀಡಲಾಗುತ್ತಿದೆ ಎಂದು ಹೇಳಿದರು.
ಮೆಟ್ರಿಕ್ಪೂರ್ವ ವಿದ್ಯಾರ್ಥಿ ನಿಯಲದ ಮಕ್ಕಳ ಪ್ರತಿ ದಿನದ ಭೋಜನ ವೆಚ್ಚ 46.66 ರೂ.ಗಳಿಂದ ಕನಿಷ್ಟ 75 ರೂ. ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಮಕ್ಕಳ ಪ್ರತಿ ದಿನದ ಭೋಜನ ವೆಚ್ಚವನ್ನು 50 ರೂ.ಗಳಿಂದ 90 ರೂ.ಗೆ ಹೆಚ್ಚಿಸುವಂತೆ ವೀಣಾ ಅಚ್ಚಯ್ಯ ನೀಡಿದ ಸಲಹೆ ಪರಿಶೀಲಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವ ಆಂಜನೇಯ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pen drive case; ಇಂದೇ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಶರಣು?
Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್