ಮೊಬೈಲಿನಲ್ಲೂ ನುಡಿ ತಂತ್ರಾಂಶ


Team Udayavani, Nov 1, 2018, 9:33 AM IST

b-47.jpg

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರಿಗೆ ಲಭ್ಯವಾಗಲಿದೆ. ನುಡಿ ತಂತ್ರಾಂಶದಲ್ಲಿ ಕೀಲಿಮಣಿ ಮಾಡಿದ ಅಕ್ಷರ, ಪದ ಮತ್ತು ವಾಕ್ಯಗಳನ್ನು ಎಂಎಸ್‌ ವರ್ಡ್‌ ಅಥವಾ ಬೇರ್ಯಾವುದಾದರೂ ಡಾಕ್‌ ಫೈಲ್‌ ಮೂಲಕ ಓಪನ್‌ ಮಾಡಬೇಕು. ನುಡಿ ತಂತ್ರಾಂಶ ಗಣಕನಲ್ಲಿ ಅಳವಡಿಸಿಕೊಂಡಿದ್ದರೆ ಮಾತ್ರ ನುಡಿ ಕೀಲಿಮಣೆಯ ಬರಹಗಳು ಕಾಣಿಸುತ್ತದೆ. ನುಡಿ ತಂತ್ರಾಂಶ ಇಲ್ಲದ ಕಂಪ್ಯೂಟರ್‌ನಲ್ಲಿ ನುಡಿ ಓದಲು ಮತ್ತು ಬರೆಯಲು ಸಾಧ್ಯವಿಲ್ಲ. ಹೀಗಾಗಿ ನುಡಿ ತಂತ್ರಾಂಶವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. 

ನುಡಿಯಲ್ಲಿರುವ ಬರಹಗಳನ್ನು ಇನ್ಮುಂದೆ ಯೂನಿಕೋಡ್‌ ಮಾದರಿಯಲ್ಲಿ ಎಂಎಸ್‌ ವರ್ಡ್‌ ಅಥವಾ ಡಾಕ್‌ ಫೈಲ್‌ ಇಲ್ಲದೇ ನೇರವಾಗಿ ಓದಬಹುದಾಗಿದೆ. ಜತೆಗೆ ನುಡಿ ಅಕ್ಷರಗಳನ್ನು ಯೂನಿಕೋಡ್‌ಗೆ ಮತ್ತು ಯೂನಿಕೋಡ್‌ನಿಂದ ನುಡಿಗೆ ಪರಿವರ್ತನೆ ಮಾಡಬಹುದಾದ ವ್ಯವಸ್ಥೆಯನ್ನು ನುಡಿ 0.6 ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಕರ್ನಾಟಕ ಗಣಕ ಪರಿಷತ್ತಿನ ಅಧಿಕಾರಿಗಳು, ಸ್ವಾಫ್ಟ್ವೇರ್‌ ತಜ್ಞರ 
ಸಹಕಾರದೊಂದಿಗೆ ಕಳೆದ ಒಂದುವರೆ ವರ್ಷದ ಸತತ ಪರಿಶ್ರಮದಿಂದ ನುಡಿ 0.6 ತಂತ್ರಾಂಶ ಸಿದ್ಧಪಡಿಸಲಾಗಿದೆ. ನುಡಿ 0.6 ತಂತ್ರಾಂಶದ ಮೂಲಕ ಬರೆದಿರುವ ಬರಹಗಳನ್ನು ಯುನಿಕೋಡ್‌ ಮಾದರಿಯಲ್ಲಿ ಮೊಬೈಲ್‌ನಲ್ಲೂ ಓದಬಹುದಾಗಿದೆ. ಆದರೆ, ಮೊಬೈಲ್‌ಗೆ ನುಡಿ 0.6 ತಂತ್ರಾಂಶ ಅಳವಡಿಸಲು ಸಾಧ್ಯವಿಲ್ಲ. ನುಡಿ 0.6 ತಂತ್ರಾಂಶದಲ್ಲಿ ಆಡಳಿತ ಪದಕೋಶ ಹಾಗೂ ಇನ್ನಿತರೆ ಹಲವು ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಪರಿಷತ್‌ನ ಕಾರ್ಯದರ್ಶಿ ಜಿ.ಎನ್‌. ನರಸಿಂಹಮೂರ್ತಿ ಮಾಹಿತಿ ನೀಡಿದರು.

ಅಭಿವೃದ್ಧಿಗೆ ಅವಕಾಶ : ನುಡಿ 0.6 ತಂತ್ರಾಂಶ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುತ್ತದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದಟಛಿವಾಗಿದ್ದು, ಪರೀಕ್ಷಾರ್ಥ ಬಳಕೆ ನಡೆಯುತ್ತಿದೆ. ಕರ್ನಾಟಕ ಗಣಕ ಪರಿಷತ್ತುವಿನ ಅಧಿಕೃತ ಜಾಲತಾಣದಲ್ಲಿ ನುಡಿ 0.6 ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ಇನ್ನಷ್ಟು ಉನ್ನತೀಕರಿಸಬೇಕು ಎಂದು ಕಂಡುಬಂದರೆ ಸಾರ್ವಜನಿಕರು ಸಲಹೆ ನೀಡಬಹುದು. ತಂತ್ರಾಂಶದ ಕುರಿತು ಅಧ್ಯಯನ ಮಾಡಿರುವವರು ಅಥವಾ ಬಲ್ಲವರು ತಾವಾಗಿಯೇ ಉನ್ನತೀಕರಿಸಬಹುದು. ಇದಕ್ಕಾಗಿ ಪರಿಷತ್‌ನ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ ಪರಿಷತ್‌ನ ಪರವಾನಗಿ ಪಡೆದು ಉನ್ನತೀಕರಿಸಿ, ನೀಡಬಹುದು. ಸೂಕ್ತವೆನಿಸಿದರೆ ಅದನ್ನು ಅಧಿಕೃತವಾಗಿ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಗಣಕ ಪರಿಷತ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದೂರುಗಳಿಗೂ ಪರಿಹಾರ: ನುಡಿ ತಂತ್ರಾಂಶ ಬಳಕೆ ಸೇರಿದಂತೆ ಯಾವುದೇ ಲೋಪದೋಷವಿದ್ದರೂ ಪರಿಷತ್‌ಗೆ ದೂರು ನೀಡಬಹುದು. ಪರಿಷತ್‌ನ ಅಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಸದ್ಯ ಇರುವ ನುಡಿ 0.5 ತಂತ್ರಾಂಶವನ್ನು ತಿಂಗಳಿಗೆ 6 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪರಿಷತ್‌ನಿಂದ ಸಿಕ್ಕಿದೆ. 0.6 ತಂತ್ರಾಂಶ ಬಂದ ನಂತರ ಹೊಸ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಗಣಕ ಪರಿಷತ್ತು ಮೂಲಕ ಪ್ರಚುರವಾದ ನುಡಿ ತಂತ್ರಾಂಶ ನುಡಿ 0.4, 0.5 ಈಗ 0.6 ಆಗಿ ವಿವಿಧ ಅವಸ್ಥೆಗಳನ್ನು ದಾಟಿ ಹೊಸ ರೂಪ ಪಡೆದಿದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದ್ದು, ಅನೇಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಉನ್ನತೀಕರಣಗೊಂಡ ತಂತ್ರಾಂಶದಲ್ಲಿ ಹೊಸ ಅವಕಾಶಗಳನ್ನೂ ತುಂಬಲಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರ ಬಳಕೆಗೆ ಸಿಗಲಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.