ಪತಿಗೂ ಕೊಡ್ಬೇಡಿ ಎಟಿಎಂ ಕಾರ್ಡ್‌!


Team Udayavani, Jun 8, 2018, 6:00 AM IST

atm-card-ss.jpg

ಬೆಂಗಳೂರು: ಪತಿ ಅಥವಾ ಪತ್ನಿ, ಸ್ನೇಹಿತರಿಗೆ, ಆಪ್ತರಿಗೆ, ಸಂಬಂಧಿಕರಿಗೆ… ಹೀಗೆ ಯಾರಿಗೂ ಎಟಿಎಂ ಕಾರ್ಡ್‌ ಹಾಗೂ ಪಿನ್‌ ನಂಬರ್‌ ಶೇರ್‌ ಮಾಡಲೇಬೇಡಿ.

ಒಂದು ವೇಳೆ ನೀವು ನೀಡಿದ ಎಟಿಎಂ ಕಾರ್ಡ್‌ ಬಳಸಿ ಅವರು ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿದಾಗ ಅಕಸ್ಮಾತ್‌ ತಾಂತ್ರಿಕ ದೋಷಗಳಿಂದ ಹಣ ಬರದಿದ್ದರೆ ಆ ಹಣ ಪುನ: ನಿಮ್ಮ ಅಕೌಂಟ್‌ಗೆ ಮರು ಪಾವತಿಯಾಗುವುದು ಕನಸಿನ ಮಾತು. 

ಹೌದು, ಇದು ಮೂರುವರೆ ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣವೊಂದಕ್ಕೆ ತೀರ್ಪು ನೀಡಿರುವ ಗ್ರಾಹಕ ನ್ಯಾಯಾಲಯ, ಎಟಿಎಂ ಕಾರ್ಡ್‌ ವರ್ಗಾವಣೆ ಮತ್ತು ಪಿನ್‌ ನಂ. ಹಂಚಿಕೆ ಕಾನೂನು ಬಾಹಿರವೆಂದು ಹೇಳಿ ಬ್ಯಾಂಕ್‌ ಪರವೇ ತೀರ್ಪು ನೀಡಿದೆ. ಜತೆಗೆ ಹಣ ಕಳೆದುಕೊಂಡು ಪ್ರಕರಣ ದಾಖಲಿಸಿದ್ದ ದಂಪತಿಯ ಅರ್ಜಿಯನ್ನು ವಜಾ ಮಾಡಿದೆ.

ಮೂರೂವರೆ ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆ ವಂದನಾ ಎಂಬುವರು ತಮ್ಮ ಪತಿಗೆ ಹಣ ಡ್ರಾ ಮಾಡಿಕೊಂಡು ಬರುವಂತೆ ತಮ್ಮ ಎಟಿಎಂ ಕಾರ್ಡ್‌, ಪಿನ್‌ ನಂಬರ್‌ ನೀಡಿದ್ದರು. ಕಾರ್ಡ್‌ ಪಡೆದಿದ್ದ ಅವರ ಪತಿ 25 ಸಾವಿರ ರೂ. ಹಣ ಡ್ರಾ ಮಾಡಲು ಯತ್ನಿಸಿದ್ದರು. ಆದರೆ, ಯಂತ್ರದ ತಾಂತ್ರಿಕ ದೋಷದಿಂದ ಹಣ ಬರಲೇ ಇಲ್ಲ. ಹೀಗಾಗಿ ಖಾತೆಯಿಂದ ಕಡಿತವಾಗಿರುವ 25 ಸಾವಿರ ರೂ.ಗಳನ್ನು ನೀಡುವಂತೆ ಎಸ್‌ಬಿಐಗೆ ನಿರ್ದೇಶಿಸುವಂತೆ ಈ ದಂಪತಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿತ್ತು. 

ಸತತ ಮೂರುವರೆ ವರ್ಷಗಳ ಕಾಲ ವಿಚಾರಣೆ ನಡೆದು ಇದೀಗ ತೀರ್ಪು ಪ್ರಕಟಿಸಿರುವ ಗ್ರಾಹಕ ನ್ಯಾಯಾಲಯ ಬ್ಯಾಂಕ್‌ನ ವಾದಕ್ಕೆ ಮನ್ನಣೆ ನೀಡಿದೆ. ಮಹಿಳೆ ಖುದ್ದಾಗಿ ಎಟಿಎಂಗೆ ತೆರಳಲು ಸಾಧ್ಯವಾಗದಿದ್ದರೆ ತಮ್ಮ ಅಕೌಂಟ್‌ಗೆ ಹಣ ಡ್ರಾ ಮಾಡಿಕೊಳ್ಳಲು ಚೆಕ್‌ ನೀಡಬಹುದಿತ್ತು. ಅದು ಸಾಧ್ಯವಾಗದಿದ್ದರೆ ಎಟಿಎಂ ಪಿನ್‌ ನಂಬರ್‌ ಶೇರ್‌ ಮಾಡಲು ಹಾಗೂ ಪತಿ ತಮ್ಮ ಎಟಿಎಂ ಕಾರ್ಡ್‌ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಅನುಮತಿ ನೀಡುವ ಸಂಬಂಧ ಸಂಬಂಧ ಪಟ್ಟ ಬ್ಯಾಂಕ್‌ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದುಕೊಳ್ಳಬಹುದಿತ್ತು ಎಂದು ಆದೇಶದಲ್ಲಿ ತಿಳಿಸಿದೆ. ಎಟಿಎಂ ಕಾರ್ಡ್‌ ಹಾಗೂ ಪಿನ್‌ ನಂಬರ್‌ ನೀಡುವಾಗ ಬ್ಯಾಂಕ್‌ ವಿಧಿಸಿದ್ದ ಷರತ್ತುಗಳನ್ನು ದೂರುದಾರರು ಉಲ್ಲಂ ಸಿದ್ದಾರೆ ಎಂದು ಅಭಿಪ್ರಾಯಪಟ್ಟು ದೂರು ವಜಾಗೊಳಿಸಿದೆ.

ಪ್ರಕರಣ ಏನು?
ಮಾರತ್‌ಹಳ್ಳಿಯ ನಿವಾಸಿಯಾದ ವಂದನಾ ಎಂಬುವವರು 2013ರ ನವೆಂಬರ್‌ನಲ್ಲಿ  ಮಗುವಿಗೆ ಜನ್ಮ ನೀಡಿದ್ದರಿಂದ ಹೊರಗಡೆ ಹೋಗಲು ಸಾಧ್ಯವಾಗದೇ  ತಮ್ಮ ಪತಿ  ರಾಜೇಶ್‌ಕುಮಾರ್‌ಗೆ ತಮ್ಮ ಎಸ್‌ಬಿಐ ಎಟಿಎಂ ಕಾರ್ಡ್‌ ನೀಡಿ ಪಿನ್‌ ನಂಬರ್‌ ತಿಳಿಸಿ 25 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದ್ದರು. ಅದರಂತೆ, ನವೆಂಬರ್‌ 14 ಹತ್ತಿರದ ಎಟಿಎಂ ಕೇಂದ್ರಕ್ಕೆ ತೆರಳಿದ್ದ ರಾಜೇಶ್‌ಕುಮಾರ್‌ ಎಟಿಎಂ ಕಾರ್ಡ್‌ ಸ್ವೆ„ಪ್‌ ಮಾಡಿದ್ದಾರೆ. ಆದರೆ, 25 ಸಾವಿರ ರೂ. ಬಂದಿರಲಿಲ್ಲ. ಇದರಿಂದ ಕಂಗಾಲಾದ ಅವರು ಕೂಡಲೇ ಬ್ಯಾಂಕ್‌ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿನ ಸಿಬ್ಬಂದಿ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷವಿರಬಹುದು ಹೀಗಾಗಿ ಹಣ ಬಂದಿಲ್ಲ ಮುಂದಿನ 24 ಗಂಟೆಗಳಲ್ಲಿ ಹಣ ಅಕೌಂಟ್‌ಗೆ ಮರುಪಾವತಿಯಾಗಲಿದೆ ಎಂದು ಹೇಳಿದ್ದಾರೆ.

ಇದಾದ ಕೆಲ ದಿನಗಳ ಬಳಿಕವೂ ಅಕೌಂಟ್‌ಗೆ 25 ಸಾವಿರ ರೂ, ಜಮಾ ಆಗದಿದ್ದರಿಂದ ದಂಪತಿ ಇಬ್ಬರೂ ಬ್ಯಾಂಕ್‌ ಶಾಖೆಗೆ ತೆರಳಿ ದೂರು ನೀಡಿದ್ದಾರೆ.ಇದನ್ನು ಪರಿಶೀಲಿಸಿದ್ದ ಅಧಿಕಾರಿಗಳು ಎಟಿಎಂ ಕೇಂದ್ರದಿಂದ ಹಣ ಡ್ರಾ ಆಗಿದೆ ಎಂಬ ಸ್ಪಷ್ಟನೆ ನೀಡಿ ದೂರು ಮುಕ್ತಾಯಗೊಳಿಸಿದ್ದರು.

ಸಿಸಿಟಿವಿ ಪೂಟೇಜ್‌ ಕೂಡ ಬ್ಯಾಂಕ್‌ನವರಿಗೆ ಫ್ಲಸ್‌ ಆಗಿತ್ತು! 
ದೂರು ನೀಡಿ ಸುಮ್ಮನಾಗದ ಈ ದಂಪತಿ ಡ್ರಾಗೆ ತೆರಳಿದ್ದ ಎಟಿಎಂ ಕೇಂದ್ರದ ಸಿಸಿಟಿವಿ ಪೂಟೇಜ್‌ ಕೇಳಿ ಪರಿಶೀಲಿಸಿದ್ದರು. ದೃಶ್ಯಾವಳಿಯಲ್ಲಿ ರಾಜೇಶ್‌ಕುಮಾರ್‌ ರಸೀದಿ ಮಾತ್ರ ಪಡೆದಿದ್ದು, ಹಣ ತೆಗೆದುಕೊಂಡಿಲ್ಲದಿರುವುದು ಸ್ಪಷ್ಟವಾಗಿತ್ತು. ಅಲ್ಲಿ, ಕಾರ್ಡ್‌ ಬಳಕೆದಾರರಾದ ವಂದನಾ ಇಲ್ಲದಿರುವುದು ನಿಜವಾಗಿತ್ತು.

ಬಳಿಕ ವಂದನಾ ಅವರು, ಆರ್‌ಟಿಐ ಮೂಲಕ  ನವೆಂಬರ್‌ 16ರಂದು ಎಟಿಎಂ ಯಂತ್ರದಲ್ಲಿದ್ದ  ಹಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು 25 ಸಾವಿರ ರೂ.  ಹೆಚ್ಚುವರಿಯಾಗಿ ಇರುವುದು ಗೊತ್ತಾಗಿತ್ತು. ಈ ದಾಖಲೆಗಳನ್ನಿಟ್ಟುಕೊಂಡೇ ವಂದನಾ ಅವರು, ಪುನ: ಎಸ್‌ಬಿಐನ ಓಂಬುಡ್ಸ್‌ಮನ್‌ ( ಸಾರ್ವಜನಿಕ ತನಿಖಾಧಿಕಾರಿ) ಬಳಿ ದೂರು ನೀಡಿದರು. ಆದರೆ, ತನಿಖಾಧಿಕಾರಿಗಳು, ನಿಯಮಗಳನ್ನು ಉಲ್ಲಂ ಸಿ ಎಟಿಎಂ ಕಾರ್ಡ್‌ನ ಪಿನ್‌ ನಂಬರ್‌ ಶೇರ್‌ ಮಾಡಲಾಗಿದೆ ಎಂಬ ಕಾರಣ ನೀಡಿ ದೂರು ಮುಕ್ತಾಯಗೊಳಿಸಿದ್ದರು. 

ಹೀಗಾಗಿ, ವಂದನಾ ಅವರು 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4ನೇ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿ, 25 ಸಾವಿರ ರೂ.ಗಳಿಗೆ ಶೇ 18 ರಷ್ಟು  ದಂಡ, ಆರ್‌ಬಿಐ ನಿಯಾಮಗಳಿಗಂತೆ ಪ್ರತಿದಿನ 100 ರೂ. ದಂಡದ ಜತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸಲ್ಲಿಸಿದ್ದ ದೂರು ಮೇ 29ರಂದು ವಜಾಗೊಂಡಿದೆ. 
 

ಟಾಪ್ ನ್ಯೂಸ್

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.