ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ
Team Udayavani, Apr 11, 2021, 2:29 PM IST
ನೆಲಮಂಗಲ: ನಗರದ ಸೊಂಡೆಕೊಪ್ಪ ಬೈಪಾಸ್ ಬಳಿಯ ಅಂಬೇಡ್ಕರ್ ನಗರದಸಮೀಪ ಪ್ರತಿ ವಾರ ನಡೆಯುವ ಸಂತೆಯಲ್ಲಿಸಾವಿರಾರು ಮೇಕೆಕುರಿ ಮಾರಾಟಗಾರರುಹಾಗೂ ಖರೀದಿದಾರರು ಯುಗಾದಿ ಹಬ್ಬ ನಾಲ್ಕು ದಿನ ಬಾಕಿ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಯುಗಾದಿ ಹಬ್ಬದ ಹಿನ್ನೆಲೆ ಕುರಿಮೇಕೆ ಮಾರಾಟ ಹಾಗೂ ಖರೀದಿಗಾಗಿ ಜನರುಸಂತೆಗೆ ಮುಗಿಬಿದ್ದು ಕೋವಿಡ್ ನಿಯಮಕ್ಕೆಎಳ್ಳುನೀರು ಬಿಟ್ಟಿದ್ದರು. ಮಾಹಿತಿ ತಿಳಿದ ತಹಶೀಲ್ದಾರ್ ದಾಳಿ ನಡೆಸಿ, ದಂಡ ಪ್ರಯೋಗ ಮಾಡಿದರು. ನಿಯಂತ್ರಣ ಮಾಡಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜನರು, ಮೊದಲು ರಾಜಕಾರಣಿಗಳ ಕಾರ್ಯಕ್ರಮಗಳು, ರ್ಯಾಲಿಗಳನ್ನುನಿಲ್ಲಿಸಿ ಆನಂತರ ರೈತರ ಬರುವ ಸಂತೆಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಟ್ಟೆ ಮೇಲೆ ಹೊಡೆಯಬೇಡಿ: ನಗರಸಭೆ, ಕಂದಾಯ ಅಧಿಕಾರಿಗಳು ಸಂತೆಯಲ್ಲಿ ಮಾಸ್ಕ್ಹಾಕದವರಿಗೆ ದಂಡ ಹಾಕಲು ಮುಂದಾದಕಾರಣ, ಕೆಲವು ಜನರು ಅಧಿಕಾರಿಗಳ ವಿರುದ್ಧವೇತಿರುಗಿ ಬಿದ್ದು ದಂಡ ಕಟ್ಟುವುದಿಲ್ಲ ಏನಾದರೂಮಾಡಿ, ಮೊದಲು ನೀವು ನಿಯಮ ಪಾಲಿಸಿಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದರು.
ಭರ್ಜರಿ ವ್ಯಾಪಾರ: ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ಕಟ್ಟುನಿಟ್ಟಿನಆದೇಶವನ್ನು ಜಾರಿಗೆ ತಂದರೂ ಜನರು ಮಾತ್ರಹಬ್ಬದ ಆಚರಣೆಗೆ ಕುರಿಮೇಕೆಗಳ ಖರೀದಿಗೆಮುಗಿಬಿದ್ದಿದ್ದು, ನಗರದ ಸಂತೆಯಲ್ಲಿ ಕುರಿಮೇಕೆ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ತಹಶೀಲ್ದಾರ್ ದಾಳಿ : ಕುರಿಮೇಕೆ ಸಂತೆಯಲ್ಲಿ ಜನಜಂಗುಳಿ ಹೆಚ್ಛಾಗಿ ಕೊರೊನಾ ನಿಯಮ ಗಾಳಿಗೆ ತೂರಿದ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್ ಮಂಜುನಾಥ್ ದಿಢೀರ್ ದಾಳಿ ನಡೆಸಿ ಮಾಸ್ಕ್ ಹಾಕದವರೆಗೆ ಹಾಗೂ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿದರು.
ಜನರಿಗೆ ದಂಡ: ನಗರದ ಬಸವಣ್ಣ ದೇವರಮಠದ ರಸ್ತೆ, ಸೊಂಡೆಕೊಪ್ಪ ಬೈಪಾಸ್ ಕುರಿಮೇಕೆ ಸಂತೆಯಲ್ಲಿ ಮಾಸ್ಕ್ ಧರಿಸದ 46 ಜನರಿಗೆ 100 ರೂ., 150 ರೂ., 250 ರೂ.ನಂತೆ ದಂಡವಿಧಿಸಲಾಗಿದ್ದು, ತಹಶೀಲ್ದಾರ್ ಹಾಗೂ ನಗರಸಭೆಯ ಪೌರಾಯುಕ್ತ ನೇತೃತ್ವದಲ್ಲಿ6300 ರೂ. ದಂಡವಸೂಲಿ ಮಾಡಿ ದಂಡ ಕಟ್ಟಿ ದವರಿಗೆ ಮಾಸ್ಕ್ ವಿತರಣೆ ಮಾಡಿದರು.
ಯಥಾಸ್ಥಿತಿ ಸಂತೆ: ಅಧಿಕಾರಿಗಳ ದಂಡವಿಧಿಸಿದರೂ ಸಂತೆ ಯಥಾಸ್ಥಿತಿ ನಡೆಯಿತು, ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ಭಾಗವಹಿಸಿದ್ದರು. ಕಟ್ಟುನಿಟ್ಟಿನ ಆದೇಶ ಪೇಪರ್ಗೆ ಮಾತ್ರ ಸೀಮಿತವಾಗಿದ್ದು, ಜನರು ಪಾಲನೆ ಮಾಡಲು ಸಹ ಮುಂದಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ
Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ
Rachana inder: ಮರ್ಡರ್ ಮಿಸ್ಟರಿ 4 ಎನ್ 6