ಅಪಹೃತ ಮಗು ಪತ್ತೆ-ಐವರ ಸೆರೆ
Team Udayavani, Feb 12, 2021, 2:37 PM IST
ಅಥಣಿ: ಇತ್ತಿಚೇಗೆ ಸಂಕೊನಟ್ಟಿ ಗ್ರಾಮದಲ್ಲಿ ಮಗು ಕಳ್ಳತನವಾದ ಪ್ರಕರಣವನ್ನು ಅಥಣಿ ಪೊಲೀಸರು ಭೇದಿಸಿದ್ದು, ಗುರುವಾರ ಮಗುವನ್ನು ವಶಕ್ಕೆ ಪಡೆದು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಸಂಕೋನಟ್ಟಿ ಗ್ರಾಮದ ಸದಾಶಿವ ಪಾರ್ಕ ಹತ್ತಿರ ಜೋಪಡಿಯಲ್ಲಿ ವಾಸಿಸುವ ಎರಡು ವರ್ಷ ಯಲ್ಲಪ್ಪ ಬಹುರೂಪಿ ಎಂಬ ಮಗುವನ್ನು ಫೆ. 6 ರಂದು ಅಪಹರಿಸಲಾಗಿತ್ತು.
ಮಹಾರಾಷ್ಟ್ರದ ದಂಪತಿಯೊಬ್ಬರು ತಮಗೆ ಮಕ್ಕಳಿಲ್ಲವೆಂದು ಹೇಳಿದಾಗ ಆರೋಪಿಗಳಾದ ಪ್ರಶಾಂತ , ಜ್ಯೋತಿಬಾ, ಅನಿಲ, ಜಂಬುಸಾಗರ, ಕುಮಾರ ಎನ್ನುವ ಐವರು ಅನಾಥಾಶ್ರಮದಿಂದ ಮಗುವನ್ನು ತಂದುಕೊಡುವುದಾಗಿ ಹೇಳಿ 2 ಲಕ್ಷ ರೂ. ಪಡೆದು ಸಂಕೋನಟ್ಟಿ ಗ್ರಾಮದ ಮಗುವನ್ನು ಅಪಹರಿಸಿ ಆ ದಂಪತಿಗೆ ನೀಡಿದ್ದರು.
ಪೊಲೀಸರು ಆರೋಪಿಗಳಿಂದ 60 ಸಾವಿರ ರೂ. ನಗದು ಹಾಗೂ ಎರ್ಟಿಗಾ ಮತ್ತು ಸ್ವಿಫ್ಟ್ ಕಾರು ವಶಪಡಿಸಿಕೊಂಡಿದ್ದಾರೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :ಶ್ರೀಗಂಧ ಸಾಗಾಟ: ಇಬ್ಬರ ಸೆರೆ
ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಅಧೀಕ್ಷಕ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ, ಡಿಎಸ್ಪಿ ಎಸ್.ವಿ.ಗಿರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ್ ನೇತೃತ್ವದಲ್ಲಿ ಪಿಎಸ್ಐಗಳಾದ ಕುಮಾರ ಹಾಡಕರ, ಶಿವರಾಜ ನಾಯೊRಡಿ, ಹಣಮಂತ ಧರ್ಮಟ್ಟಿ, ಸಿಬ್ಬಂದಿ ಎ.ಎ. ಈರಕರ, ಪಿ.ಬಿ. ನಾಯಕ , ಪಿ.ಎನ್.ಕುರಿ, ಬಿ.ವೈ. ಮನ್ನಾಪುರೆ, ಜಿ.ಎಚ್, ಹೊನವಾಡ, ಆರ್.ಸಿ ಹಾದಿಮನಿ, ಕೆ.ಬಿ. ಶಿರಗೂರ, ಶಿವಕುಮಾರ ದೊಡಮನಿ, ಎಸ್.ಬಿ. ಪಾಟೀಲ, ಸಂಜು ಮಾಳವಗೋಳ,ರೇಣುಕಾ ಮಾದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಕುಟುಂಬ ಯೋಜನೆಗೆ ಇಸ್ಲಾಂನಲ್ಲಿ ವಿರೋಧವಿಲ್ಲ :ಚುನಾವಣಾ ಆಯೋಗದ ಮಾಜಿ ಅಧ್ಯಕ್ಷ ಖುರೇಷಿ ಹೇಳಿಕೆ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ
ಸಿನೆಮಾಗಳು ಚಿಂತನೆಗೆ ಪ್ರೇರಣೆಯಾಗಬೇಕು: ಗಿರೀಶ್ ಕಾಸರವಳ್ಳಿ
ಸಂಸದ ಅನಂತಕುಮಾರ ಹೆಗಡೆ ಕಾಲಿಗೆ ಶಸ್ತ್ರ ಚಿಕಿತ್ಸೆ
ಆಸ್ಟ್ರೇಲಿಯವನ್ನು 7 ವಿಕೆಟ್ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್