ಖೇಲೋ ಇಂಡಿಯಾದಲ್ಲಿ ಚಿನ್ನ ಬಾಚಿದ ಬೆಳಗಾವಿ ಬಾಲೆಯರು
Team Udayavani, Jan 15, 2019, 11:46 AM IST
ಬೆಳಗಾವಿ: ಬೆಳಗಾವಿಯ ಮೂವರು ಕುವರಿಯರು ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ದಾನೇಶ್ವರಿ ಅಶೋಕ ಠಕ್ಕನವರ 100 ಮೀ. ಹಾಗೂ 200 ಮೀಟರ್ ಓಟದಲ್ಲಿ ಎರಡು ಚಿನ್ನ, ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಅಕ್ಷತಾ ಕಮತಿ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನ ಹಾಗೂ ಕುಸ್ತಿಯಲ್ಲಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ ಚಿನ್ನ ಗಳಿಸಿದ್ದಾರೆ.
ರೈತ ಕುಟುಂಬದ ಕುಡಿ: ನದಿ ಇಂಗಳಗಾಂವದ ಕೃಷಿ ಕುಟುಂಬದಲ್ಲಿ ಜನಿಸಿದ ದಾನೇಶ್ವರಿ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಮುಗಿಸಿ ಎಂಟನೇ ತರಗತಿಯಿಂದ ಬೆಂಗಳೂರಿನ ವಿದ್ಯಾನಗರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್ನಲ್ಲಿ ಓದುತ್ತಿದ್ದಾಳೆ. ಮುಂಚೆಯಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ದಾನೇಶ್ವರಿ ಈಗ ರಾಷ್ಟ್ರಮಟ್ಟದಲ್ಲಿಯೇ ಉತ್ತಮ ಸ್ಥಾನ ಪಡೆದುಕೊಂಡಿದ್ದಾಳೆ.
21 ವರ್ಷದ ಒಳಗಿನ ವಿಭಾಗದಲ್ಲಿ ದಾನೇಶ್ವರಿ 11.99 ಸೆಕೆಂಡ್ನಲ್ಲಿ 100 ಮೀ. ಹಾಗೂ 24.58 ಸೆಕೆಂಡ್ನಲ್ಲಿ 200 ಮೀ. ಓಡಿ ಚಿನ್ನ ಗಳಿಸಿದ್ದಾಳೆ. ಈಕೆಗೆ ಅಶೋಕ ಮಂಟೂರ ತರಬೇತಿ ನೀಡಿದ್ದಾರೆ. ಸದ್ಯ ಬಿ.ಕಾಂ. ಮೊದಲನೇ ವರ್ಷದಲ್ಲಿರುವ ದಾನೇಶ್ವರಿ ಎರಡು ಚಿನ್ನದ ಪದಕ ಪಡೆದಿದ್ದು ಹೆಮ್ಮೆಯ ವಿಷಯ. ತಂದೆ ಅಶೋಕ, ತಾಯಿ ಸುಧಾ ರೈತರಾಗಿದ್ದು, ಮಗಳ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ.
ಹೆಗಲ ಮೇಲೆ ಕುಟುಂಬದ ಭಾರ: ಹಲಗಾ ಗ್ರಾಮದ ಅಕ್ಷತಾ ಕಮತಿ ಬೆಂಗಳೂರಿನ ಕೆಂಗೇರಿಯಲ್ಲಿರುವ ನ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್)ದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. 71 ಕೆ.ಜಿ. ವಿಭಾಗದಲ್ಲಿ ಚಿನ್ನ ಗಳಿಸಿದ್ದು, 103 ಕೆ.ಜಿ. ಹಾಗೂ 73 ಕೆ.ಜಿಯ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು. ಅಕ್ಷತಾಗೆ ವೀರಪಾಲ್ ಕೌರ್, ಶಾಮಲಾ ಶೆಟ್ಟಿ ಹಾಗೂ ಸದಾನಂದ ತರಬೇತಿ ನೀಡಿದ್ದಾರೆ. ಮೊದಲು ಶಾರದಾ ಪ್ರೌಢಶಾಲೆಯಲ್ಲಿ ತರಬೇತಿ ಆರಂಭಿಸಿ ಈಗ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಕುಸ್ತಿಯಲ್ಲಿ ಮಿಂಚಿದ ಪೂಜಾ: ಖೇಲೋ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಬೆನ್ನಲ್ಲೇ ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಪೂಜಾ ದಳವಿ 21 ವಯೋಮಿತಿ ಒಳಗಿನ ವಿಭಾಗದ 68 ಕೆ.ಜಿ.ಯಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ. ತಂದೆ ರಾಜು ಕೃಷಿಕರಾಗಿದ್ದು, ಮಗಳನ್ನು ಕ್ರೀಡೆಯಲ್ಲಿಯೇ ಸಾಧನೆ ಮಾಡಿಸಬೇಕೆಂಬ ಪಣ ತೊಟ್ಟಿದ್ದಾರೆ.
ಬೆಳಗಾವಿಯ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್ನಲ್ಲಿಯೇ ತರಬೇತಿ ಪಡೆಯುತ್ತಿರುವ ಈಕೆ ಸದ್ಯ ಆರ್ಪಿಡಿ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾಳೆ. ಪೂಜಾಗೆ ಕೋಚ್ಗಳಾದ ನಾಗರಾಜ ಎ.ಆರ್. ಕೆ ತರಬೇತಿ ನೀಡಿದ್ದಾರೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಇನ್ನೋರ್ವ ಯುವತಿ ಲಕ್ಷ್ಮೀ ರೇಡೆಕರ ಕೂಡ ಕುಸ್ತಿಯಲ್ಲಿ ಕಂಚು ಪಡೆದುಕೊಂಡಿದ್ದಾಳೆ. ಮೂಡಬಿದರೆಯ ಆಳ್ವಾಸ್ನಲ್ಲಿ ಓದುತ್ತಿರುವ ಲಕ್ಷ್ಮೀ ಮೂಲತಃ ಬೆಳಗಾವಿಯವರು ಎನ್ನುವುದೇ ಹೆಮ್ಮೆಯ ವಿಷಯ. ಕುಸ್ತಿಯಲ್ಲಿ ಕರ್ನಾಟಕದಿಂದ 17 ಜನ ಆಯ್ಕೆಯಾಗಿದ್ದು, ಇದರಲ್ಲಿ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡ ಕೃಷಿ ಕುಟುಂಬದಲ್ಲೇ ಬೆಳೆದ ಅಕ್ಷತಾ
ಖೇಲೋ ಇಂಡಿಯಾದಲ್ಲಿ 21 ವಯೋಮಿತಿ ಒಳಗಿನ ವೇಟ್ ಲಿಫ್ಟಿಂಗ್ ನಲ್ಲಿ ಹಲಗಾ ಗ್ರಾಮದ ಅಕ್ಷತಾ ಕಮತಿ ಚಿನ್ನ ಗೆದ್ದಿದ್ದಾಳೆ. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಅಕ್ಷತಾ ಆರ್ಥಿಕವಾಗಿ ಹಿಂದುಳಿದಿದ್ದು, ತಂದೆ ಬಸವಂತ ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಹಾಗೂ ಕಟ್ಟಡ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಇದರಲ್ಲಿ ಬರುವ ಆದಾಯದಲ್ಲಿಯೇ ಮಗಳನ್ನು ಓದಿಸಿದ್ದಾರೆ. ಈಕೆಯ ಇನ್ನಿಬ್ಬರು ಸಹೋದರರು ಓದುತ್ತಿದ್ದಾರೆ. 10ನೆ ತರಗತಿ ಮುಗಿದ ಬಳಿಕ ಎರಡು ವರ್ಷ ಶಿಕ್ಷಣ ನಿಲ್ಲಿಸಿದ್ದ ಅಕ್ಷತಾ ಈಗ ದ್ವಿತೀಯ ಪಿಯುಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿದ್ದಾಳೆ. ಜತೆಗೆ ಆರ್ಥಿಕ ಸಹಾಯವೂ ಈಕೆಗೆ ಅವಶ್ಯವಿದೆ ಎನ್ನುತ್ತಾರೆ ಈಕೆಯ ಕೋಚ್ ಶಾಮಲಾಶೆಟ್ಟಿ.
ಕುಸ್ತಿಯಲ್ಲಿ ಕರ್ನಾಟಕದಿಂದ 17 ಕುಸ್ತಿ ಆಟಗಾರರು ಖೇಲೋ ಇಂಡಿಯಾಕ್ಕೆ ಸ್ಥಾನ
ಪಡೆದಿದ್ದರು. ಇದರಲ್ಲಿ ಇಬ್ಬರು ಯುವತಿಯರು, ಇಬ್ಬರು ಯುವಕರು ಪದಕ ಗಳಿಸಿದ್ದಾರೆ. ಇಬ್ಬರೂ ಯುವತಿಯರು ಬೆಳಗಾವಿಯವರು ಎಂಬುದೇ ಹೆಮ್ಮೆಯ ವಿಷಯ. ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ನಾಗರಾಜ ಎ.ಆರ್.ಕೆ.,
ಕುಸ್ತಿ ಕೋಚ್
ನನ್ನ ತಂದೆ ಅಲ್ಪಸ್ವಲ್ಪ ಜಮೀನಿನಲ್ಲಿಯೇ ಕೃಷಿ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ನನ್ನ ಗೆಲುವಿನ ಹಿಂದೆ ತಂದೆಯ ಶ್ರಮ ಬಹಳಷ್ಟಿದೆ. ಇಬ್ಬರು ಸಹೋದರರ ಪೈಕಿ ಒಬ್ಬ ದ್ವಿತೀಯ ಪಿಯು ಮುಗಿಸಿದ್ದು, ಇನ್ನೊಬ್ಬ ಶಾಲೆಗೆ ಹೋಗುತ್ತಾನೆ. ನ್ನನ ಹಾಗೂ ಸಹೋದರರ ಶಿಕ್ಷಣ, ಮನೆ ನಡೆಸಿಕೊಂಡು ಹೋಗುವುದು ಕಷ್ಟಕರ. ಆರ್ಥಿಕವಾಗಿ ಹಿಂದುಳಿದಿರುವ ನನ್ನ ಕುಟುಂಬಕ್ಕೆ ಸಹಾಯದ ಅಗತ್ಯವಿದೆ.
ಅಕ್ಷತಾ ಕಮತಿ,
ಚಿನ್ನದ ಹುಡುಗಿ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ