ನೌಕರಿ ಕೊಡಿಸುವುದಾಗಿ ಹಣ ಪಡೆದ ಅಧಿಕಾರಿ ಹುಡುಕುತ್ತ ಬಂದ ದಂಪತಿ!
Team Udayavani, Jun 19, 2019, 2:47 PM IST
ರಾಯಬಾಗ: ತಮ್ಮ ಸೊಸೆಗೆ ನೌಕರಿ ಕೊಡಿಸಲು ಹಣ ನೀಡಿ ಅಧಿಕಾರಿಯಿಂದ ಮೋಸಕ್ಕೆ ಒಳಗಾದ ಔರಾದ ತಾಲೂಕಿನ ರಾಠೊಡ ದಂಪತಿ.
ರಾಯಬಾಗ: ನೌಕರಿ ಕೊಡಿಸುವುದಾಗಿ ಆಮೀಷವೊಡ್ಡಿ ಲಕ್ಷಾಂತರ ರೂ. ತೆಗೆದುಕೊಂಡು ವರ್ಗಾವಣೆಗೊಂಡ ಅಧಿಕಾರಿಯನ್ನು ಹುಡುಕಿಕೊಂಡು ದಂಪತಿಯೊಬ್ಬರು ಬೀದರದಿಂದ ಪಟ್ಟಣಕ್ಕೆಮಂಗಳವಾರ ಆಗಮಿಸಿದ್ದಾರೆ.
ಪ್ರಸ್ತುತ ರಾಯಬಾಗ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ಎಚ್. ಪಾಯಕ ಎಂಬ ಅಧಿಕಾರಿ ಈ ಹಿಂದೆ 2011ರಿಂದ 2017 ರವರೆಗೆ ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆಯಲ್ಲಿ 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ಸಂದರ್ಭದಲ್ಲಿ ಔರಾದ ತಾಲೂಕಿನ ಜ್ಯೋತಿ ಗಣೇಶ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಹೇಳಿ 1.50 ಲಕ್ಷ ರೂ. ಪಡೆದಿದ್ದಾರೆ. ಈಗ ನೌಕರಿಯನ್ನು ಕೊಡಿಸದೆ, ಹಣವನ್ನು ಮರಳಿ ನೀಡದೆ ಇಲ್ಲಿಗೆ ವರ್ಗವಾಗಿರುವ ಅಧಿಕಾರಿಯನ್ನು ಹುಡುಕಿಕೊಂಡು ಬಂದಿದ್ದಾಗಿ ರಾಮರಾವ್ ರಾಠೊಡ ದಂಪತಿ ತಿಳಿಸಿದ್ದಾರೆ.
ಏಕಾಏಕಿ ಔರಾದದಿಂದ ವರ್ಗಗೊಂಡ ಅಧಿಕಾರಿಯನ್ನು ಹುಡುಕುತ್ತ ಕಳೆದ 4-5 ದಿನಗಳ ಹಿಂದೆ ಪಟ್ಟಣಕ್ಕೆ ಬಂದಿರುವ ರಾಮರಾವ್ ರಾಠೊಡ ದಂಪತಿ, ಸ್ಥಳೀಯರ ಸಹಾಯದಿಂದ ಅಧಿಕಾರಿಯನ್ನು ಪತ್ತೆ ಹಚ್ಚಿ, ನೀಡಿದ ಹಣ ಮರಳಿ ಕೊಡುವಂತೆ ಬೇಡಿಕೊಂಡಿದ್ದಾರೆ. ಅದಕ್ಕೆ ಎರಡ್ಮೂರು ಸಲ ನೋಡೋಣ ಎಂದ ಅಧಿಕಾರಿ, ಮಂಗಳವಾರ ತಾವು ಯಾರು ಎಂಬುದೇ ನನಗೆ ಗೊತ್ತಿಲ್ಲವೆಂದು ತಿರುಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮರಾವ್ ರಾಠೊಡ, ಊರಿನ ಪಂಚರು ಕೂಡಿ ಅಧಿಕಾರಿಯಿಂದ ಹಣ ವಸೂಲಿ ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ಮತ್ತು ಹಣ ನೀಡಿದಕ್ಕೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲದ್ದರಿಂದ ಪೊಲೀಸರಿಗೆ ದೂರು ನೀಡಿಲ್ಲವೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ