ಯಾಂತ್ರಿಕ ಜೀವನಶೈಲಿಯಿಂದ ಕಾಯಿಲೆ ಹೆಚ್ಚು
ಉಚಿತ ಹೃದಯರೋಗ ತಪಾಸಣೆ ಶಿಬಿರ ; ಹದಿ ಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿದೆ ಹೃದಯರೋಗ-ಆತಂಕ
Team Udayavani, Jun 2, 2022, 5:19 PM IST
ರಾಮದುರ್ಗ: ಇಂದಿನ ಯಾಂತ್ರಿಕ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿವೆ. ಮೊದಲು ವಯಸ್ಕರಲ್ಲಿ ಕಾಣಿಸುತ್ತಿದ್ದ ಹೃದಯ ರೋಗ ಈಗ ಹದಿ ಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಆಯುರ್ವೇದ ವೈದ್ಯ ಡಾ| ಮಂಜುನಾಥ ಕುರುಡಗಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ನೇಕಾರ ಪೇಟೆಯ ಶ್ರೀ ದುಗ್ಗಳೆ ದಾಸಿಮಯ್ಯ ಮಹಿಳಾ ಮಂಡಳದ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಮಹಿಳಾ ಮಂಡಳ ಹಾಗೂ ಧಾರವಾಡದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ಆಶ್ರಯದಲ್ಲಿ ತಾಲೂಕು ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಉಚಿತ ಹೃದಯರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅವಸರದ ಜೀವನದಲ್ಲಿ ನಿಯಮಿತ ಆಹಾರ ಸೇವಿಸದೇ ಜಂಕ್ ಫುಡ್ನಿಂದ ಹೃದಯ ಸಂಬಂ ಧಿತ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಪಚನಕ್ರಿಯೆಗೆ ಅನುಸಾರ ಮಿತ ಆಹಾರ ಸೇವನೆ ಹಾಗೂ ರಾಗ-ದ್ವೇಷಗಳಿಂದ ದೂರ ಉಳಿದಲ್ಲಿ ರೋಗಗಳಿಂದ ದೂರ ಉಳಿಯಲು ಸಾಧ್ಯವಿದೆ ಎಂದರು.
ಎಸ್ಡಿಎಂ ಆಸ್ಪತ್ರೆ ಹೃದಯ ರೋಗ ತಜ್ಞ ಡಾ| ಮಹೇಶ ಹೊನ್ನಳ್ಳಿ ಮಾತನಾಡಿ, ತಂಬಾಕು ವ್ಯಸನ ಹಾಗೂ ಮದ್ಯ ಸೇವನೆಯಿಂದ ಸಾಕಷ್ಟು ಯುವಕರು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೇ ಅನೇಕರು ಬಲಿಯಾಗುತ್ತಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಅನೇಕ ಸವಲತ್ತು ಕಲ್ಪಿಸಿದೆ. ಜೊತೆಗೆ ಇಂತಹ ಉಚಿತ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ಧಾರವಾಡದ ನಾರಾಯಣ ಹಾರ್ಟ್ ಸೆಂಟರ್ನ ಸೀನಿಯರ್ ಮ್ಯಾನೇಜರ್ ಅಜಯ್ ಹುಲಮನಿ ಮಾತನಾಡಿ, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿರುವ ಸೌಲಭ್ಯಗಳು ನಮ್ಮ ಧಾರವಾಡದ ಆಸ್ಪತ್ರೆಯಲ್ಲಿವೆ. ಆರೋಗ್ಯ-ಬಿಪಿಎಲ್ ಕಾರ್ಡ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಗಾಯತ್ರಿ ದೇವಾಂಗಮಠ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಿಳಾ ಮಂಡಳ ಅಧ್ಯಕ್ಷೆ ಪೂಜಾ ಕಟಾವಕರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಒಟ್ಟು 201 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ವೇಳೆ ಶ್ರೀ ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ನಾರಾಯಣ ಬೆನ್ನೂರ, ಜಿಪಂ ಮಾಜಿ ಸದಸ್ಯೆ ರತ್ನಾ ಯಾದವಾಡ, ನ್ಯಾಯವಾದಿ ಜಮುನಾ ಪಟ್ಟಣ, ಡಾ| ವೀರೇಶ ಗೊರಾಬಾಳ, ಎಸ್.ಎಂ. ಮುರುಡಿ, ಶ್ರೀನಿವಾಸ ಕುರುಡಗಿ, ಪ್ರಕಾಶ ಸೂಳಿಭಾಂವಿ, ಪುಂಡಲೀಕ ವಡಕಣ್ಣವರ ಇದ್ದರು. ವೈಜಯಂತಿ ಕನಕನ್ನವರ ಸ್ವಾಗತಿಸಿದರು. ಎಸ್.ಎಸ್. ಯಲಿಗೋಡ ನಿರೂಪಿಸಿದರು. ಲಲಿತಾ ಕಾಟೂಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!