Breaking News : ಬೆಳಗಾವಿಯಲ್ಲಿ ದುರಂತ : ಮನೆ ಕುಸಿದು 7 ಜನ ದುರ್ಮರಣ
Team Udayavani, Oct 6, 2021, 9:20 PM IST
ಬೆಳಗಾವಿ: ನವರಾತ್ರಿ ಹಬ್ಬದ ಮುನ್ನಾ ದಿನವೇ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗೋಡೆ ಕುಸಿದು ಒಂದೇ ಕುಟುಂಬದ ಆರು ಜನ ಸೇರಿ ಏಳು ಜನ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಅರ್ಜುನ ಹನುಮಂತ ಖನಗಾಂವಿ(೫೮), ಗಂಗವ್ವ ಭೀಮಪ್ಪ ಖನಗಾಂವಿ(೫೦), ಸತ್ಯವ್ವ ಅರ್ಜುನ ಖನಗಾಂವಿ(೪೫), ಸವಿತಾ ಭೀಮಪ್ಪ ಖನಗಾಂವಿ(೨೮), ಲಕ್ಷ್ಮೀ ಅರ್ಜುನ ಖನಗಾಂವಿ(೧೫) ಹಾಗೂ ಪೂಜಾ ಅರ್ಜುನ ಖನಗಾಂವಿ(೦೮), ಕಾಶವ್ವ. ವಿಠ್ಠಲ ಕೊಳೆಪ್ಪನವರ(೦೮) ಮೃತಪಟ್ಟಿದ್ದಾರೆ.
ನಗರ ಸೇರಿದಂತೆ ಜಿಲ್ಲೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಡಾಲ ಅಂಕಲಗಿ ಗ್ರಾಮದ ಹಳೆಯ ಮನೆಯ ಛಾವಣಿ ಬಿಚ್ಚಿ ಹೊಸ ಛಾವಣಿ ಹಾಕುವ ಸಿದ್ಧತೆ ಮಾಡಲಾಗುತ್ತಿತ್ತು. ಪಕ್ಕದಲ್ಲಿಯೇ ಈ ಕುಟುಂಬ ತಗಡಿನ ಶೆಡ್ ಹಾಕಿ ವಾಸಿಸುತ್ತಿತ್ತು. ಆದರೆ ಭಾರೀ ಮಳೆ ಸುರಿಯುತ್ತಿರುವುದನ್ನು ಈ ಕುಟುಂಬದ ಸದಸ್ಯರು ನೋಡುತ್ತ ನಿಂತಿದ್ದರು. ಈ ವೇಳೆ ಹಳೆಯ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಮೈಮೇಲೆ ಗೋಡೆ ಕುಸಿದು ಬಿದ್ದು ಎಲ್ಲರೂ ಮೃತಪಟ್ಟಿದ್ದಾರೆ.
ಖನಗಾಂವಿ ಕುಟುಂಬದ ಬಾಲಕಿ ಸೇರಿ ಆರು ಜನರು ಹಾಗೂ ಪಕ್ಕದ ಮನೆಯ ಎಂಟು ವರ್ಷದ ಬಾಲಕಿ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಐದು ಜನ ಸ್ಥಳದಲ್ಲಿ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.
ಮನೆಯ ಯಜಮಾನ ಭೀಮಪ್ಪ ಹಾಗೂ ಇವರ ಮಗ ದೇವರಾಜ ಬದುಕುಳಿದಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂದು ಮೃತದೇಹಗಳನ್ನು ಹೊರ ತೆಗೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ