ಮುಂಗಾರು ಬಿತ್ತನೆ ಕಾರ್ಯಕ್ಕೆ ಬೀಜ-ಗೊಬ್ಬರ ಕೊರತೆ

ಕೃಷಿ ಪರಿಕರಕ್ಕಾಗಿ ಅನ್ನದಾತರ ಅಲೆದಾಟ; ಬೇರೆ ಜಿಲ್ಲೆ-ತಾಲೂಕುಗಳಿಗೆ ಮೊರೆ ಹೋದ ರೈತರು

Team Udayavani, Jun 6, 2022, 12:07 PM IST

10

ಸವದತ್ತಿ: ಮುಂಗಾರು ಹಂಗಾಮು ಆರಂಭಗೊಂಡಿದ್ದು, ರೈತಾಪಿ ವರ್ಗ ಬಿತ್ತನೆ ಕಾರ್ಯಕ್ಕೆ ಮುಂದಾಗಿದೆ. ಆದರೆ ಕೃಷಿ ಇಲಾಖೆಯಿಂದ ಸಮರ್ಪಕ ಬೀಜ, ರಸಗೊಬ್ಬರ ಪೂರೈಕೆಯಿಲ್ಲದ್ದರಿಂದ ನಿತ್ಯವೂ ಅಲೆಯುವ ಸ್ಥಿತಿ ಎದುರಾಗಿದೆ.

ತಾಲೂಕಿನಲ್ಲಿ 4ರೈತ ಸಂಪರ್ಕ ಕೇಂದ್ರ, ಪಿಕೆಪಿಎಸ್‌ ಸೇರಿ ಒಟ್ಟು 15 ವಿತರಣಾ ಕೇಂದ್ರಗಳಿವೆ. ಆದರೆ ಆರ್‌ಎಸ್‌ಕೆ ಸೇರಿ ಪಿಕೆಪಿಎಸ್‌ಗಳಲ್ಲಿ ಬಿತ್ತನೆಗೆ ಪೂರಕವಾಗುವ ಡಿಎಪಿ, 10:26, 12:32:16, ಯೂರಿಯಾ, ಪೊಟ್ಯಾಷ್‌ ಗೊಬ್ಬರಗಳಿಲ್ಲದೇ ರೈತ ಕಂಗಾಲಾಗಿದ್ದಾರೆ.

ಬಿತ್ತನೆಗಾಗಿ ರೈತ ಭೂಮಿ ಹದ ಮಾಡಿ ಕುಳಿತಿದ್ದು, ಗೊಬ್ಬರದ ಕೊರತೆಯಿಂದ ವಿಧಿಯಿಲ್ಲದೇ ಬೇರೆ ತಾಲೂಕು, ಜಿಲ್ಲೆಗಳ ಮೊರೆ ಹೋಗುವಂತಾಗಿದೆ. ಕೆಲ ದಿನಗಳಿಂದ ಆಧಾರ್‌ ಕಾರ್ಡ್‌ ಹೊಂದಿದ ರೈತರಿಗೆ 3 ಮೂಟೆ ಗೊಬ್ಬರ ಲಭಿಸುತ್ತಿದೆ. ಇನ್ನು ಹೆಚ್ಚು ಅವಶ್ಯವಿದ್ದಲ್ಲಿ ಗೊಬ್ಬರ ಇಲ್ಲವೆಂದು ಕೇಂದ್ರಗಳ ಸಿಬ್ಬಂದಿ ಮರಳಿ ಕಳಿಸುತ್ತಿದ್ದಾರೆ. 1ಎಕರೆ ರೈತನಿಗೂ ಅಷ್ಟೇ, 10 ಎಕರೆ ರೈತರಿಗೂ ಅಷ್ಟೇ ಗೊಬ್ಬರ ನೀಡಲಾಗುತ್ತಿದೆ.

ಪ್ರತಿ ಎಕರೆಗೆ 1 ಪ್ಯಾಕೆಟ್‌ನಂತೆ ಬೀಜ ವಿತರಣೆ ನಡೆದಿದೆ. ಬಯೋಮೆಟ್ರಿಕ್‌ ವಿದ್ಯುನ್ಮಾನ ಮೂಲಕ ಬೆರಳಚ್ಚು ಪಡೆದು ಗೊಬ್ಬರ ಪೂರೈಕೆಯಿಂದ ಹೊಲದ ಮಾಲೀಕನೇ ವಿತರಣಾ ಕೇಂದ್ರಕ್ಕೆ ಅಲೆಯುವ ಸ್ಥಿತಿಯಿದೆ. 3 ಮೂಟೆ ಜತೆ 250-500 ರೂ.ವರೆಗಿನ ಟಾನಿಕ್‌ ಖರೀದಿ ಕಡ್ಡಾಯವೆಂದು ಒತ್ತಾಯಿಸುತ್ತಿದ್ದಾರೆ. ಟಾನಿಕ್‌ ಖರೀದಿಸದಿದ್ದಲ್ಲಿ ಗೊಬ್ಬರವೂ ಇಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಹೆಸರು, ಹತ್ತಿ, ಗೋವಿನಜೋಳ ಸೇರಿ ಎಲ್ಲ ಬೀಜಗಳು ಸಮರ್ಪಕವಿದೆ. ಆದರೆ ಪೂರಕ ಗೊಬ್ಬರ ಇಲ್ಲದಾಗಿದೆ. ಗೊಬ್ಬರ ರಶೀದಿಯೊಡನೆ ಬೇರೊಂದು ರಶೀದಿ ನೀಡಿ ಸಾಗಾಟ ವೆಚ್ಚವೆಂದು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆಂಬ ಆರೋಪವೂ ರೈತಾಪಿ ವರ್ಗದಲ್ಲಿ ಕೇಳಿ ಬರುತ್ತಿದೆ.

ಬೀಜೋಪಚಾರದ ಮೂಲಕ ರೈತರಿಗೆ ಮಾಹಿತಿ ನೀಡಿದೆ. ಸೋಯಾಬಿನ್‌, ಸೂರ್ಯಕಾಂತಿ, ಮೆಕ್ಕೆಜೋಳ, ಉದ್ದು ಸೇರಿ ಕಳೆದ ಬಾರಿ 2300 ಕ್ವಿಂಟಲ್‌ ಬೀಜ ಪೂರೈಸಲಾಗಿದೆ. ಈ ಬಾರಿ 2500 ಕ್ವಿಂಟಲ್‌ ದಾಸ್ತಾನಿದೆ. ತಾಲೂಕಿನಾದ್ಯಂತ ಗೊಬ್ಬರದ ಕೊರತೆ ಇದೆ. ಪಿಕೆಪಿಎಸ್‌ 90 ಮಳಿಗೆಗಳ ಬೇಡಿಕೆ ಕುರಿತು ಮೇಲಾಧಿ ಕಾರಿಗಳಿಗೆ ತಿಳಿಸಲಾಗಿದೆ. ಸಮರ್ಪಕ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. –ಎಸ್‌.ವಿ. ಪಾಟೀಲ, ಕೃಷಿ ಸಹಾಯಕ ನಿರ್ದೇಶಕರು, ಸವದತ್ತಿ

-ಡಿ.ಎಸ್‌. ಕೊಪ್ಪದ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.