ಆರೋಗ್ಯ ಮೇಳದ ಸದುಪಯೋಗವಾಗಲಿ

ಅಂಗಾಂಗ ದಾನದಿಂದ ನಿಧನ ನಂತರವೂ ಇತರರಿಗೆ ಪ್ರಯೋಜನರಾಗಿ

Team Udayavani, Apr 26, 2022, 2:09 PM IST

15

ಖಾನಾಪುರ: ಆರೋಗ್ಯ ಮೇಳದಲ್ಲಿ ಸಾಕಷ್ಟು ಮಳಿಗೆ ಹಾಕಲಾಗಿದ್ದು ಹೊಮಿಯೋಪತಿ, ಆಯುರ್ವೇದ ಮತ್ತು ಯೋಗಾ ಸ್ಟಾಲ್‌ ಒಳಗೊಂಡಂತೆ 14 ಮಳಿಗೆಗಳಿದ್ದು, ಅಗತ್ಯ ಸೌಲಭ್ಯ, ಮಾಹಿತಿ ಒದಗಿಸಲಾಗಿದೆ ಎಂದು ಶಾಸಕಿ ಡಾ| ಅಂಜಲಿ ನಿಂಬಾಳಕರ ಹೇಳಿದರು.

ಅವರು ಸೋಮವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿ, ದಿ| ನಟ ಪುನಿತ್‌ ನೇತ್ರದಾನ ಸ್ಟಾಲ್‌ ಕೂಡ ಹಾಕಿದ್ದು ಸಾರ್ವಜನಿಕರು ಆರೋಗ್ಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬೇಕು. ಮನುಷ್ಯ ಸತ್ತ ನಂತರ ದೇಹದಾನ, ಅಂಗಾಂಗ ದಾನ ಮಾಡುವದರ ಮೂಲಕ ಬೇರೆಯವರ ಬದುಕಿಗೆ ಪ್ರಯೋಜನವಾಗಬೇಕು. ಆರೋಗ್ಯ ಖಾತೆ ಬಗ್ಗೆ ನನಗೆ ವಿಶೇಷ ಪ್ರೇಮವಿದ್ದು ನನ್ನ ವೃತ್ತಿ ಕೂಡ ಇದಾಗಿದೆ. ಯಾವುದೇ ಸಮಯಕ್ಕೆ ಕರೆದರೂ ಒಬ್ಬ ವೈದ್ಯೆಯಾಗಿ ಸಹಕಾರ ನೀಡಲು ಸದಾ ಸಿದ್ಧ ಎಂದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಆರೋಗ್ಯ ವಿಷಯದಲ್ಲಿ ಬಹಳ ಮುಖ್ಯವಾಗಿದ್ದು ತಾಲೂಕಿನಲ್ಲಿ ಅವರು ಬಹು ದೊಡ್ಡ ಶಕ್ತಿಯಾಗಿದ್ದಾರೆ. ತಾಲೂಕಿನಲ್ಲಿ ಪತ್ರಿಯೊಬ್ಬರು ಉಚಿತವಾಗಿರುವ ಆರೋಗ್ಯ ಕಾರ್ಡ್‌ ಮಾಡಿಸುವಲ್ಲಿ ನಿರ್ಲಕ್ಷ ತೋರದೆ ತಕ್ಷಣ ಕಾರ್ಡ್‌ ಹೊಂದಬೇಕು. ತಮ್ಮ ಆರೋಗ್ಯದ ಹಿಂದಿನ ದಾಖಲೆಗಳು ಕೂಡ ಇದರಲ್ಲಿ ಸಂಗ್ರವಾಗಿರುತ್ತದೆ. ಬಿಪಿಎಲ್‌ ಕಾರ್ಡ ಹೊಂದಿದವರೆಗೆ 5 ಲಕ್ಷ ರೂ. ಮತ್ತು ಎಪಿಎಲ್‌ ಕಾರ್ಡ ಹೊಂದಿದವರಿಗೆ 1 ಲಕ್ಷ ರೂ.ವರೆಗೆ ಆರೋಗ್ಯ ಸೌಲಭ್ಯ ಇದೆ. ತಾಲೂಕಿನಲ್ಲಿ ಇಗಾಗಲೆ 60 ಹಾಸಿಗೆ ವ್ಯವಸ್ಥೆ ಇದ್ದು 100 ಹಾಸಿಗೆ ಆಸ್ಪತ್ರೆ ಬರುವುದರಿಂದ 160 ಹಾಸಿಗೆ ವ್ಯವಸ್ಥೆ ಸೌಲಭ್ಯ ಸಿಗಲಿದೆ. ಟಿಎಚ್‌ಒ ಡಾ. ಸಂಜು ನಾಂದ್ರೆ ಅವರ ಪರಿಶ್ರಮ ಸಹಕಾರದಿಂದ ಸಾಕಷ್ಟು ಸುಧಾರಣೆ ಮಾಡಲು ಸಾಧ್ಯವಾಗಿದೆ ಎಂದು ಪ್ರಂಶಸಿದರು.

ತಾಲೂಕಿನಲ್ಲಿ ಕೊರೊನಾ ಹಿಡಿತಕ್ಕೆ ತರುವಲ್ಲಿ ತಾಲೂಕಿನ ವೈದ್ಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸಿದ್ದರಲ್ಲದೆ ಆಕ್ಸಿಜನ್‌ ವಿತರಣೆ ಸಹಿತ ಸಮರ್ಪಕವಾಗಿ ನಿರ್ವಹಿಸಿದ್ದರಿಂದ ಸಾವು ಸಂಖ್ಯೆಗಳು ಅತ್ಯಂತ ಕಡಿಮೆಯಾಗಿತ್ತು. ಕೊವಿಡ್‌ ಸಂದರ್ಭದಲ್ಲಿ ನಿಧನ ಹೊಂದಿದ 10 ಜನರಿಗೆ ಮಾತ್ರ ಸರ್ಕಾರದ ಅನುದಾನ ದೊರಕಿದ್ದು, ಇನ್ನೂ 50 ಜನ ಪರಿಹಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ. ನೆರೆ ಹಾವಳಿಯಲ್ಲಿ ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂಪಾಯಿ ಮತ್ತು 1 ಲಕ್ಷ ರೂ. ಘೋಷಿಸಿದ್ದರು. ಜನರಿಗೆ ಇನ್ನೂ ಅನುದಾನವೇ ಸಿಕ್ಕಿಲ್ಲ ಎಂದು ಟೀಕಿಸಿದರು. ಶಾಸಕರು ಫಲಾನುಭವಿಗಳಿಗೆ ಎಬಿಎಆರ್‌ಕೆ ಕಾರ್ಡ್‌ ವಿತರಣೆ, ಮಕ್ಕಳಿಗೆ ಕಿಟ್‌ ವಿತರಣೆ, ಐಎಸಿ ಸಾಮಗ್ರಿ ವಿತರಿಸಿದರು. ಮೇಳದಲ್ಲಿ ಆರೋಗ್ಯ ಚಿಕಿತ್ಸೆ 2216 ಜನ, ಆರೋಗ್ಯ ಕಾರ್ಡ 3212,ಎಬಿಆರ್‌ಕೆ 800 ಜನರು ಪಡೆದು ಕೊಂಡರು. 101 ಜನರು ನೇತ್ರದಾನ ವಾಗ್ಧಾನ ಮಾಡಿದರು.

ಮೇಳದಲ್ಲಿ ಟಿಎಚ್‌ಒ ಡಾ|ಸಂಜು ನಾಂದ್ರೆ, ಹಲಸಿ ವೈದ್ಯಾಧಿಕಾರಿ, ಡಾ| ಮಂಜುನಾಥ ದಳವಾಯಿ,ಡಾ| ಸಂಜಯ್‌ ಡುಮ್ಮಗೊಳ,ಡಾ| ಪ್ರಭು ಬಿರಾದರ, ಡಾ| ಎಸ್‌.ವಿ.ಮನ್ಯಾಳ,ಡಸ| ಪವನ ಪೂಜಾರ, ಡಾ.|ಈಶ್ವರ ಗಡಾದ, ಪಪಂ ಸದಸ್ಯೆ ಮೇಘಾ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.